ಆ್ಯಪ್ನಗರ

ತರಕಾರಿಗೆ ಬೆಲೆ ಭರ್ಜರಿ; ಗ್ರಾಹಕರ ಜೇಬಿಗೆ ದುಬಾರಿ

ಲಗಮಣ್ಣಾ ಸಣ್ಣಲಚ್ಚಪ್ಪಗೋಳ ಬೆಳಗಾವಿ ದೇಶದ ಬೃಹತ್‌ ತರಕಾರಿ ಸಗಟು ಮಾರುಕಟ್ಟೆಗಳಲ್ಲಿ ಒಂದಾಗಿರುವ ...

Vijaya Karnataka 27 Jul 2019, 5:00 am
ಲಗಮಣ್ಣಾ ಸಣ್ಣಲಚ್ಚಪ್ಪಗೋಳ ಬೆಳಗಾವಿ
Vijaya Karnataka Web BEL-26 LBS 1

ದೇಶದ ಬೃಹತ್‌ ತರಕಾರಿ ಸಗಟು ಮಾರುಕಟ್ಟೆಗಳಲ್ಲಿ ಒಂದಾಗಿರುವ ಬೆಳಗಾವಿ ಮಾರುಕಟ್ಟೆಯಲ್ಲಿ ತರಕಾರಿಗಳ ಕೊರತೆ ಕಾಣಿಸಿದ್ದು, ಬೆಲೆ ಏರುಗತಿಯಲ್ಲಿ ಸಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಹೊರೆ ಬಿದ್ದಿದೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೊರತೆ ಹಾಗೂ ಮುಂಗಾರು ಮಳೆ ಒಂದು ತಿಂಗಳು ತಡವಾಗಿದ್ದರಿಂದ ರೈತರಿಗೆ ತರಕಾರಿ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ಸಗಟು ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಬರುತ್ತಿಲ್ಲ.

ಜುಲೈನಲ್ಲಿ ತರಕಾರಿ ಬೆಲೆ ಏರಿಕೆ ಕಾಣುವುದು ಸಾಮಾನ್ಯ. ಪ್ರತಿ ಸಲ ಕೆಜಿಗೆ 40-50 ರೂ.ವರೆಗೆ ತರಕಾರಿಗಳ ಬೆಲೆ ಏರಿಕೆ ಕಾಣುತ್ತಿತ್ತು. ಆದರೆ, ಈ ಬಾರಿ ಕೆಜಿಗೆ 70 ರೂ.ವರೆಗೆ ಏರಿಕೆಯಾಗಿರುವುದು ಸಾಮಾನ್ಯ ಜನರಿಗೆ ತರಕಾರಿ ದುಬಾರಿಯಾಗಿದೆ. ಬದನೆಕಾಯಿ, ಸವತೆಕಾಯಿ, ಹಾಗಲಕಾಯಿ, ಬೀನ್ಸ್‌ ಸೇರಿದಂತೆ ಅನೇಕ ತರಕಾರಿಗಳ ಬೆಲೆ ಪ್ರತಿ ಕೆಜಿಗೆ 40 ರಿಂದ 70 ರೂ.ವರೆಗೆ ಏರಿಕೆಯಾಗಿದೆ. ತರಕಾರಿ ದರ ಏರಿರುವುದು ಬೆಳೆಯುವ ರೈತರಿಗೆ ಸಿಹಿ ನೀಡಿದ್ದರೆ ಗ್ರಾಹಕರಿಗೆ ಕಹಿಯಾಗಿದೆ.

ಬೆಲೆ ದುಬಾರಿಯಾಗಿರುವುದರಿಂದ ಕೆಜಿವರೆಗೆ ತರಕಾರಿ ಖರೀದಿ ಮಾಡುತ್ತಿದ್ದ ಗ್ರಾಹಕರು ಈಗ ಅರ್ಧ ಕೆಜಿ, 250 ಗ್ರಾಂ ಮಾತ್ರ ಖರೀದಿ ಮಾಡುತ್ತಿದ್ದಾರೆ. ಗ್ರಾಹಕರು ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯನ್ನು ನಾಲ್ಕೈದು ವ್ಯಾಪಾರಸ್ಥರ ಬಳಿ ಕೇಳಿ ಖಚಿತಪಡಿಸಿಕೊಂಡು ಖರೀದಿಗೆ ಮುಂದಾಗುತ್ತಿದ್ದಾರೆ.

ಬೆಳಗಾವಿ ಮಾರುಕಟ್ಟೆಗೆ ಬೈಲಹೊಂಗಲ, ಖಾನಾಪುರ, ಹುಕ್ಕೇರಿ, ಗೋಕಾಕ, ಘಟಪ್ರಭಾ ಸೇರಿದಂತೆÜ ಜಿಲ್ಲೆಯ ವಿವಿಧ ಭಾಗಗಳಿಂದ ದಿನವೊಂದಕ್ಕೆ 150ಕ್ಕೂ ಹೆಚ್ಚು ಗೂಡ್ಸ್‌ ವಾಹನಗಳಲ್ಲಿ ತರಕಾರಿ ಬರುತ್ತದೆ. ಇದರಲ್ಲಿ ಶೇ. 60ರಷ್ಟು ತರಕಾರಿ ಗೋವಾ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹೋಗುತ್ತವೆ. ಇದರಿಂದ ಸ್ಥಳೀಯ ಮಾರುಕಟ್ಟೆಗೆ ತರಕಾರಿ ಕೊರತೆಯಾಗಿ ಬೆಲೆ ಏರಿಕೆಯಾಗಿದೆ.

ತರಕಾರಿ ಬೆಲೆ (ಕೆಜಿಗೆ-ರೂ.ಗಳಲ್ಲಿ)
ಸವತೆಕಾಯಿ 70 ರೂ.
ಬದನೆಕಾಯಿ 40 ರೂ.
ಹಾಗಲಕಾಯಿ 60 ರೂ.
ಬೀನ್ಸ್‌ 60 ರೂ.
ಈರುಳ್ಳಿ 30 ರೂ.
ಬಟಾಟೆ 40 ರೂ.
ಮೆಣಸಿಕಾಯಿ 40 ರೂ.
ಹೀರೆಕಾಯಿ 60 ರೂ.
ಬೆಂಡೆಕಾಯಿ 50 ರೂ.

ಈ ವೇಳೆ ತರಕಾರಿ ಮಾರುಕಟ್ಟೆ ಬರುವುದು ಕಡಿಮೆ. ಜತೆಗೆ ಮುಂಗಾರು ಪೂರ್ವ ಮಳೆ ಕೊರತೆ ಮತ್ತು ಮುಂಗಾರು ಮಳೆ ವಿಳಂಬದಿಂದ ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಹಾಗಾಗಿ ತರಕಾರಿ ಮಾರುಕಟ್ಟೆ ಹೆಚ್ಚು ಬರುತ್ತಿಲ್ಲ. ಇದರಿಂದ ತರಕಾರಿಗಳ ಬೆಲೆ ಹೆಚ್ಚಾಗಿದೆ.
-ಸಂಜಯ ಲೊಂಡೆ, ವ್ಯಾಪಾರಸ್ಥ

ಕೆಲ ತರಕಾರಿಗಳು ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಬೆಲೆ ಏರಿಕೆಯಾಗಿದೆ. ದಂಡು ಮಂಡಳಿ ಪ್ರದೇಶದಿಂದ ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಿರುವುದರಿಂದ ರೈತರು ಬೆಳೆಯುವ ತರಕಾರಿಗೆ ನ್ಯಾಯಯುತ ಬೆಲೆ ಸಿಗುತ್ತಿದೆ.
-ಶಿವಬಸವ ಅರಳೀಕಟ್ಟಿ, ಎಪಿಎಂಸಿ, ಸಹ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ