ಆ್ಯಪ್ನಗರ

ಅಪಘಾತ; ತಂದೆ ಎದುರೇ ಪ್ರಾಣಬಿಟ್ಟ ಮಗ

ತಂದೆ ಕಣ್ಮುಂದೆಯೇ ಮಗ ಪ್ರಾಣ ಬಿಟ್ಟ ಘಟನೆ ಗುರುವಾರ ಬೆಳಗ್ಗೆ ಇಲ್ಲಿನ ಝಾಡ್‌ ಶಹಾಪುರ ರಸ್ತೆಯಲ್ಲಿ ನಡೆದಿದೆ...

Vijaya Karnataka 15 Mar 2019, 5:00 am
ಬೆಳಗಾವಿ: ತಂದೆ ಕಣ್ಮುಂದೆಯೇ ಮಗ ಪ್ರಾಣ ಬಿಟ್ಟ ಘಟನೆ ಗುರುವಾರ ಬೆಳಗ್ಗೆ ಇಲ್ಲಿನ ಝಾಡ್‌ ಶಹಾಪುರ ರಸ್ತೆಯಲ್ಲಿ ನಡೆದಿದೆ. ಖಾನಾಪುರದ ರವಿವಾರ ಪೇಟೆಯ ಶುಭಂ ಪುಂಡಲೀಕ್‌ ಗುಂಜಿಕರ್‌(25) ಮೃತ ಯುವಕ.
Vijaya Karnataka Web son dies in front of his father in an accident
ಅಪಘಾತ; ತಂದೆ ಎದುರೇ ಪ್ರಾಣಬಿಟ್ಟ ಮಗ


ಇಲ್ಲಿನ ಉದ್ಯಮಬಾಗದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಂದೆ-ಮಗ ಎಂದಿನಂತೆ ಖಾನಾಪುರದಿಂದ ಬೆಳಗಾವಿಗೆ ಬೈಕ್‌ ಮೇಲೆ ಬರುವಾಗ ಹಿಂದಿನಿಂದ ಬಂದ ವಾಹನವೊಂದು ಗುದ್ದಿದೆ. ಈ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್‌ ಸವಾರರು ಇನ್ನೊಂದು ವಾಹನದ ಕೆಳಗೆ ಅಡಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಗಭೀರವಾಗಿ ಗಾಯಗೊಂಡಿದ್ದ ಶುಭಂ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ತಂದೆ ಪುಂಡಲೀಕ್‌ ಗುಂಜಿಕರ್‌ (54) ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ