ಆ್ಯಪ್ನಗರ

ಗಂಭೀರ ಪ್ರಕರಣಗಳ ಚಾರ್ಜ್‌ಶೀಟ್‌ ಸಲ್ಲಿಕೆಗೆ ವಿಶೇಷ ಅಭಿಯಾನ

-ಸುದ್ದಿಗೋಷ್ಠಿಯಲ್ಲಿ ಡಾ ಡಿಸಿ...

Vijaya Karnataka 19 Aug 2018, 5:00 am
ಬೆಳಗಾವಿ: ಅತ್ಯಾಚಾರ, ಪೋಕ್ಸೋ ಸೇರಿದಂತೆ ನಗರ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗುವ ಗಂಭೀರ ಪ್ರಕರಣಗಳ ಚಾರ್ಜ್‌ಶೀಟ್‌ ಸಲ್ಲಿಕೆ ವಿಳಂಬವಾಗುತ್ತಿವೆ ಎಂಬ ಆರೋಪಕ್ಕೆ ಪ್ರತಿಯಾಗಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಡಿ.ಸಿ. ರಾಜಪ್ಪ ಹೇಳಿದರು.
Vijaya Karnataka Web BLG-1808-2-52-18MAHESH3


ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನ್ಯಾಯಾಲಯಗಳಲ್ಲಿ ಕೊಲೆ, ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಅತಿ ಕಡಿಮೆ ಅವಧಿಯಲ್ಲಿ ಪ್ರಕರಣ ವಿಚಾರಣೆ ನಡೆದು ತೀರ್ಪು ಹೊರಬರುವುದರಿಂದ ಸಂತ್ರಸ್ತರಿಗೆ ನ್ಯಾಯ ಸಿಕ್ಕ ನೆಮ್ಮದಿ ಇರುತ್ತದೆ. ಅಲ್ಲದೆ, ತೀವ್ರಗತಿಯ ವಿಚಾರಣೆ ಕಾನೂನು ಮೀರುವವರಿಗೂ ಎಚ್ಚರಿಕೆ ಗಂಟೆಯಾಗಲಿದೆ. ಇದೇ ಕಾರಣಕ್ಕೆ ಚಾರ್ಜ್‌ಶೀಟ್‌ ಅಭಿಯಾನ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಎರಡು ವರ್ಷಗಳ ಹಿಂದೆ ನಡೆದ ಹನುಮಾನ ನಗರದ ಜನಾರ್ದನ ಭಟ್‌ ಮತ್ತು ಅರಣ್ಯಾಧಿಕಾರಿಯ ಪತ್ನಿ ಕೊಲೆ ಪ್ರಕರಣಗಳ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಲಾಗಿದ್ದು, ಶೀಘ್ರ ಇತ್ಯರ್ಥಗೊಳ್ಳಲಿದೆ ಎಂದರು.

ಕಚೇರಿ ನವೀಕರರಣ: ಪ್ರತಿ ವರ್ಷ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಇಲಾಖೆ ನೂರಾರು ಹಿರಿಯ ಅಧಿಕಾರಿಗಳು ಬೆಳಗಾವಿಗೆ ಆಗಮಿಸುತ್ತಾರೆ. ಅವರು ವಸತಿಗಾಗಿ ಖಾಸಗಿ ಹೋಟೆಲ್‌ಗಳನ್ನು ಆಶ್ರಯಿಸಬೇಕಾದ ಸ್ಥಿತಿ ಇದೆ. ಹಾಗಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಬಳಿಯ ಕಟ್ಟಡವನ್ನು ಬಳಕೆ ಮಾಡಲು ನಿರ್ಧರಿಸಿ, ಅನುದಾನ ಕೋರಿ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲದೆ, ಹಳೇ ಠಾಣೆಗಳಲ್ಲಿ ಒಂದಾಗಿರುವ ಮಾರ್ಕೆಟ್‌ ಮತ್ತು ಖಡೇ ಬಜಾರ್‌ ಪೊಲೀಸ್‌ ಠಾಣೆಗಳ ದುರಸ್ತಿಗೂ ಅನುದಾನ ಕೋರಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಕಮಿಷ್ನರೇಟ್‌ ಪ್ರತ್ಯೇಕಗೊಂಡಿದ್ದರೂ ನಗರದಲ್ಲಿನ ವಿದೇಶಿಗರನ್ನು ಗುರುತಿಸುವುದು ಎಸ್ಪಿ ನಿರ್ವಹಣೆಯಲ್ಲಿಯೇ ಮುಂದುವರಿಯುತ್ತಿದೆ. ಆದ್ದರಿಂದ, ಬೆಳಗಾವಿಯಲ್ಲಿ ನೆಲೆಸಿರುವ ವಿದೇಶಿಗರನ್ನು ಗುರುತಿಸುವುದು ಮತ್ತು ಅವರಿಗೆ ಸಂಬಂಧಿಸಿದ ದಾಖಲಾತಿ ಪರಿಶೀಲನೆ ನಗರ ಪೊಲೀಸ್‌ ಆಯುಕ್ತರ ಹೆಸರಿನಲ್ಲಿ ಡಿಜಿಟಲ್‌ ಸಹಿ ನೀಡುವಂತೆ ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ತಿಂಡಿ-ತಿನಿಸು ತಿಂದು ತ್ಯಾಜ್ಯವನ್ನು ರಸ್ತೆ ಮೇಲೆ ಎಸೆಯುವ ವಾಹನ ಸವಾರರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ 10.30 ಗಂಟೆಗೆ ನಗರದ ಚನ್ನಮ್ಮ ವೃತ್ತದಲ್ಲಿ ಉಚಿತ ಮಿನಿ ಡಸ್ಟ್‌ಬಿನ್‌ ವಿತರಣೆ ಮಾಡಲಾಗುವುದು. ಒಟ್ಟು 622 ಮಿನಿ ಡಸ್ಟ್‌ಬಿನ್‌ ವಿತರಣೆಗೆ ಮಾರವಾರಿ ಯುವ ಮಂಚ್‌, ಹೇಡಾ ಗ್ರಾನೈಟ್‌ ಸಂಸ್ಥೆಗಳು ಮುಂದೆ ಬಂದಿವೆ.
-ಡಾ. ಡಿ.ಸಿ.ರಾಜಪ್ಪ. ಪೊಲೀಸ್‌ ಆಯುಕ್ತರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ