ಆ್ಯಪ್ನಗರ

ಮೋದಿ ಅಭಿಮಾನಿಗಳಿಂದ ಬನ್ನಿ ಗಿಡಕ್ಕೆ ವಿಶೇಷ ಪೂಜೆ

ಬೈಲಹೊಂಗಲ : ಪಟ್ಟಣದ ಎಂಜೆ...

Vijaya Karnataka 24 May 2019, 5:00 am
ಬೈಲಹೊಂಗಲ : ಪಟ್ಟಣದ ಎಂ.ಜೆ.ಹೌಸಿಂಗ್‌ ಕಾಲೊನಿಯ ಈಟಿ ಬಸವೇಶ್ವರ ದೇವಸ್ಥಾನ ಹತ್ತಿರ ಮೋದಿ ಅಭಿಮಾನಿಗಳು ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗುವಂತೆ ಗುರುವಾರ ಪ್ರಾರ್ಥನೆ ಸಲ್ಲಿಸಿದರು.
Vijaya Karnataka Web BEL-23HTP1


ಹಣೆಗೆ ಕೇಸರಿ ತಿಲಕ ಇಟ್ಟುಕೊಂಡು ಶ್ರದ್ಧೆ, ಭಕ್ತಿಯಿಂದ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿವನಾಮ, ಶಿವಭಜನೆ, ಗಣಪತಿ ಸ್ತ್ರೋತ್ರ, ಮೃತ್ಯುಂಜಯ ಮಹಾಮಂತ್ರ, ಗಾಯತ್ರಿ, ಶಕ್ತಿದೇವಿ, ಸಂಜೀವಿನಿ ಮಂತ್ರ ಪಠಿಸಿದರು. ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾವುದೇ ವಿಘ್ನಗಳಿಲ್ಲದೆ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಗಣಪತಿ ದೇವರನ್ನು ಸ್ಮರಣೆ ಮಾಡಿದರು. ಮೋದಿ ಅಭಿಮಾನಿಗಳಾದ ಚನ್ನಬಸಪ್ಪ ಈಟಿ, ಪ್ರಕಾಶ ಅಸುಂಡಿ, ಚಂದ್ರು ಪಟ್ಟೇದ, ಬಸವರಾಜ ಹಣಸಿ, ರಮೇಶ ಪಾಟೀಲ, ಸಂಗಯ್ಯ ಪಾಟೀಲ, ವಿನೋದ ಹಿರೇಮಠ, ಗುರುರಾಜ ಈಟಿ, ಡಾ.ನಿಂಗಪ್ಪ ಸತ್ತಿಗೇರಿ ಹಾಗೂ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ