ಆ್ಯಪ್ನಗರ

ನಿಲುಗಡೆಯಾದ ಎಕ್ಸ್‌ಪ್ರೆಸ್‌ ರೈಲುಗಳಿಗೆ ವಿಶೇಷ ಪೂಜೆ

ರಾಯಬಾಗ: ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾದ ಲೋಕಮಾನ್ಯ ...

Vijaya Karnataka 7 Oct 2019, 5:00 am
ರಾಯಬಾಗ: ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾದ ಲೋಕಮಾನ್ಯ ತಿಲಕ ಟರ್ಮಿನಲ್‌(ಎಲ್‌ಟಿಟಿ) ರೈಲು ಹಾಗೂ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲುಗಳು ರಾಯಬಾಗ ನಿಲ್ದಾಣದಲ್ಲಿ ನಿಲುಗಡೆಯಾದ ಹಿನ್ನೆಲೆಯಲ್ಲಿಭಾನುವಾರ ಈ ರೈಲುಗಳಿಗೆ ಶಾಸಕ ಡಿ.ಎಂ.ಐಹೊಳೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದರು.
Vijaya Karnataka Web 6RAIBAG1PHOTO_53


ಈ ಸಂದರ್ಭದಲ್ಲಿ ಶಾಸಕ ಡಿ.ಎಂ.ಐಹೊಳೆ ಮಾತನಾಡಿ ಎಲ್‌ಟಿಟಿ ರೈಲು ಹಾಗೂ ಚಾಲುಕ್ಯ ಎಕ್ಸಪ್ರೆಸ್‌ ರೈಲುಗಳು ರಾಯಬಾಗ ನಿಲುಗಡೆಗೆ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದಿಸಿ ಸಚಿವ ಸುರೇಶ ಅಂಗಡಿಯವರು ನಾಲ್ಕು ರೈಲುಗಳಿಗೆ ರಾಯಬಾಗ ರೈಲು ನಿಲ್ದಾಣದಲ್ಲಿಒಂದು ನಿಮಿಷ ನಿಲುಗಡೆಗೆ ತಾತ್ಕಾಲಿಕ ಆದೇಶ ಹೊರಡಿಸಿರುವುದು ಅಭಿನಂದನಾರ್ಹ ಎಂದರು.

ರಾಯಬಾಗದಿಂದ ಹುಬ್ಬಳ್ಳಿ, ಮುಂಬಯಿ, ಬೆಂಗಳೂರು ಹಾಗೂ ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಈ ರೈಲುಗಳು ಅನುಕೂಲಕರವಾಗಲಿವೆ. ಆದ್ದರಿಂದ ಈ ರೈಲುಗಳನ್ನು ಕಾಯಂ ಆಗಿ ನಿಲುಗಡೆ ಮಾಡಲು ಶಾಸಕರು ರೇಲ್ವೆ ಸಚಿವರಲ್ಲಿಮನವಿ ಮಾಡಿಕೊಂಡರು.

ರೈಲು ನಿಲುಗಡೆಯಿಂದ ಸಂತೋಷಗೊಂಡ ಸಾರ್ವಜನಿಕರು ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಸಿಹಿ ಹಂಚಿದರು. ಸದಾನಂದ ಹಳಿಂಗಳೆ, ಸದಾಶಿವ ಘೋರ್ಪಡೆ, ಡಾ.ಅಜಿತ ನಾಯಿಕ, ಡಾ.ಆನಂದ ತೋರೋ, ಡಾ.ಸದಾನಂದ ನಾಯಿಕ, ಡಾ.ವಿನಾಯಕ ಕುಲಕರ್ಣಿ, ಅಣ್ಣಾಸಾಬ ಕುಲಗುಡೆ, ವಸಂತ ಹೊಸಮನಿ, ಅಣ್ಣಾಸಾಬ ಹೊನಕುಪ್ಪೆ, ನಾರಾಯಣ ಮೇತ್ರಿ, ರಾಮ ಹೊಸಮನಿ, ರಾಜು ದೇಶಪಾಂಡೆ, ವಿನಯ ಹೊನಕುಪ್ಪೆ, ಶಿವು ದೇಶಪಾಂಡೆ, ಸುರೇಶ ಮಾಳಿ, ಶಿವು ಮಗದುಮ್‌, ದಿನು ಕುಲಕರ್ಣಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ