ಆ್ಯಪ್ನಗರ

ವಿಟಿಯು: ಅಭಯ ಪಾಟೀಲ ಸಹಿ ಅಭಿಯಾನ

ವಿಟಿಯು ಒಡೆಯುವುದನ್ನು ತಡೆಯಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಶಾಸಕ ಅಭಯ ಪಾಟೀಲ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಶಾಸಕರ ಸಹಿ ಸಂಗ್ರಹ ನಡೆಸಿದ್ದಾರೆ...

Vijaya Karnataka 12 Feb 2019, 5:00 am
ಬೆಳಗಾವಿ: ವಿಟಿಯು ಒಡೆಯುವುದನ್ನು ತಡೆಯಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಶಾಸಕ ಅಭಯ ಪಾಟೀಲ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಶಾಸಕರ ಸಹಿ ಸಂಗ್ರಹ ನಡೆಸಿದ್ದಾರೆ. ವಿಟಿಯುನಲ್ಲಿ ದಕ್ಷಿಣ, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಸೇರಿಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಇಬ್ಬರಲ್ಲೂ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತಿದೆ. ನಾಡು, ನುಡಿಯ ಬೆಳವಣಿಗೆಗೆ ಇದು ಅಗತ್ಯ. ಇದನ್ನು ಉತ್ತೇಜಿಸಬೇಕೇ ವಿನಃ ವಿಭಜಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲು ಸೋಮವಾರ 23 ಶಾಸಕರ ಸಹಿ ಪಡೆದುಕೊಂಡಿದ್ದು, ಮಂಗಳವಾರ ಇನ್ನಷ್ಟು ಪಡೆದು ಒಟ್ಟು 50 ಶಾಸಕರ ಸಹಿ ಇರುವ ಮನವಿ ಸಲ್ಲಿಸಲಿದ್ದಾರೆ. ಈಗ ಸಹಿ ಮಾಡಿದವರಲ್ಲಿ ದಕ್ಷಿಣ ಕರ್ನಾಟಕದ ಶಾಸಕರೂ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.
Vijaya Karnataka Web split of vtu signature campaign by mla abhay patil
ವಿಟಿಯು: ಅಭಯ ಪಾಟೀಲ ಸಹಿ ಅಭಿಯಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ