ಆ್ಯಪ್ನಗರ

ಕೆಎಲ್‌ಇ ಕಾರ‍್ಯ ಶ್ಲಾಘಿಸಿದ ಶೃಂಗೇರಿ ಜಗದ್ಗುರುಗಳು

ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಕೆಎಲ್‌ಇ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Vijaya Karnataka 1 Dec 2018, 5:00 am
ಬೆಳಗಾವಿ: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಕೆಎಲ್‌ಇ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
Vijaya Karnataka Web BLG-3011-2-52-30RAJU-2


ಶುಕ್ರವಾರ ನಗರದ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು, ಆಸ್ಪತ್ರೆಯ ಎಲ್ಲ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯು ಸತ್ಯ, ಪ್ರೇಮ, ನಿಸ್ವಾರ್ಥದ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಮಾದರಿಯಾಗಿದ್ದು, ಜಾಗತಿಕವಾಗಿ ಗುರುತಿಸಿಕೊಂಡಿದೆ. ಜ್ಞಾನ ದಾಸೋಹದ ಮೂಲಕ ಎಲ್ಲರಲ್ಲೂ ಜಾಗೃತಿ ತಂದಿದ್ದು, ಆರೋಗ್ಯ ಸೇವೆಯ ಮೂಲಕ ಭದ್ರತಾ ಭಾವ ಮೂಡಿಸಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಆಸ್ಪತ್ರೆಯ ವಿವರ ನೀಡಿದರು. ಶ್ರೀಗಳು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಆಶೀರ್ವದಿಸಿ ಹಣ್ಣು ವಿತರಿಸಿದರು. ಡಾ.ರಾಜಶೇಖರ ಸೋಮನಟ್ಟಿ, ವಿನಯ ಬೆದ್ರೆ, ರಾಜೀವ ಪಲ್ಲೇದ, ರವಿ ಸಂಕೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

ಗುರುಸೇವಾ ಸಮಿತಿಯ ಚೇರ್ಮನ್‌ ಎಸ್‌.ಎಂ. ಕುಲಕರ್ಣಿ, ಅಧ್ಯಕ್ಷ ಸುರೇಂದ್ರ ಅನಗೋಳಕರ್‌, ಉಪಾಧ್ಯಕ್ಷ ಎಸ್‌.ಎಂ. ಶೆಟ್ಟಿ, ಕಾರ್ಯದರ್ಶಿ ಡಾ. ಅನಿಲ ಅಂಕೋಲಾ, ಜಂಟಿ ಕಾರ್ಯದರ್ಶಿ ಸದಾಶಿವ ನಾಯಕ ಮತ್ತಿತರರು ಆಯಾ ಸಮಾರಂಭಗಳಲ್ಲಿ ಉಪಸ್ಥಿತರಿದ್ದರು.

ನಾನಾ ಕಾರ‍್ಯಕ್ರಮ
ಶ್ರೀಗಳು ಶುಕ್ರವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬೆಳಗ್ಗೆ ವಡಗಾವಿಯ ವೆಂಕಟರಮಣ ದೇವಸ್ಥಾನ ದರ್ಶನ ಮಾಡಿದರು. ಅಲ್ಲಿಂದ ಭಾಗ್ಯನಗರದ ಸಿಟಿ ಹಾಲ್‌ಗೆ ಬಂದು ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು. ನಂತರ ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿದರು. ಮಧ್ಯಾಹ್ನದ ನಂತರ ಬ್ರಾಹ್ಮಣ ಸಮಾಜದವರು ನಿರ್ಮಿಸುತ್ತಿರುವ ಗಾಯತ್ರಿ ಭವನ ಸ್ಥಳಕ್ಕೆ ಭೇಟಿ ನೀಡಿ ಶುಭಹಾರೈಸಿದರು. ಬಳಿಕ ಕೊಲ್ಲಾಪುರಕ್ಕೆ ಯಾತ್ರೆ ಗೈದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ