ಆ್ಯಪ್ನಗರ

ಸಾಂಕ್ರಾಮಿಕ ರೋಗ ಹತೋಟಿಗೆ ತಾಕೀತು

ಬೆಳಗಾವಿ: ಡೆಂಘೆ, ಚಿಕೂನ್‌ ಗುನ್ಯಾ ಮತ್ತು ...

Vijaya Karnataka 14 Jun 2018, 5:00 am
ಬೆಳಗಾವಿ: ಡೆಂಘೆ, ಚಿಕೂನ್‌ ಗುನ್ಯಾ ಮತ್ತು ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ಎಲ್ಲ ವಾರ್ಡ್‌ಗಳಲ್ಲೂ ಕ್ರಿಮಿನಾಶಕ ಸಿಂಪರಣೆ, ಫಾಗಿಂಗ್‌ ಮತ್ತು ಇತರೆ ಚಟುವಟಿಕೆಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಪಾಲಿಕೆ ಸದಸ್ಯರು ತಾಕೀತು ಮಾಡಿದ್ದಾರೆ.
Vijaya Karnataka Web standing instruction to control contagious disease
ಸಾಂಕ್ರಾಮಿಕ ರೋಗ ಹತೋಟಿಗೆ ತಾಕೀತು


ಪಾಲಿಕೆ ಪರಿಷತ್‌ ಭವನದಲ್ಲಿ ಬುಧವಾರ ನಡೆದ ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಇದಕ್ಕೆ ಒತ್ತು ನೀಡಿ ಚರ್ಚಿಸಲಾಯಿತು.

ನಗರದ ಬಹುತೇಕ ಕಡೆಗೆ ಚಿಕೂನ್‌ಗುನ್ಯಾ ಜ್ವರ ಕಾಣಿಸಿಕೊಂಡಿದೆ. ಅಧಿಕಾರಿಗಳು ಈ ರೋಗ ಬರುವ ಮೊದಲೇ ಕ್ರಮ ಜರುಗಿಸಬೇಕಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಸದಸ್ಯರು, ಇನ್ನಾದರೂ ಅದು ವಿಸ್ತರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ನಿಯಂತ್ರಣ ಹಾಗೂ ಸ್ವಚ್ಛತೆ ಕೆಲಸಗಳು ಚುರುಕು ಪಡೆಯಬೇಕು. ಮಳೆಗಾಲದ ಈ ದಿನಗಳಲ್ಲಿ ಸಾರ್ವಜನಿಕರಿಗೆ ತಾಪತ್ರಯವಾಗದಂತೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳು ತಾವು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ವಿವರಣೆ ನೀಡಿದರು. ಇನ್ನು ಮುಂದೆ ಹೀಗಾಗದಂತೆ ಜಾಗೃತೆ ವಹಿಸುವ ಭರವಸೆ ನೀಡಿದರು. ಶೇ.3ರ 1, ಶೇ. 24.10ರ 35 ಹಾಗೂ ಶೇ. 7.25ರ ಅನುದಾನದ 18 ಫಲಾನುಭವಿಗಳ ಅರ್ಜಿಗಳಿಗೆ ಅಂಗೀಕಾರ ನೀಡಲಾಯಿತು. ಜನನ-ಮರಣಗಳ ದಾಖಲೆಗಳನ್ನು ಲ್ಯಾಮಿನೇಶನ್‌ ಮಾಡಿ ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡಲು ಟೆಂಡರ್‌ ಕರೆಯಲು ಒಪ್ಪಿಗೆ ನೀಡಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಬಿರ್ಜೆ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಮಧುಶ್ರೀ ಪೂಜಾರ, ಸದಸ್ಯರಾದ ರವಿ ಧೋತ್ರೆ, ವಿಜಯ ಭೋಸಲೆ, ಮನೋಹರ ಹಲಗೇಕರ್‌, ಸುಧಾ ಬಾತಕಾಂಡೆ, ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ, ಕೌನ್ಸಿಲ್‌ ಕಾರ್ಯದರ್ಶಿ ಲಕ್ಷ್ಮೇ ನಿಪ್ಪಾಣಿಕರ್‌, ಆರೋಗ್ಯ ನಿರೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ