ಆ್ಯಪ್ನಗರ

ರಾಷ್ಟ್ರಮಟ್ಟದ ಬೆಸ್ಟ್‌ ಡೀಲರ್‌ ಪ್ರಶಸ್ತಿ ಪ್ರದಾನ

ಚಿಕ್ಕೋಡಿ: ಇಲ್ಲಿನ ವಿಭಾಶ್ರೀ ಹೋಂಡಾ ಮುಖ್ಯಸ್ಥ ಸಂಕೇತ ವಿಜಯ ಮಾಂಜರೇಕರ ಅವರಿಗೆ ರಾಷ್ಟ್ರಮಟ್ಟದ ...

Vijaya Karnataka 25 Jun 2019, 5:00 am
ಚಿಕ್ಕೋಡಿ: ಇಲ್ಲಿನ ವಿಭಾಶ್ರೀ ಹೋಂಡಾ ಮುಖ್ಯಸ್ಥ ಸಂಕೇತ ವಿಜಯ ಮಾಂಜರೇಕರ ಅವರಿಗೆ ರಾಷ್ಟ್ರಮಟ್ಟದ 'ಬೆಸ್ಟ್‌ ಡೀಲರ್‌ ಇನ್‌ ಸೌಥ್‌ ಇಂಡಿಯಾ ಇನ್‌ ಸಿ.ಎಸ್‌.ಐ.' ಪ್ರಶಸ್ತಿ ಲಭಿಸಿದೆ. ಆ ಮೂಲಕ, ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಚಿಕ್ಕೋಡಿಯಂತಹ ಸಣ್ಣ ಪಟ್ಟಣವೊಂದರ ದ್ವಿಚಕ್ರ ವಾಹನ ವಿತರಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರಕಿದೆ.
Vijaya Karnataka Web BEL-24CKD3


ಗ್ರಾಹಕರಿಗೆ ಉತ್ತಮ ಸೇವೆ ನೀಡುವ ವಿತರಕರಿಗೆ ಹೋಂಡಾ ಮೋಟರ್‌ಸೈಕಲ್‌ ಇಂಡಿಯಾ ಕಂಪನಿಯಿಂದ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷ ವಿಭಾಶ್ರೀ ಹೋಂಡಾ ವಿತರಕರಿಂದ ಸೇವೆ ಪಡೆದ ಸುಮಾರು 60 ಸಾವಿರ ಗ್ರಾಹಕರಲ್ಲಿ 500 ಆಯ್ದ ಗ್ರಾಹಕರನ್ನು ಪ್ರತ್ಯಕ್ಷ ವಾಗಿ ಸಂಪರ್ಕಿಸಿದ ಹೋಂಡಾ ಕಂಪನಿ, ನಂತರ ಸಂಕೇತ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹೋಂಡಾ ವಿತರಕರ ವಾರ್ಷಿಕ ಸಮ್ಮೇಳನದಲ್ಲಿ ಕಂಪನಿಯ ಗ್ರಾಹಕ ಸೇವಾ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರದೀಪಕುಮಾರ ಪಾಂಡೆ, ಗ್ರಾಹಕರ ಯೋಗಕ್ಷೇಮ ವಿಭಾಗದ ಹಿರಿಯ ನಿರ್ದೇಶಕ ಜಿ. ವಿ. ಜೋಶಿ ಅವರು ಸಂಕೇತ ವಿಜಯ ಮಾಂಜರೇಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ