ಆ್ಯಪ್ನಗರ

ಕಿತ್ತೂರಿನಲ್ಲಿ ರಾಜ್ಯಮಟ್ಟದ ಇತಿಹಾಸ ಸಮ್ಮೇಳನ

ಬೆಳಗಾವಿ: ಇತಿಹಾಸಕ್ಕೆ ಸಂಬಂಧಿಸಿದ ...

Vijaya Karnataka 24 Aug 2019, 5:00 am
ಬೆಳಗಾವಿ: ಇತಿಹಾಸಕ್ಕೆ ಸಂಬಂಧಿಸಿದ ರಾಜ್ಯಮಟ್ಟದ ಸಮ್ಮೇಳನವೊಂದನ್ನು ಕಿತ್ತೂರಿನಲ್ಲಿ ಏರ್ಪಡಿಸುವ ಚಿಂತನೆಯಿದ್ದು, ನೆರೆ ಹಾವಳಿ ಸಮಸ್ಯೆ ಮುಗಿದ ನಂತರ ಈ ಕುರಿತು ನಿರ್ಣಯಿಸಲಾಗುವುದು ಎಂದು ರಾಜ್ಯ ಕಸಾಪ ಅಧ್ಯಕ್ಷ ಮನು ಬಳಿಗಾರ ಹೇಳಿದರು.
Vijaya Karnataka Web BLG-2308-2-52-23RAJU-3


ಇಲ್ಲಿನ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕುಗಳ ಕಸಾಪ ಪದಾಧಿಕಾರಿಗಳ ಸಭೆ ನಡೆಸಿದ ಅವರು, ಕಸಾಪ ರಾಜ್ಯದ ನಾನಾ ಕಡೆಗೆ ರಾಜ್ಯಮಟ್ಟದ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ಅದರಂತೆ ಕಿತ್ತೂರಿನಲ್ಲೂ ಹಮ್ಮಿಕೊಳ್ಳಲಾಗುವುದು ಎಂದರು.

ಗಡಿ ನೆಲದಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ರಾಜ್ಯ ಕಸಾಪ ಹೆಸರಿಗೆ ಜಾಗ ಹಸ್ತಾಂತರ ಮಾಡಿದರೆ ತಾಲೂಕು ಮಟ್ಟದಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ತಾಲೂಕು ಕಸಾಪ ಹೆಸರಿಗೆ ಜಾಗ ಇದ್ದರೆ ಅನುದಾನ ಬಿಡುಗಡೆಗೆ ತಾಂತ್ರಿಕ ಅಡಚಣೆ ಆಗುತ್ತದೆ. ಪದಾಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.

ಪರಿಷತ್‌ ಕಾರ್ಯಕ್ರಮಗಳು, ಅನುದಾನ, ದಾನಿಗಳು, ಪದಾಧಿಕಾರಿಗಳು ಮಾಡಬೇಕಾದ ಕೆಲಸಗಳ ಕುರಿತು ಬಳಿಗಾರ ತಿಳಿಸಿಕೊಟ್ಟರು. ಆಯಾ ತಾಲೂಕು ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಭಾಗದ ವಿಷಯಗಳ ಕುರಿತು ರಾಜ್ಯಾಧ್ಯಕ್ಷರ ಗಮನ ಸೆಳೆದರು.

ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ, ಮಾಜಿ ಅಧ್ಯಕ್ಷ ಯ.ರು. ಪಾಟೀಲ, ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಜ್ಯೋತಿ ಬದಾಮಿ, ಪ್ರಕಾಶ ದೇಶಪಾಂಡೆ, ಡಾ. ಶೇಖರ ಹಲಸಗಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ