ಆ್ಯಪ್ನಗರ

ರಾಜ್ಯ ಮಟ್ಟದ ಪಗಡಿ ಪಂದ್ಯಾವಳಿ

ಶಿರಸಂಗಿ: ಗ್ರಾಮೀಣ ಕ್ರೀಡೆಯ ಉಳಿವು ಗ್ರಾಮೀಣ ಜನರಿಂದಲೇ ಸಾಧ್ಯ ಎಂದು ಶಾಸಕ ಆನಂದ ಮಾಮನಿ ಹೇಳಿದರು...

Vijaya Karnataka 26 Jan 2019, 5:00 am
ಶಿರಸಂಗಿ : ಗ್ರಾಮೀಣ ಕ್ರೀಡೆಯ ಉಳಿವು ಗ್ರಾಮೀಣ ಜನರಿಂದಲೇ ಸಾಧ್ಯ ಎಂದು ಶಾಸಕ ಆನಂದ ಮಾಮನಿ ಹೇಳಿದರು.
Vijaya Karnataka Web BEL-25-SHIRASANGI-1


ಸಮೀಪದ ಕಲ್ಲಾಪುರ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಕಲ್ಮೇಶ್ವರ ಜೀರ್ಣೋದ್ಧಾರ ಕಮಿಟಿ ಹಾಗೂ ಕಲ್ಮೇಶ್ವರ ಪಗಡಿ ತಂಡದವರು ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಮತ, ಪಂಥವನ್ನು ಬಿಟ್ಟು ಇಂತಹ ಕ್ರೀಡೆಗಳನ್ನು ಆಯೋಜಿಸಿದ್ದು ಹೆಮ್ಮೆಯ ವಿಷಯ. ಪಗಡಿ ಪಂದ್ಯಾವಳಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದರು.

ಗುರುಪಾದಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಕಮಿಟಿ ಅಧ್ಯಕ್ಷ ಫಕೀರಪ್ಪ ಓಗಳಾಪೂರ ಅಧ್ಯಕ್ಷ ತೆ ವಹಿಸಿದ್ದರು. ಸವದತ್ತಿ ಎಪಿಎಮ್‌ಸಿ ಅಧ್ಯಕ್ಷ ಜಗದೀಶ ಹನಸಿ, ತಾಪಂ ಹಾಗೂ ಪಿಕೆಪಿಎಸ್‌ ಅಧ್ಯಕ್ಷ ಮಹಾರಾಜ ಕಣವಿ, ಬಿ.ಎಚ್‌. ಪೂಜಾರ, ಮಾನಪ್ಪ ಪತ್ತಾರ, ವಿ.ವಿ. ವೀರನಗೌಡ್ರ, ಸಿದ್ದಪ್ಪ ಮಲ್ಲಾಡ, ಮಲ್ಲಪ್ಪ ಗುರ್ಲಕಟ್ಟಿ, ಎಮ್‌.ಎಸ್‌. ಹತ್ತಿ, ಗದಿಗೆಪ್ಪ ಕುಂಬಾರ, ಶಂಕ್ರೆಪ್ಪಾ ಚಿಕ್ಕುಂಬಿ, ಆರ್‌.ಬಿ. ಈಟಿ, ಮಲ್ಲಿಕಾರ್ಜುನ ಗೊರವನಕೊಳ್ಳ, ಚಂದ್ರು ಹೂಲಿ, ಮಹಾಂತೇಶ ಪಂಚೇನವರ, ಭೀಮಶಿ ಹೂಗಾರ ಮತ್ತಿತರರು ಉಪಸ್ಥಿತರಿದ್ದರು. ಎಚ್‌.ಕೆ. ಗುರ್ಲಕಟ್ಟಿ ನಿರೂಪಿಸಿದರು. ವಿ.ವಿ.ವೀರನಗೌಡ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ