ಆ್ಯಪ್ನಗರ

ರಾಜ್ಯ ಮಟ್ಟದ ಕುಸ್ತಿ: ದಾವಣಗೆರೆಗೆ ವೀರಾಗ್ರಣಿ ಪ್ರಶಸ್ತಿ

ಯರಗಟ್ಟಿ: ಸ್ಥಳೀಯ ಎಸ್‌ಬಿ...

Vijaya Karnataka 29 Oct 2018, 5:00 am
ಯರಗಟ್ಟಿ: ಸ್ಥಳೀಯ ಎಸ್‌.ಬಿ. ದೇಸಾಯಿ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷ ಣ ಇಲಾಖೆ ಹಾಗೂ ಶ್ರೀಮಂತ ಬೋಗರಾಜ ದೇಸಾಯಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ 2018-19ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬೆಲ್ಟ್‌ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾಪಟುಗಳು ನಾಲ್ಕು ಚಿನ್ನ, ಎರಡು ಬೆಳ್ಳಿ ಪದಕ ಸೇರಿ ಒಟ್ಟು 26 ಅಂಕಗಳನ್ನು ಪಡೆದು ವೀರಾಗ್ರಣಿ ಪ್ರಶಸ್ತಿ ಬಾಚಿಕೊಂಡರು.
Vijaya Karnataka Web BEL-28YGTPHOTO1


ಬೆಲ್ಟ್‌ ಕುಸ್ತಿ ವಿದ್ಯಾರ್ಥಿನಿಯರ 35 ಕೆಜಿ ವಿಭಾಗದಲ್ಲಿ ದಾವಣಗೇರಿಯ ಕಾವ್ಯಾ ಎ., 40ಕೆಜಿ ವಿಭಾಗದಲ್ಲಿ ಶೈಲಾ ಕೆ., 45ಕೆಜಿ ವಿಭಾಗದಲ್ಲಿ ಮಂಗಳೂರ ಶೌರ್ಯಾ, 50ಕೆಜಿ ವಿಭಾಗದಲ್ಲಿ ಬೆಳಗಾವಿಯ ಶೀತಲ ಯಳ್ಳೂರಕರ, 55ಕೆಜಿ ವಿಭಾಗದಲ್ಲಿ ಬೆಳಗಾವಿಯ ಶೀತಲ ಪಾಟೀಲ, 55ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಮಂಗಳೂರಿನ ದಿವ್ಯಾ ಬಿ. ಚಿನ್ನದ ಪದಕಗಳನ್ನು ಪಡೆದರು.

ವಿದ್ಯಾರ್ಥಿಗಳ 40ಕೆಜಿ ವಿಭಾಗದಲ್ಲಿ ಬಾಗಲಕೋಟದ ಮಂಜುನಾಥ ಜೆ., 45ಕೆಜಿ ವಿಭಾಗದಲ್ಲಿ ಬಾಗಲಕೋಟದ ಪ್ರಭು ಜೆ., 50ಕೆಜಿ ವಿಭಾಗದಲ್ಲಿ ದಕ್ಷಿಣಕನ್ನಡದ ಪ್ರಕಾಶ ಎಚ್‌.ಆರ್‌, 55ಕೆಜಿ ವಿಭಾಗದಲ್ಲಿ ದಾವಣಗೆರೆಯ ಉಮೇಶ ಬಿ., 60ಕೆಜಿ ವಿಭಾಗದಲ್ಲಿ ದಾವಣಗೆರೆಯ ಮಧುನಾಯ್ಕ, 65ಕೆಜಿ ವಿಭಾಗದಲ್ಲಿ ದಾರವಾಡದ ಈಶ್ವರ ಡಾಂಗಿ, 70ಕೆಜಿ ವಿಭಾಗದಲ್ಲಿ ಬೆಳಗಾವಿಯ ಕಾರ್ತಿಕ ಗುರೋಳ, 70ಕೆಜಿಗಿಂತ ಮೇಲ್ಪಟ್ಟ ಬೆಲ್ಪ್‌ ಕುಸ್ತಿಯಲ್ಲಿ ಚಿಕ್ಕೋಡಿಯ ಪ್ರಕಾಶ ಪಾಟೀಲ ಚಿನ್ನದ ಪದಕ ಪಡೆದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಾ. ಎಸ್‌.ಎಂ. ಅರಳಿಮಟ್ಟಿ, ಪದವಿ ಪೂರ್ವ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ವಿ.ಜಿ. ರಜಪೂತ, ಅಲ್ತಾಫ ಮುಲ್ಲಾ, ಸಿ. ರಾಮರಾವ್‌, ಗಣಾಚಾರಿ, ಆರ್‌.ಎಚ್‌. ಪಾಟೀಲ, ಎಂ.ಎಸ್‌. ಜಾವೂರ, ಎಂ.ಡಿ. ಸರದಾರ, ಮಾರುತಿ ಪಾಟೀಲ, ಮನೂಕುಮಾರ ಶಾಂತಿಮಠ, ಸನಾ ರಾಜಾಪುರಿ ಹಾಗೂ ಮೈಸೂರ, ಮಂಡ್ಯ, ಬೆಂಗಳೂರು, ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ, ಹಾಸನ, ವಿಜಯಪುರ, ಬಾಗಲಕೋಟ, ಧಾರವಾಡ, ಶಿವಮೊಗ್ಗ ಸೇರಿದಂತೆ ನಾನಾ ಜಿಲ್ಲೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ