ಖಾನಾಪುರ, ಕಾಗವಾಡ ಅಧ್ಯಕ್ಷರ ಅಮಾನತ್ತಿಗೆ ರಾಜ್ಯಾಧ್ಯಕ್ಷರಿಂದ ನಿರ್ದೇಶನ
ಬೈಲಹೊಂಗಲ : ಖಾನಾಪುರ ಮತ್ತು ಕಾಗವಾಡ ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ರ ಆಯ್ಕೆ ನ್ಯಾಯ ಸಮ್ಮತವಾಗಿಲ್ಲದ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ...
Vijaya Karnataka 20 Dec 2018, 5:00 am
ಬೈಲಹೊಂಗಲ: ಖಾನಾಪುರ ಮತ್ತು ಕಾಗವಾಡ ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ರ ಆಯ್ಕೆ ನ್ಯಾಯ ಸಮ್ಮತವಾಗಿಲ್ಲದ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಕೂಲಂಕಷ ವಿಚಾರಣೆ ನಡೆದು ನ್ಯಾಯ ನಿರ್ಣಯ ಆಗುವವರೆಗೆ ಈ ಇಬ್ಬರು ಅಧ್ಯಕ್ಷ ರನ್ನು ಅಮಾನತ್ತಿನಲ್ಲಿ ಇಡಬೇಕೆಂದು ಕರ್ನಾಟಕ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮು ನಿರ್ದೇಶಿಸಿದ್ದಾರೆ.
''ಈ ಬಗ್ಗೆ ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಅವರಿಗೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಂತೆ ರಾಮು ತಿಳಿಸಿದ್ದಾರೆ. ಕಾಗವಾಡ, ಖಾನಾಪುರ ಅಧ್ಯಕ್ಷ ರ ನೇಮಕ ಅಕ್ರಮದ ಬಗ್ಗೆ ಆಯಾ ಭಾಗದ ಸರಕಾರಿ ನೌಕರರ ಮನವಿ ಪರಿಗಣಿಸಲಾಗಿದೆ. ರಾಜ್ಯಾಧ್ಯಕ್ಷ ರು ಈ ವಿಷಯದಲ್ಲಿ ಸತ್ಯಾಂಶವಿರುವುದನ್ನು ಅರಿತುಕೊಂಡು ಸ್ಪಂದನೆ ನೀಡಿದ್ದಾರೆ. ಕಾಗವಾಡದ ಸೆಡ್ಡಿ ಮತ್ತು ಖಾನಾಪುರದ ಪತ್ತಾರ ಅವರು ಜಿಲ್ಲಾಧ್ಯಕ್ಷ ರ ಏಕಪಕ್ಷೀಯ ನಿರ್ಣಯಗಳನ್ನು ಮುಚ್ಚಿ ಹಾಕಲು ಇಲ್ಲಸಲ್ಲದ ಪ್ರಯತ್ನ ನಡೆಸಿ ಪತ್ರಿಕಾ ಹೇಳಿಕೆ ನೀಡಿದ್ದು ಸರಿಯಾದ ಕ್ರಮ ಆಗಿರಲಿಲ್ಲ. ರಾಜ್ಯಾಧ್ಯಕ್ಷ ರ ಅಮಾನತ್ತು ಆದೇಶ ನೌಕರರಲ್ಲಿ ಖುಷಿ ತಂದಿದ್ದು ಜಿಲ್ಲಾಧ್ಯಕ್ಷ ರು ಶೀಘ್ರ ಕ್ರಮ ಜರುಗಿಸಬೇಕು'', ಎಂದು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕ ಶಿವಾನಂದ ಕುಡಸೋಮಣ್ಣವರ ಹೇಳಿದ್ದಾರೆ.
''ಈ ಬಗ್ಗೆ ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಅವರಿಗೆ ಪತ್ರ ಬರೆದಿದ್ದು ಕ್ರಮ ಕೈಗೊಳ್ಳುವಂತೆ ರಾಮು ತಿಳಿಸಿದ್ದಾರೆ. ಕಾಗವಾಡ, ಖಾನಾಪುರ ಅಧ್ಯಕ್ಷ ರ ನೇಮಕ ಅಕ್ರಮದ ಬಗ್ಗೆ ಆಯಾ ಭಾಗದ ಸರಕಾರಿ ನೌಕರರ ಮನವಿ ಪರಿಗಣಿಸಲಾಗಿದೆ. ರಾಜ್ಯಾಧ್ಯಕ್ಷ ರು ಈ ವಿಷಯದಲ್ಲಿ ಸತ್ಯಾಂಶವಿರುವುದನ್ನು ಅರಿತುಕೊಂಡು ಸ್ಪಂದನೆ ನೀಡಿದ್ದಾರೆ. ಕಾಗವಾಡದ ಸೆಡ್ಡಿ ಮತ್ತು ಖಾನಾಪುರದ ಪತ್ತಾರ ಅವರು ಜಿಲ್ಲಾಧ್ಯಕ್ಷ ರ ಏಕಪಕ್ಷೀಯ ನಿರ್ಣಯಗಳನ್ನು ಮುಚ್ಚಿ ಹಾಕಲು ಇಲ್ಲಸಲ್ಲದ ಪ್ರಯತ್ನ ನಡೆಸಿ ಪತ್ರಿಕಾ ಹೇಳಿಕೆ ನೀಡಿದ್ದು ಸರಿಯಾದ ಕ್ರಮ ಆಗಿರಲಿಲ್ಲ. ರಾಜ್ಯಾಧ್ಯಕ್ಷ ರ ಅಮಾನತ್ತು ಆದೇಶ ನೌಕರರಲ್ಲಿ ಖುಷಿ ತಂದಿದ್ದು ಜಿಲ್ಲಾಧ್ಯಕ್ಷ ರು ಶೀಘ್ರ ಕ್ರಮ ಜರುಗಿಸಬೇಕು'', ಎಂದು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕ ಶಿವಾನಂದ ಕುಡಸೋಮಣ್ಣವರ ಹೇಳಿದ್ದಾರೆ.