ಆ್ಯಪ್ನಗರ

ಮೈನವಿರೇಳಿಸಿದ ಗುಂಡು ಕಲ್ಲು ಎತ್ತುವ ಸ್ಪರ್ಧೆ

ಮಲ್ಲಮ್ಮನ ಬೆಳವಡಿ: ಬೆಳವಡಿ ಮಲ್ಲಮ್ಮನ ಉತ್ಸವ ನಿಮಿತ್ತ ಇಲ್ಲಿನ ಈಶಪ್ರಭು ಶಿಕ್ಷ ಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ...

Vijaya Karnataka 2 Mar 2019, 5:00 am
ಮಲ್ಲಮ್ಮನ ಬೆಳವಡಿ: ಬೆಳವಡಿ ಮಲ್ಲಮ್ಮನ ಉತ್ಸವ ನಿಮಿತ್ತ ಇಲ್ಲಿನ ಈಶಪ್ರಭು ಶಿಕ್ಷ ಣ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಂಗ್ರಾಣಿ (ಗುಂಡು) ಕಲ್ಲು ಎತ್ತುವ ಸ್ಪರ್ಧೆ ಕ್ರೀಡಾಭಿಮಾನಿಗಳ ಮೈನವಿರೇಳಿಸುವಂತೆ ಮಾಡಿತು.
Vijaya Karnataka Web BEL-1 HTP 2


ಕಟ್ಟು ಮಸ್ತಾದ ದೇಹದಾಢ್ರ್ಯ ಹೊಂದಿದ್ದ ಪೈಲ್ವಾನರು ನೂರಾರು ಕೆಜಿ ಭಾರದ ಗುಂಡು ಕಲ್ಲುಗಳನ್ನು ಎತ್ತಿ ಎಸೆಯುತ್ತಿದ್ದರೆ ಸುತ್ತಲೂ ನಿಂತು ನೋಡುತ್ತಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಸ್ಪರ್ಧೆಯಲ್ಲಿ ಅಥಣಿ ತಾಲೂಕಿನ ಶೇಗುಣಸಿಯ ಅಮೃತ ಗೌಡನ್ನವರ (171 ಕೆಜಿ) ಪ್ರಥಮ, ಸಿಂದಗಿ ತಾಲೂಕು ಕೊರವಾರದ ಅಡಿವೆಪ್ಪ ಬಿರಾದಾರ (171 ಕೆಜಿ) ದ್ವಿತೀಯ, ಜಮಖಂಡಿ ತಾಲೂಕಿನ ಕಲ್ಲೋಳಿಯ ಇಬ್ರಾಹಿಂಸಾಬ ಅರಬ 161 ಕೆಜಿ ಭಾರದ ಗುಂಡು ಕಲ್ಲು ಎತ್ತುವ ಮೂಲಕ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯ ನಿರ್ಣಾಯಕರಾಗಿ ಎಂ.ವಿ. ಭದ್ರಶೆಟ್ಟಿ, ಸದಾನಂದ ಮಾಳಶೆಟ್ಟಿ ಕಾರ್ಯ ನಿರ್ವಹಿಸಿದರು. ಜಿಪಂ ಸದಸ್ಯ ಈರಣ್ಣ ಕರಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ