ಆ್ಯಪ್ನಗರ

ಕಬ್ಬು ಬೆಳೆಗಾರನಿಗೆ ಕಲ್ಲೇಟು: ತೀವ್ರ ಗಾಯ

ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಸೋಮವಾರ ರಾತ್ರಿ 8ಕ್ಕೆ ಕಬ್ಬು ಬೆಳೆಗಾರರೊಬ್ಬರ ಮೇಲೆ ಯಾರೋ ಅಜ್ಞಾತರು ಕಲ್ಲು ಎಸೆದಿದ್ದು ತಲೆಗೆ ತೀವ್ರ ಏಟು ತಗುಲಿ ...

Vijaya Karnataka 13 Nov 2018, 5:00 am
ಕಾಗವಾಡ: ಉಗಾರ ಖುರ್ದ ಪಟ್ಟಣದಲ್ಲಿ ಸೋಮವಾರ ರಾತ್ರಿ 8ಕ್ಕೆ ಕಬ್ಬು ಬೆಳೆಗಾರರೊಬ್ಬರ ಮೇಲೆ ಯಾರೋ ಅಜ್ಞಾತರು ಕಲ್ಲು ಎಸೆದಿದ್ದು ತಲೆಗೆ ತೀವ್ರ ಏಟು ತಗುಲಿ ಗಾಯಗೊಂಡಿದ್ದಾರೆ.
Vijaya Karnataka Web BEL-12 KAGWAD 2 NEWS PHOTO


ಉಗಾರ ಬುದ್ರುಕ ಗ್ರಾಮದ ಕಬ್ಬು ಬೆಳೆಗಾರ ರೈತ ಅಜಿತ ಅಪ್ಪಣ್ಣಾ ಅಕಿವಾಟೆ(60) ಗಾಯಗೊಂಡವರು. ಅಥಣಿ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಚಿಕ್ಕೋಡಿ ಎ.ಸಿ. ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆ ಹಮ್ಮಿಕೊಂಡಿದ್ದರು. ಸಂಜೆ ಸಭೆ ಬಳಿಕ ರೈತರು ಮರಳಿ ಉಗಾರಕ್ಕೆ ಬಂದಾಗ ಅಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲವರು ಜಮಾಯಿಸಿದ್ದರು.

ಈ ವೇಳೆ ಸಕ್ಕರೆ ಕಾರ್ಖಾನೆ ಎದುರಿಂದ ಕಿಡಿಗೇಡಿಯೊಬ್ಬ ಕಲ್ಲು ಬೀಸಿದ್ದಾನೆ. ಇದರಿಂದ ಅಜಿತ ಅಕಿವಾಟೆ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಸಕ್ಕರೆ ಕಾರ್ಖಾನೆ ಆಸ್ಪತ್ರೆಯಲ್ಲಿ ಉಪಚರಿಸಿ, ಹೆಚ್ಚಿನ ಉಪಚಾರಕ್ಕಾಗಿ ಮಿರಜ ಆಸ್ಪತ್ರೆಗೆ ಸಾಗಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ