ಆ್ಯಪ್ನಗರ

ಹಾಲಗಾ-ಬಸ್ತವಾಡದಲ್ಲಿ ಕಲ್ಲು ತೂರಾಟ

ಗ್ರಾಮದೇವಿ ಜಾತ್ರೆಯಲ್ಲಿ ಧ್ವಜ ಅಳವಡಿಕೆ ವಿಚಾರವಾಗಿ ಗುಂಪು ಘರ್ಷಣೆ - ಪೊಲೀಸರಿಂದ ಲಘು ಲಾಠಿ ಪ್ರಹಾರ

Vijaya Karnataka 9 May 2019, 5:00 am
ಬೆಳಗಾವಿ: ತಾಲೂಕಿನ ಹಾಲಗಾ-ಬಸ್ತವಾಡ ಗ್ರಾಮದಲ್ಲಿ ಧ್ವಜ ಅಳವಡಿಸುವ ವಿಚಾರವಾಗಿ ಬುಧವಾರ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ. ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
Vijaya Karnataka Web BLG-0805-2-52-8 HALAGA1


14 ವರ್ಷಗಳ ನಂತರ ಮೇ 7 ರಿಂದ ಆರಂಭಗೊಂಡಿರುವ 9 ದಿನಗಳ ಗ್ರಾಮದೇವಿ ಜಾತ್ರೆ ಸಂದರ್ಭದಲ್ಲಿ ಘಟನೆ ನಡೆದಿದೆ. ಭಕ್ತರ ಅನುಕೂಲಕ್ಕಾಗಿ ಗ್ರಾಮದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಸಮೀಪದ ಖುಲ್ಲಾ ಜಾಗದಲ್ಲಿ ಮಂಟಪ ನಿರ್ಮಿಸಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಚನ್ನಮ್ಮ ಮೂರ್ತಿ ಕಟ್ಟೆ ಮೇಲಿದ್ದ ಕನ್ನಡ ಬಾವುಟದ ಜತೆಗೆ ಭಗವಾಧ್ವಜ ಕಟ್ಟಲು ಕೆಲ ಕಿಡಿಗೇಡಿಗಳು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಮರಾಠಿ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಪರ-ವಿರೋಧದ ನಡುವೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಅಶ್ವಾರೂಢ ಚನ್ನಮ್ಮ ಮೂರ್ತಿಗೂ ಧಕ್ಕೆಯಾಗಿದೆ.

ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹೊರ ಜಿಲ್ಲೆಯಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ''ಕಿಡಿಗೇಡಿಗಳ ಮಾತಿಗೆ ಗ್ರಾಮಸ್ಥರು ಕಿವಿಗೊಡಬಾರದು. 14 ವರ್ಷಗಳ ನಂತರ ಆಚರಿಸುವ ಗ್ರಾಮದೇವಿ ಜಾತ್ರೆಯನ್ನು ಭಕ್ತಿ, ಸಂಭ್ರಮದಿಂದ ಆಚರಿಸಬೇಕು'', ಎಂದು ಡಿಸಿಪಿ ಸೀಮಾ ಲಾಟ್ಕರ್‌ ಮನವಿ ಮಾಡಿದ್ದಾರೆ.

ಧ್ವಜ ಅಳವಡಿಕೆ ವಿಷಯವಾಗಿ ಕನ್ನಡ ಮತ್ತು ಮರಾಠಿ ಸಂಘಟನೆಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಕಲ್ಲು ತೂರಾಟವಾಗಿದೆ. ಘಟನೆಯಲ್ಲಿ ಗ್ರಾಮದಲ್ಲಿನ ಮೂರ್ತಿಗೂ ಹಾನಿಯಾಗಿದೆ. ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಪರಿಸ್ಥಿತಿ ನಿಭಾಯಿಸಲಾಗಿದೆ.
- ಸೀಮಾ ಲಾಟ್ಕರ್‌, ಡಿಸಿಪಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ