ಆ್ಯಪ್ನಗರ

ಬೀದಿ ವ್ಯಾಪಾರಸ್ಥರು ಆಹಾರ ಗುಣಮಟ್ಟ ಕಾಯ್ದುಕೊಳ್ಳಿ

ಬೆಳಗಾವಿ: ಬೀದಿ ವ್ಯಾಪಾರಸ್ಥರು ತಾವು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ತ್ಯಾಜ್ಯದ ವಿಲೇವಾರಿ ನಿರ್ವಹಿಸಿ ನಗರ ಹಾಗೂ ವೈಯಕ್ತಿಕ ಶುಚಿತ್ವ ...

Vijaya Karnataka 13 Jun 2019, 5:00 am
ಬೆಳಗಾವಿ : ಬೀದಿ ವ್ಯಾಪಾರಸ್ಥರು ತಾವು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ತ್ಯಾಜ್ಯದ ವಿಲೇವಾರಿ ನಿರ್ವಹಿಸಿ ನಗರ ಹಾಗೂ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಹಾರ ಸುರಕ್ಷ ತಾ ಹಾಗೂ ಅಂಕಿತ ಅಧಿಕಾರಿ ಡಾ. ಎಂ.ಎಸ್‌. ಪಲ್ಲೇದ ಹೇಳಿದರು.
Vijaya Karnataka Web street traders maintain food quality
ಬೀದಿ ವ್ಯಾಪಾರಸ್ಥರು ಆಹಾರ ಗುಣಮಟ್ಟ ಕಾಯ್ದುಕೊಳ್ಳಿ


ಅವರು ಇಲ್ಲಿನ ಭಾಗ್ಯ ನಗರದ ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಲೋಕಲ್‌ ಸೆಲ್ಫ್‌ ಗವರ್ನ್‌ಮೆಂಟ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಬೀದಿ ವ್ಯಾಪರಸ್ಥರಿಗೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಬೀದಿ ವ್ಯಾಪಾರಸ್ಥರು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಆಹಾರ ಸುರಕ್ಷ ತೆ ಹಾಗೂ ಗುಣಮಟ್ಟದ ಕಾಯ್ದೆಯಡಿ ದಾಖಲಾತಿ ನೀಡಿ ಲೈಸನ್ಸ್‌ ಪಡೆದುಕೊಳ್ಳಬೇಕು. ಆಹಾರ ಸುರಕ್ಷ ತೆ, ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಲಬೆರಕೆ ಆಹಾರದಿಂದ ಮಾನವನ ಶರೀರದ ಮೇಲೆ ಪರಿಣಾಮ ಬೀರಿ ಕ್ಯಾನ್ಸರ್‌ ನಂಥ ಕಾಯಿಲೆಗಳು ಬರುತ್ತಿವೆ. ತೋಟದಿಂದ ತಟ್ಟೆಯವರೆಗೆ ಆಹಾರದ ಗುಣಮಟ್ಟ ಒಳ್ಳೆಯದಾಗಿರಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷ ಣ ಅಧಿಕಾರಿ ಬಿ.ಪಿ. ಯಲಿಗಾರ, ಎಸ್‌.ಬಿ. ಕುಲಕರ್ಣಿ, ವಿ.ವಿ. ಜೋಶಿ, ಆನಂದ ಹಂಪಣ್ಣವರ, ಎಂ.ಎಂ. ಜಮಾದಾರ, ಜಗದೀಶ ನಾಯ್ಕ, ಎಂ.ಎಂ. ಬೇಟಗೇರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ