ಆ್ಯಪ್ನಗರ

ಚುನಾವಣೆ ನಿಯಮಾವಳಿ ಕಟ್ಟು ನಿಟ್ಟಾಗಿ ಪಾಲಿಸಿ

ಬೈಲಹೊಂಗಲ : ಲೋಕಸಭಾ ಚುನಾವಣೆ ಸಂಹಿತೆ ಜಾರಿಯಾಗಿದ್ದು ಎಲ್ಲ ಅಧಿಕಾರಿಗಳು ಚುನಾವಣಾ ...

Vijaya Karnataka 12 Mar 2019, 5:00 am
ಬೈಲಹೊಂಗಲ : ಲೋಕಸಭಾ ಚುನಾವಣೆ ಸಂಹಿತೆ ಜಾರಿಯಾಗಿದ್ದು ಎಲ್ಲ ಅಧಿಕಾರಿಗಳು ಚುನಾವಣಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಉಪವಿಭಾಗಾಧಿಕಾರಿ ಮಾರುತಿ ಎಂ.ಪಿ. ಹೇಳಿದರು.
Vijaya Karnataka Web BEL-11HTP8


ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಚುನಾವಣಾ ನಿಮಿತ್ತ ಸೋಮವಾರ ನಡೆದ ಸೆಕ್ಟರ್‌ ಆಫೀಸರ್‌, ಪ್ಲೇಯಿಂಗ್‌ ಸ್ಕಾಡ್‌, ಚೆಕ್‌ ಪೋಸ್ಟ ಅಧಿಕಾರಿಗಳ, ವಿಡಿಯೋ ವಿಂಗ್‌ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ನೀತಿ ಸಂಹಿತೆಯು ಮಾ. 10ರಿಂದ ಮೇ 25ರವರೆಗೆ ಜಾರಿಯಲ್ಲಿರುತ್ತದೆ. ಯಾವುದೇ ಪಕ್ಷ ದ ಪ್ರಚಾರ, ಸಮಾರಂಭ, ಕಾರ್ಯಕ್ರಮಗಳ ಮೇಲೆ ನಿಗಾ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿನ, ಸರಕಾರಿ ವಾಹನ, ಬಸ್‌ಗಳಿಗೆ ಆಳವಡಿಸಿದ ಫ್ಲೆಕ್ಸ್‌ , ಸರಕಾರಿ, ರಾಜಕೀಯ ಜಾಹೀರಾತುಗಳನ್ನು, ಗೋಡೆಬರಹಗಳನ್ನು ಕೂಡಲೇ ತೆರವುಗೊಳಿಸಬೇಕೆಂದರು.

ತಹಸೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದೂ: 08288-233052, 1950 ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುವುದು. ಚುನಾವಣೆ ಕುರಿತು ಯಾವುದೇ ದೂರು, ತಕರಾರು ನಮೂದಿಸಬಹುದಾಗಿದೆ. ಮತದಾರರಿಗೆ ಮತದಾನ ಅನುಕೂಲಕ್ಕಾಗಿ ಮತದಾರ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ತಹಸೀಲ್ದಾರ ಡಾ.ಡಿ.ಎಚ್‌.ಹೂಗಾರ, ತಾಪಂ. ಇಒ ಸಮೀರ ಮುಲ್ಲಾ, ಗ್ರೇಡ್‌2 ತಹಸೀಲ್ದಾರ ಶ್ರೀಕಾಂತ ಬೆಟಗೇರಿ, ಸಿಪಿಐ ಮಂಜುನಾಥ ಕುಸಗಲ್‌, ಹೆಸ್ಕಾಂ ಇಇ ಮಾದೇಶ ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ