ಆ್ಯಪ್ನಗರ

ನೆರೆ ಪರಿಸ್ಥಿತಿ ಎದುರಿಸುವ ಜವಾಬ್ದಾರಿ ಕಟ್ಟುನಿಟ್ಟಾಗಿ ಪಾಲಿಸಿ

ಕಾಗವಾಡ: ಪ್ರವಾಹ ಪೀಡಿತ ತಾಲೂಕು ವ್ಯಾಪ್ತಿಯ ಗ್ರಾಮಗಳ ನಾಗರಿಕರ ಸುರಕ್ಷತೆಗಾಗಿ ...

Vijaya Karnataka 4 Aug 2019, 5:00 am
ಕಾಗವಾಡ : ಪ್ರವಾಹ ಪೀಡಿತ ತಾಲೂಕು ವ್ಯಾಪ್ತಿಯ ಗ್ರಾಮಗಳ ನಾಗರಿಕರ ಸುರಕ್ಷತೆಗಾಗಿ ತಾಲೂಕು ಆಡಳಿತ ಎಲ್ಲ ಸಿದ್ಧತೆ ಕೈಗೊಂಡಿದ್ದು ವಹಿಸಿರುವ ಎಲ್ಲ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಹಸೀಲ್ದಾರ್‌ ಪರಿಮಳಾ ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web BEL-03 KAGWAD 3 NEWS PHOTO


ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಶನಿವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಲಾವೃತಗೊಳ್ಳುವ ಗ್ರಾಮಗಳಿಗೆ ದೋಣಿಗಳ ವ್ಯವಸ್ಥೆ, ಗದ್ದೆಯಲ್ಲಿರುವ ಮನೆಗಳಲ್ಲಿ ವಾಸಿಸಿರುವ ಕುಟುಂಬಗಳು, ಜಾನುವಾರುಗಳ ಸ್ಥಳಾಂತರ, ಗಂಜಿ ಕೇಂದ್ರಗಳ ಸ್ಥಾಪನೆ ಇತ್ಯಾದಿ ಕಾರ್ಯರೂಪಕ್ಕೆ ತರುವಂತೆ ತಿಳಿಸಿದರು. ಜಲಾವೃತಗೊಳ್ಳುವ ಗ್ರಾಮಗಳಲ್ಲಿ ಪಡಿತರ ವಸ್ತುಗಳನ್ನು ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಥಣಿ ಸಿಪಿಐ ಶಂಕರಗೌಡಾ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಆರ್‌.ಪಿ.ಅವತಾಡೆ, ಜಿ.ಎಂ.ಗುಳಪ್ಪನವರ, ಗ್ರೇಡ್‌-2 ತಹಸೀಲ್ದಾರ್‌ ವಿಜಯ ಚೌಗುಲೆ, ಕಂದಾಯ ನೀರಿಕ್ಷ ಕ ಎಸ್‌.ಬಿ.ಮುಲ್ಲಾ, ಪಿಎಸ್‌ಐ ಹನಮಂತ ಶಿರಹಟ್ಟಿ, ತಾಪಂ ಅಧಿಕಾರಿ ವೀರನಗೌಡಾ ಹೆಗನಗೌಡರ, ನೀರಾವರಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬಸ್‌ ವ್ಯವಸ್ಥೆ ಕಲ್ಪಿಸಲು ಸೂಚನೆ :
ಕಾಗವಾಡ-ಜಮಖಂಡಿ ಮಾರ್ಗದ ಕುಡಚಿ, ಉಗಾರ ಸೇತುವೆಗಳು ನೀರಿನಲ್ಲಿ ಮುಳುಗಿ ಸಂಚಾರ ಸೇವೆ ಕಡಿತಗೊಂಡಿದ್ದರಿಂದ ಕಾಗವಾಡದಿಂದ ಶೇಡಬಾಳ ಮುಖಾಂತರ ಉಗಾರ ಬುದ್ರುಕ, ಕುಸನಾಳ, ಮೊಳವಾಡ ಗ್ರಾಮಗಳಿಗೆ ಸಂಪರ್ಕಿಸುವ ರಿಂಗರೂಟ್‌ ಬಸ್‌ ಪ್ರಾರಂಭಿಸಲು ಜನರ ಬೇಡಿಕೆಯಿಟ್ಟಿರುವ ಬಗ್ಗೆ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ತಹಸೀಲ್ದಾರ್‌ ಪರಿಮಳಾ ದೇಶಪಾಂಡೆ, ತಕ್ಷ ಣ ಬಸ್‌ ವ್ಯವಸ್ಥೆ ಪ್ರಾರಂಭಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ