ಆ್ಯಪ್ನಗರ

ಎಸ್‌ಐಟಿ ವಶದಲ್ಲಿದ್ದ ಮೂವರ ತೀವ್ರ ವಿಚಾರಣೆ

ಬೆಳಗಾವಿ: ಕಳೆದ ವರ್ಷ ನಗರದ ಪ್ರಕಾಶ್‌ ಚಿತ್ರಮಂದಿರದ ಆವರಣಕ್ಕೆ ಸೀಮೆ ಎಣ್ಣೆ ತುಂಬಿದ ಬಾಟಲ್‌ ...

Vijaya Karnataka 27 Mar 2019, 5:00 am
ಬೆಳಗಾವಿ : ಕಳೆದ ವರ್ಷ ನಗರದ ಪ್ರಕಾಶ್‌ ಚಿತ್ರಮಂದಿರದ ಆವರಣಕ್ಕೆ ಸೀಮೆ ಎಣ್ಣೆ ತುಂಬಿದ ಬಾಟಲ್‌ ಎಸೆದು ಸ್ಫೋಟಿಸಿ, ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರದ ಅಪರಾಧ ವಿಭಾಗದ ಪೊಲೀಸರು ಎಸ್‌ಐಟಿ ವಶದಲ್ಲಿರುವ ಮೂವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
Vijaya Karnataka Web strong inquiry of three arrested by sit
ಎಸ್‌ಐಟಿ ವಶದಲ್ಲಿದ್ದ ಮೂವರ ತೀವ್ರ ವಿಚಾರಣೆ


ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಸುಧನ್ವ ಸುಧೀರ ಗೊಂಧಳೇಕರ್‌(40), ಔರಂಗಾಬಾದ್‌ ಜಿಲ್ಲೆಯ ಶರದ್‌ ಬಾಹುಸಾಹೇಬ್‌ ಕಳಾಸ್ಕರ್‌ (25) ಮತ್ತು ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ಭರತ್‌ ಜಯವಂತ ಕುರಣೆ (37) ವಿಚಾರಣೆಗೆ ಒಳಪಟ್ಟವರು. ಈ ಆರೋಪಿಗಳು ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಮಹಾರಾಷ್ಟ್ರದ ವಿಚಾರವಾದಿ ದಾಬೋಲಕರ್‌ ಹತ್ಯೆ ಪ್ರಕರಣಗಳಲ್ಲಿ ಈಗಾಗಲೇ ಬಂಧಿತರಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಎಸ್‌ಐಟಿ ತಂಡದ ವಿಚಾರಣೆಯಲ್ಲಿದ್ದರು. ಎಸ್‌ಐಟಿ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಬೆಳಗಾವಿ ನಗರದ ಚಿತ್ರಮಂದಿರದ ಆವರಣದಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲೂ ಇದೇ ಆರೋಪಿಗಳ ಕೈವಾಡ ಇರುವ ಕುರಿತು ಶಂಕೆ ವ್ಯಕ್ತಪಡಿಸಿತ್ತು.

ಈ ಕಾರಣಕ್ಕೆ ಕಳೆದ ವಾರ ಬೆಳಗಾವಿ ನಗರ ಅಪರಾಧ ವಿಭಾಗದ ಪೊಲೀಸರು ಸ್ಫೋಟ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಮೂವರು ಆರೋಪಿಗಳನ್ನು ನ್ಯಾಯಾಲಯದಿಂದ ಮಾ.27ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದರು. ಪೊಲೀಸ್‌ ಕಸ್ಟಡಿ ಬುಧವಾರ ಮುಕ್ತಾಯವಾಗಲಿರುವುದರಿಂದ ಹೆಚ್ಚಿನ ವಿಚಾರಣೆಗಾಗಿ ಇನ್ನಷ್ಟು ಕಾಲ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏನಾಗಿತ್ತು? :
ಕಳೆದ ವರ್ಷ ನಗರದ ಪ್ರಕಾಶ್‌ ಚಿತ್ರಮಂದಿರದಲ್ಲಿ 'ಪದ್ಮಾವತ್‌' ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಬೈಕ್‌ ಮೇಲೆ ಬಂದ ಕಿಡಿಗೇಡಿಗಳು ಪೆಟ್ರೋಲ್‌ ಬಾಂಬ್‌ ಮಾದರಿಯಲ್ಲಿ ಸೀಮೆ ಎಣ್ಣೆ ತುಂಬಿದ್ದ ಬಾಟಲ್‌ ಎಸೆದು ಸ್ಫೋಟಿಸಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಈ ಕುರಿತು ಖಡೇ ಬಜಾರ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರೂ ಸ್ಥಳೀಯ ಮೂವರನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ