ಆ್ಯಪ್ನಗರ

ಸ್ಮಾರ್ಟ್‌ ಸಿಟಿ ವಿಳಂಬಕ್ಕೆ ತೀವ್ರ ಅಸಮಾಧಾನ

ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಗಳ ಕಾರ್ಯಾನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಕುರಿತು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಚೇರ್ಮನ್‌ ರಾಕೇಶ್‌ ಸಿಂಗ್‌, ನಿರ್ದೇಶಕ ಮತ್ತು ಕೆಯುಐಡಿಎಫ್‌ಸಿಯು ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 14 Feb 2019, 5:00 am
ಬೆಳಗಾವಿ: ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಗಳ ಕಾರ್ಯಾನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಕುರಿತು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಚೇರ್ಮನ್‌ ರಾಕೇಶ್‌ ಸಿಂಗ್‌, ನಿರ್ದೇಶಕ ಮತ್ತು ಕೆಯುಐಡಿಎಫ್‌ಸಿಯು ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web BLG-1302-2-52-13RAJU-4


ಫೆ.12ರಂದು ಬೆಂಗಳೂರಿನಲ್ಲಿ ನಡೆದ ನಿರ್ದೇಶಕರುಗಳ ಸಭೆಯಲ್ಲಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡ ಅವರು, ಮೂರು ವಾರದಲ್ಲಿ ಪೂರ್ಣಗೊಳ್ಳುವ ಕೆಲಸಗಳಿಗೂ 6 ತಿಂಗಳು ತಗೆದುಕೊಳ್ಳುತ್ತಿದ್ದೀರಿ. ಹೀಗಾದರೆ ಹೇಗೆ? ನೀವೆಲ್ಲರೂ ಲಕ್ಷ್ಯಕೊಟ್ಟು ಕೆಲಸ ಮಾಡಬೇಕು. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಬೇಕು. ಟೆಂಡರ್‌ ಹಂತದಲ್ಲಿರುವ ಯೋಜನೆಗೆ ಬೇಗನೇ ಟೆಂಡರ್‌ ಕರೆಯಬೇಕು. ಉಳಿದ ಯೋಜನೆಗಳ ನೀಲನಕ್ಷೆ ತಯಾರಿಸಿ ಟೆಂಡರ್‌ಗೆ ಸಿದ್ಧಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟೀಸ್‌ ನೀಡಿ, ಅವರು ಸರಿಹೋಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಿ. ಆದರೆ ಯೋಜನೆಗಳನ್ನು ನನೆಗುದಿಗೆ ಹಾಕುವುದು, ಅರ್ಧಕ್ಕೆ ನಿಲ್ಲಿಸುವುದರಲ್ಲಿ ಅರ್ಥವಿಲ್ಲ. ಪ್ರತಿವಾರವೂ ಬೆಳಗಾವಿಯಲ್ಲಿ ನಿರ್ದೇಶಕರ ಸಭೆ ಮಾಡಿ ಸಮಸ್ಯೆ, ಅಡಚಣೆ ನಿವಾರಿಸಿ ಮುಂದುವರಿಯಿರಿ ಎಂದು ಸೂಚನೆ ನೀಡಿದರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಪಾಲಿಕೆ ಸದಸ್ಯರು ಮತ್ತು ಸ್ಮಾರ್ಟ್‌ ಸಿಟಿ ನಿರ್ದೇಶಕರಾದ ಡಾ. ದಿನೇಶ್‌ ನಾಶಿಪುಡಿ, ಪಂಢರಿ ಪರಬ, ಪುಷ್ಪಾ ಪರ್ವತರಾವ್‌, ಅನಂತ ದೇಶಪಾಂಡೆ, ಪಾಲಿಕೆ ಆಯುಕ್ತ ಶಶಿಧರ ಕುರೇರ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ