ಆ್ಯಪ್ನಗರ

‘ಪಿಎಲ್‌ಡಿ ಬ್ಯಾಂಕ್‌ ರಾದ್ಧಾಂತಕ್ಕೆ ಮಾಜಿ ಅಧ್ಯಕ್ಷರೊಬ್ಬರ ಹಠ ಕಾರಣ’

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರವಾಗಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರೊಬ್ಬರು ಬಾಪುಗೌಡರೇ ಅಧ್ಯಕ್ಷರಾಗಬೇಕು ಎಂದು ಹಠ ಹಿಡಿದಿರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ...

Vijaya Karnataka 11 Sep 2018, 5:00 am
ಬೆಳಗಾವಿ: ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಚಾರವಾಗಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರೊಬ್ಬರು ಬಾಪುಗೌಡರೇ ಅಧ್ಯಕ್ಷರಾಗಬೇಕು ಎಂದು ಹಠ ಹಿಡಿದಿರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದು ಬ್ಯಾಂಕ್‌ ನಿರ್ದೇಶಕ ಬಾಪುಗೌಡ ಪಾಟೀಲ ಹೇಳಿದ್ದಾರೆ. ''ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಾನು ಅಧ್ಯಕ್ಷನಾಗಬೇಕು ಎಂದು ಯಾವ ಬಣಕ್ಕೂ ಅರ್ಜಿ ಹಾಕಿರಲಿಲ್ಲ. ಆ ಆಸೆಯೂ ನನಗಿರಲಿಲ್ಲ'', ಎಂದಿರುವ ಅವರು, ''ಗೋಕಾಕ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ವೋಟುಗಳನ್ನು ಜಾರಕಿಹೊಳಿ ಸಹೋದರರ ವಿರುದ್ಧವಾಗಿ ಹಾಕಿಸಿದ್ದೇನೆ ಎನ್ನುವ ಆರೋಪ ಸತ್ಯಕ್ಕೆ ದೂರವಾದುದು. ಶಾಸಕಿ ಲಕ್ಷ್ಮಿ ಹೆಬ್ಬಾಕರ್‌ಗೆ ನೀಡುವಷ್ಟೆ ಗೌರವವನ್ನು ಜಾರಕಿಹೊಳಿ ಸಹೋದರರಿಗೂ ನೀಡುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಒಂದು ಬಾರಿ ಅಧ್ಯಕ್ಷರಾದವರು ಮತ್ತೊಂದು ಬಾರಿಗೆ ಸ್ಪರ್ಧಿಸುವುದು ಬೇಡ ಎಂಬುದಾಗಿ ನಾನೇ ಸಲಹೆ ನೀಡಿದ್ದೆ'', ಎಂದು ಅವರು ತಿಳಿಸಿದ್ದಾರೆ.
Vijaya Karnataka Web stubborn nature of president is the reason for brouhaha
‘ಪಿಎಲ್‌ಡಿ ಬ್ಯಾಂಕ್‌ ರಾದ್ಧಾಂತಕ್ಕೆ ಮಾಜಿ ಅಧ್ಯಕ್ಷರೊಬ್ಬರ ಹಠ ಕಾರಣ’

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ