ಆ್ಯಪ್ನಗರ

ಟಿಕೆಟ್‌ ತಪಾಸಣಾಧಿಕಾರಿಗೆ ವಿದ್ಯಾರ್ಥಿಗಳ ಘೇರಾವ್‌

ಗೋಕಾಕ: ಶಾಲಾ ವಿದ್ಯಾರ್ಥಿಗಳು ಬಸ್‌ ಪಾಸ್‌ ಹೊಂದಿದ್ದರೂ ಕೆಎಸ್‌ಆರ್‌ಟಿಸಿ ತಪಾಸಣಾಧಿಕಾರಿ ದಂಡ ವಸೂಲಿ ಮಾಡುತ್ತಿದ್ದುದನ್ನು ಖಂಡಿಸಿ ಸಮೀಪದ ಸಂಗನಕೇರಿ ...

Vijaya Karnataka 25 May 2018, 5:00 am
ಗೋಕಾಕ : ಶಾಲಾ ವಿದ್ಯಾರ್ಥಿಗಳು ಬಸ್‌ ಪಾಸ್‌ ಹೊಂದಿದ್ದರೂ ಕೆಎಸ್‌ಆರ್‌ಟಿಸಿ ತಪಾಸಣಾಧಿಕಾರಿ ದಂಡ ವಸೂಲಿ ಮಾಡುತ್ತಿದ್ದುದನ್ನು ಖಂಡಿಸಿ ಸಮೀಪದ ಸಂಗನಕೇರಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಧಿಕಾರಿ ಕಾರನ್ನು ತಡೆಗಟ್ಟಿ ಘೇರಾವ್‌ ಹಾಕಿದರು.
Vijaya Karnataka Web BEL-24GOK4A


ಗುರುವಾರ ಇಂಡಿಕಾ ವಾಹನದಲ್ಲಿ ಬಂದ ಅಧಿಕಾರಿ ಏಕಾಏಕಿ ವಿದ್ಯಾರ್ಥಿಗಳ ಪಾಸ್‌ಗಳನ್ನು ಪರಿಶೀಲಿಸದೇ ದಂಡದ ಪಾವತಿ ನೀಡಿ ಒತ್ತಾಯಪೂರ್ವಕ ಹಣ ವಸೂಲಿ ಮಾಡುತ್ತಿದ್ದುದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪಾಸ್‌ ನೋಡಿದ ಅಧಿಕಾರಿಗಳು ಪಾವತಿ ವಾಪಸ್‌ ಪಡೆದು ವಿದ್ಯಾರ್ಥಿಗಳಿಗೆ ಹಣ ವಾಪಸ್‌ ನೀಡಿದ್ದಾರೆ. ಅಧಿಕಾರಿ ವಿದ್ಯಾರ್ಥಿಗಳಿಗೆ ದಿನನಿತ್ಯ ಕಿರುಕುಳ ನೀಡುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಬಸ್‌ ಕಂಡಕ್ಟರ್‌ ಕೂಡ ವಿದ್ಯಾರ್ಥಿಗಳ ಪಾಸ್‌ಗಳು ಸರಿಯಾಗಿರುವುದನ್ನು ದೃಢೀಕರಿಸಿ ಅಧಿಕಾರಿ ಜತೆ ವಾದ ಮಾಡಿದಾಗ ಕೋಪಗೊಂಡ ತಪಾಸಣಾಧಿಕಾರಿ ಕಂಡಕ್ಟರ್‌ಗೂ ಮೆಮೋ ನೀಡಿದರೆನ್ನಲಾಗಿದೆ.

ಈ ಬಗ್ಗೆ ಕಂಡಕ್ಟರ್‌ ಬಿ.ಎಸ್‌. ಬಾಗಡಿ, ಚಿಕ್ಕೋಡಿ ವಿಭಾಗದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಎಸ್‌.ಎಚ್‌. ನಾಯಿಕ ಹಾಗೂ ಸಿ.ಬಿ. ಪಾರಶೆಟ್ಟಿ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳದೇ ಇಲಾಖೆ ಮುಖ್ಯಸ್ಥರಲ್ಲಿಯೇ ದೂರು ದಾಖಲಿಸಲು ಹೇಳಿ ವಾಪಸ್‌ ಕಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ