ಆ್ಯಪ್ನಗರ

ದೈಹಿಕ ಶಿಕ್ಷಣ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಬಾವನಸೌಂದತ್ತಿ: ದೈಹಿಕ ಶಿಕ್ಷಣ ಶಿಕ್ಷ ಕಿ ಸರಿಯಾಗಿ ಆಟಗಳನ್ನು ಆಡಿಸುವುದಿಲ್ಲ...

Vijaya Karnataka 19 Sep 2018, 5:00 am
ಬಾವನಸೌಂದತ್ತಿ: ದೈಹಿಕ ಶಿಕ್ಷಣ ಶಿಕ್ಷ ಕಿ ಸರಿಯಾಗಿ ಆಟಗಳನ್ನು ಆಡಿಸುವುದಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತಮಗೆ ಪ್ರೋತ್ಸಾಹಿಸುವುದಿಲ್ಲವೆಂದು ಆರೋಪಿಸಿ ಸಮೀಪದ ಜಲಾಲಪುರ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ತಮ್ಮ ಪಠ್ಯಚೀಲಗಳನ್ನು ಶಾಲೆ ಪ್ರವೇಶ ದ್ವಾರದಲ್ಲಿ ಗುಂಪು ಮಾಡಿ ಪ್ರತಿಭಟಿಸಿದರು.
Vijaya Karnataka Web BLG-1809-2-52-18 BSDT 1


ಡಿ.ಜೆ.ಹೆರವಾಡೆ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ಶಾಲೆ ಪ್ರವೇಶ ದ್ವಾರದಲ್ಲಿ ಗುಂಪುಗೂಡಿ ವಿದ್ಯಾರ್ಥಿಗಳು ಮತ್ತು ಪಾಲಕರು, ತಮಗೆ ಆಟಗಳನ್ನು ಹೇಳಿಕೊಡದ, ಪ್ರೋತ್ಸಾಹ ನೀಡದ ದೈಹಿಕ ಶಿಕ್ಷಣ ಶಿಕ್ಷ ಕರು ಬೇಡ, ಇಂದು ಶಾಲೆಗೆ ರಜೆ ಎಂಬ ಫಲಕವನ್ನು ಹಿಡಿದು ಘೋಷಣೆ ಕೂಗತೋಡಗಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ಇತ್ತೀಚೆಗೆ ಹಿಡಕಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಆಟವಾಡಲು ಸರಿಯಾಗಿ ಪ್ರೋತ್ಸಾಹ ನೀಡಲಿಲ್ಲ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಪಾಲಕರು ಮತ್ತು ಹಿರಿಯ ವಿದ್ಯಾರ್ಥಿಗಳು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ದೈಹಿಕ ಶಿಕ್ಷ ಕಿಯಾಗಿ ನಿರ್ವಹಿಸುತ್ತಿರುವ ಎಸ್‌.ಆರ್‌.ನಾಯಿಕ ಅವರಿಗೆ ಆಟ ನಿಯಮಗಳು ಸಹಿತ ಸರಿಯಾಗಿ ಗೊತ್ತಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ಹೇಗೆ ಆಟ ಆಡಿಸುತ್ತಾರೆಂದು ಪ್ರಶ್ನಿಸಿದರು.

ವಿಷಯ ತಿಳಿದು ಶಾಲೆಗೆ ಆಗಮಿಸಿದ ಬಿಇಒ ಸಿ.ಆರ್‌.ಓಣಿ ಹಾಗೂ ಜಿಲ್ಲಾ ದೈಹಿಕ ಪರಿವೀಕ್ಷ ಕ ಡಿ.ಎಸ್‌.ಡಿಗ್ರಜ ಅವರು ಮುಖ್ಯಾಧ್ಯಾಪಕ ಮತ್ತು ಪಾಲಕರ, ಎಸ್‌ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ, ತಕ್ಷ ಣವೇ ಜಾರಿಗೆ ಬರುವಂತೆ ದೈಹಿಕ ಶಿಕ್ಷ ಕಿಯನ್ನು ಬೇರೆ ಕಡೆ ನಿಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ, ತಮ್ಮ ತರಗತಿಗಳಿಗೆ ನಡೆದರು.

ಮುಖ್ಯಾಧ್ಯಾಪಕ ವಿ.ಬಿ.ಬನಶಂಕರಿ, ತಾಪಂ ಸದಸ್ಯ ನಾಮದೇವ ಕಾಂಬಳೆ, ಕುಮಾರ ಹೆರವಾಡೆ, ಏಕನಾಥ ಹೆರವಾಡೆ, ಸುಭಾಷ ಪವಾರ, ತಾನಾಜಿ ಧುಮಾಳೆ, ಮಧುಕರ ನಿಂಬಾಳಕರ, ಪೊಪಟ ಜಗದಾಳೆ, ಪಾಂಡು ಹವಾಲ್ದಾರ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ