ಆ್ಯಪ್ನಗರ

ಬೆಳಗಾವಿ: 87 ದಿನದಲ್ಲಿ 10 ಲಕ್ಷ ಟನ್‌ ಕಬ್ಬು ನುರಿದು ದಾಖಲೆ ಬರೆದ ಸಕ್ಕರೆ ಕಾರ್ಖಾನೆ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಸಮೀಪದ ಹುಪರಿ ಜವಾಹರ ಸಕ್ಕರೆ ಕಾರ್ಖಾನೆಯಿಂದ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 87 ದಿನಗಳಲ್ಲಿ 10ಲಕ್ಷ ಟನ್‌ ಕಬ್ಬು ನುರಿಸಿದ್ದು, ದಾಖಲೆ ನಿರ್ಮಿಸಿದೆ.

Vijaya Karnataka Web 21 Jan 2021, 8:41 pm
ಬೋರಗಾಂವ/ ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಸಮೀಪದ ಹುಪರಿ ಜವಾಹರ ಸಕ್ಕರೆ ಕಾರ್ಖಾನೆಯಿಂದ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 87 ದಿನಗಳಲ್ಲಿ ದಾಖಲೆ 10ಲಕ್ಷ ಟನ್‌ ಕಬ್ಬು ನುರಿಸಿದ್ದು ಹಂಗಾಮಿನ ಅಂತ್ಯದವರೆಗೆ ಇನ್ನೂ 20ಲಕ್ಷ ಟನ್‌ ಕಬ್ಬು ನುರಿಸಿ ದಾಖಲೆ ನಿರ್ಮಿಸಲಾಗುವುದೆಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಹುಲ್‌ ಅವಾಡೆ ತಿಳಿಸಿದರು.
Vijaya Karnataka Web sugar factory
representative image


ಅವರು ಬೇಡಕಿಹಾಳದಲ್ಲಿ ಅತ್ಯಾಧುನಿಕ ಕಬ್ಬು ಕಟಾವು ನೂತನ ಯಂತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜವಾಹರ ಸಕ್ಕರೆ ಕಾರ್ಖಾನೆ ಕಾರ್ಯವ್ಯಾಪ್ತಿಯ ಬೆಳಗಾವಿ ಹಾಗೂ ಕೊಲ್ಲಾಪುರ ಜಿಲ್ಲೆಯ ಕಬ್ಬು ಸಕಾಲಕ್ಕೆ ಕಟಾವು ಮಾಡಲು ಹಾಗೂ ಕಬ್ಬು ಕಟಾವು ಕೂಲಿಕಾರರ ಕೊರತೆ ನೀಗಿಸಲು ಅತ್ಯಾಧುನಿಕ 35 ಕಬ್ಬು ಕಟಾವು ಯಂತ್ರಗಳನ್ನು ತರಲಾಗಿದೆ. ನಿತ್ಯ ಈ ಯಂತ್ರಗಳಿಂದ 3500 ರಿಂದ 4000 ಟನ್‌ ಕಬ್ಬು ಕಟಾವಾಗಿ ಬರುತ್ತಿದೆ ಎಂದರು.

ಬೇಸಿಗೆ ಅವಧಿಯ ಕಬ್ಬು ನಾಟಿಗೆ ಇದು ಸುಸಮಯ: ಸಕ್ಕರೆ ಕಾರ್ಖಾನೆಯಿಂದ ನೆರವು!

ಗುಂಡೂ ಉಪಾಧ್ಯೆ ಅವರು ಕಬ್ಬು ಕಟಾವು ಯಂತ್ರದ ಪೂಜೆ ನೆರವೇರಿಸಿದರು. ಜಿಪಂ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ವಿಜಯಕುಮಾತ ತಾತ್ಯಾ, ಉದಯಕುಮಾರ ಖೋತ ಯಂತ್ರದ ಪೂಜೆ ನೆರವೇರಿಸಿದರು. ರಾಹುಲ್‌ ಅವಾಡೆಯವರು ಜವಾಹರ ಕಾರ್ಖಾನೆಯ ಸದಸ್ಯ ಶಂಕರ ಮಹಾದೇವ ಕಮತೆಯವರಿಗೆ ಆರೋಗ್ಯ ಚಿಕಿತ್ಸೆಗಾಗಿ ಮಂಜೂರಾದ 50ಸಾವಿರ ರೂ. ಚೆಕ್‌ನ್ನು ಅವರ ಧರ್ಮಪತ್ನಿ ವಿಮಲ ಕಮತೆಯವರಿಗೆ ಹಸ್ತಾಂತರಿಸಿದರು.

ಕಬ್ಬು ಬೆಳೆಗಾರರಿಂದ ಸುಲಿಗೆ ಮಾಡುವ ದಂಧೆ ಶುರು; ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ರೈತರು..!

ನಿರ್ದೇಶಕರಾದ ಶೀತಲ ಅಮ್ಮಣ್ಣವರ, ಸುಮೇರು ಪಾಟೀಲ, ಅಶೋಕ ನಾರೆ, ಸೂರಜ ಬೇಡಗೆ, ವಜ್ರಕುಮಾರ ಕೇಸ್ತೆ, ಕೃಷಿ ಅಧಿಕಾರಿಗಳಾದ ಕಿರಣ ಕಾಂಬಳೆ, ಪ್ರಕಾಶ ಪಾಟೀಲ, ಜಯಕುಮಾರ ಖೋತ, ಆರ್‌.ಬಿ.ಖೋತ, ದೀಪಕ ಖೋತ, ಯಂತ್ರದ ಮಾಲೀಕರಾದ ಶೀತಲ ಖೋತ,ನರಸಣ್ಣವರ, ಋುಷಭ ಉಮಾಜೆ, ಬಾಹುಬಲಿ ಶಿರಗುಪ್ಪೆ, ವಿನಯ ಖೋತ, ಅಮಿತ ಭೆಂಡವಾಡೆಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ