ಆ್ಯಪ್ನಗರ

ಸಕ್ಕರೆ ಕಾರ್ಖಾನೆ ಕಾರ್ಮಿಕರ ಧರಣಿ

ವಿಕ ಸುದ್ದಿಲೋಕ 29 Jan 2017, 6:37 pm

ನಿಪ್ಪಾಣಿ: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹಂಗಾಮಿ ನೌಕರರು ಕೆಲಸ ಕಾಯಂ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ರಾತ್ರಿಯಿಂದ ಕಾರ್ಖಾನೆ ಎದುರು ಧರಣಿ ನಡೆಸುತ್ತಿದ್ದಾರೆ.

Vijaya Karnataka Web sugar factory workers protest
ಸಕ್ಕರೆ ಕಾರ್ಖಾನೆ ಕಾರ್ಮಿಕರ ಧರಣಿ

ರಾಜ್ಯ ಸರಕಾರದ ಆದೇಶದನ್ವಯ ಎಲ್ಲ ರೀತಿಯ ಕಾರ್ಮಿಕರಿಗೆ ಏ.2014ರಿಂದ ಹೆಚ್ಚಿಸಲಾದ ವೇತನ ನೀಡುವುದು, ವ್ಯತ್ಯಾಸ ಮೊತ್ತ ಭರಿಸುವುದು, ಅನಾರೋಗ್ಯದ ರಜೆ ಪಡೆಯದವರಿಗೆ ಪಗಾರ ನೀಡುವುದು, ಹೆಚ್ಚಿನ ಕೆಲಸಕ್ಕೆ ಸಂಬಳ, ವಿಆರ್‌ಎಸ್‌ ಮೊತ್ತ ಹೆಚ್ಚಿಸುವುದು ಒಳಗೊಂಡು 28 ವರ್ಷಗಳಿಂದ ಕಾರ‍್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸುವ ಬೇಡಿಕೆಗಳೊಂದಿಗೆ 134 ಕಾರ್ಮಿಕರು ಧರಣಿ ನಡೆಸಿದ್ದಾರೆ. ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಅನಿಲ್‌ ಶಿಂಧೆ, ಕಾರ್ಮಿಕ ಮುಖಂಡರಾದ ಶಿವಗೊಂಡಾ ಪಾಟೀಲ, ಗೋವಿಂದ ಜಾಧವ, ರಘುನಾಥ ದೇಶಮುಖ, ತಾನಾಜಿ ಹಾಲಕಟ್ಟಿ, ವಸಂತ ಶೇಗಳೆ, ಭರತ ಪಾಟೀಲ, ಸುನೀಲ ವಂದೂರೆ, ಜಯವಂತ ಪಾಟೀಲ, ಶಿವಗೊಂಡಾ ಕಾಗವಾಡೆ, ಶಹಾಜಿ ಪಾಟೀಲ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಖಾನೆ ಚೇರ್ಮನ್‌, ಮಾಜಿ ಶಾಸಕ ಸುಭಾಷ ಜೋಶಿ, ''ಕಾರ್ಮಿಕರು ಲಿಖಿತ ಸ್ವರೂಪದಲ್ಲಿ ನೀಡಿದ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಲಾಗಿದ್ದು,ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಸಭೆ ನಡೆಸಿ ಠರಾವು ಕೈಗೊಳ್ಳದ ಹೊರತು ನಾನು ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ