ಕಾಗವಾಡ: ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 2.75 ಲಕ್ಷ ಎಕರೆ ಕಬ್ಬು ನೆರೆಯಿಂದ ನಾಶವಾಗಿದ್ದು ಹಲವು ಕೋಟಿ ರೂ. ಹಾನಿಯಾಗಿದೆ ಎಂದು ಉಗಾರ ಸಕ್ಕರೆ ಕಾರ್ಖಾನೆಯ ಆರ್ಎನ್ಡಿ ವ್ಯವಸ್ಥಾಪಕ, ಕಬ್ಬು ಬೆಳೆ ಶಾಸ್ತ್ರಜ್ಞ ಜಗದೀಶ ಕುಲಕರ್ಣಿ ಹೇಳಿದರು.
ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಕಬ್ಬು ರೈತರ ವಾಣಿಜ್ಯ ಬೆಳೆಯಾಗಿದೆ. ಪ್ರತಿಯೊಬ್ಬ ರೈತರು, ಅದರಲ್ಲಿ ಕೃಷ್ಣಾ ನದಿ ತೀರದಲ್ಲಿ ನದಿ ನೀರು ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೆಳೆ ತೆಗೆದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಬತ್ತಿಹೋಗಿ ನೀರಿನಲ್ಲದೇ ಅನೇಕ ರೈತರ ಬೆಳೆಗಳು ಕಮರಿ ಹೋಗಿದ್ದವು. ಅದರಲ್ಲಿ ಕೆಲ ಬಾವಿ, ಕೊಳವೆ ಬಾವಿಗಳಿಂದ ನೀರು ಪೂರೈಸಿ, ಬೆಳೆ ಉಳಿಸಿಕೊಂಡಿದ್ದರು. ಇದೀಗ ನದಿಗೆ ಮಹಾಪೂರ ಬಂದು ಇಕ್ಕೆಲಗಳಲ್ಲಿನ ಗದ್ದೆಗಳಲ್ಲಿ ಸುಮಾರು 15 ದಿನ ನೀರು ನಿಂತಿದ್ದರಿಂದ ಬೆಳೆ ಕೊಳೆತು ನಾಶವಾಗಿದೆ. ಇದರಿಂದ ರೈತನ ಜೀವನ ಕಷ್ಟಕರವಾಗಿದೆ ಎಂದರು.
ಬೆಳೆ ಹಾನಿ ಸಮೀಕ್ಷೆ ಸದ್ಯ ಜಾರಿಯಿದೆ. ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ 95 ಸಾವಿರ, ರಾಯಬಾಗ 20 ಸಾವಿರ, ಚಿಕ್ಕೋಡಿಯಲ್ಲಿ 70 ಸಾವಿರ ಎಕರೆ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನಂತೆ ಸುಮಾರು 2.75 ಲಕ್ಷ ಎಕರೆ ಕಬ್ಬು ಕೊಳೆತು ನಾಶವಾಗಿದೆ. ಇಂದಿನ ದರದಂತೆ ಪರಿಗಣಿಸಿದರೆ ಪ್ರತಿ ಎಕರೆಯಲ್ಲಿ ಸುಮಾರು 60ರಿಂದ 70 ಸಾವಿರ ರೂ. ಹಾನಿಯಾಗಿದೆ ಎಂದರು.
ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಕಬ್ಬು ರೈತರ ವಾಣಿಜ್ಯ ಬೆಳೆಯಾಗಿದೆ. ಪ್ರತಿಯೊಬ್ಬ ರೈತರು, ಅದರಲ್ಲಿ ಕೃಷ್ಣಾ ನದಿ ತೀರದಲ್ಲಿ ನದಿ ನೀರು ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೆಳೆ ತೆಗೆದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಬತ್ತಿಹೋಗಿ ನೀರಿನಲ್ಲದೇ ಅನೇಕ ರೈತರ ಬೆಳೆಗಳು ಕಮರಿ ಹೋಗಿದ್ದವು. ಅದರಲ್ಲಿ ಕೆಲ ಬಾವಿ, ಕೊಳವೆ ಬಾವಿಗಳಿಂದ ನೀರು ಪೂರೈಸಿ, ಬೆಳೆ ಉಳಿಸಿಕೊಂಡಿದ್ದರು. ಇದೀಗ ನದಿಗೆ ಮಹಾಪೂರ ಬಂದು ಇಕ್ಕೆಲಗಳಲ್ಲಿನ ಗದ್ದೆಗಳಲ್ಲಿ ಸುಮಾರು 15 ದಿನ ನೀರು ನಿಂತಿದ್ದರಿಂದ ಬೆಳೆ ಕೊಳೆತು ನಾಶವಾಗಿದೆ. ಇದರಿಂದ ರೈತನ ಜೀವನ ಕಷ್ಟಕರವಾಗಿದೆ ಎಂದರು.
ಬೆಳೆ ಹಾನಿ ಸಮೀಕ್ಷೆ ಸದ್ಯ ಜಾರಿಯಿದೆ. ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ 95 ಸಾವಿರ, ರಾಯಬಾಗ 20 ಸಾವಿರ, ಚಿಕ್ಕೋಡಿಯಲ್ಲಿ 70 ಸಾವಿರ ಎಕರೆ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನಂತೆ ಸುಮಾರು 2.75 ಲಕ್ಷ ಎಕರೆ ಕಬ್ಬು ಕೊಳೆತು ನಾಶವಾಗಿದೆ. ಇಂದಿನ ದರದಂತೆ ಪರಿಗಣಿಸಿದರೆ ಪ್ರತಿ ಎಕರೆಯಲ್ಲಿ ಸುಮಾರು 60ರಿಂದ 70 ಸಾವಿರ ರೂ. ಹಾನಿಯಾಗಿದೆ ಎಂದರು.