ಆ್ಯಪ್ನಗರ

ಜಿಲ್ಲೆಯಲ್ಲಿ ನೆರೆಗೆ 2.75 ಲಕ್ಷ ಎಕರೆಯಷ್ಟು ಪ್ರದೇಶದಲ್ಲಿ ಕಬ್ಬು ನಾಶ

ಕಾಗವಾಡ: ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ಸೇರಿದಂತೆ ಬೆಳಗಾವಿ ...

Vijaya Karnataka 25 Aug 2019, 5:00 am
ಕಾಗವಾಡ: ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 2.75 ಲಕ್ಷ ಎಕರೆ ಕಬ್ಬು ನೆರೆಯಿಂದ ನಾಶವಾಗಿದ್ದು ಹಲವು ಕೋಟಿ ರೂ. ಹಾನಿಯಾಗಿದೆ ಎಂದು ಉಗಾರ ಸಕ್ಕರೆ ಕಾರ್ಖಾನೆಯ ಆರ್‌ಎನ್‌ಡಿ ವ್ಯವಸ್ಥಾಪಕ, ಕಬ್ಬು ಬೆಳೆ ಶಾಸ್ತ್ರಜ್ಞ ಜಗದೀಶ ಕುಲಕರ್ಣಿ ಹೇಳಿದರು.
Vijaya Karnataka Web BEL-24 KAGWAD 1 A NEWS PHOTO


ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಕಬ್ಬು ರೈತರ ವಾಣಿಜ್ಯ ಬೆಳೆಯಾಗಿದೆ. ಪ್ರತಿಯೊಬ್ಬ ರೈತರು, ಅದರಲ್ಲಿ ಕೃಷ್ಣಾ ನದಿ ತೀರದಲ್ಲಿ ನದಿ ನೀರು ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಬೆಳೆ ತೆಗೆದುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಬತ್ತಿಹೋಗಿ ನೀರಿನಲ್ಲದೇ ಅನೇಕ ರೈತರ ಬೆಳೆಗಳು ಕಮರಿ ಹೋಗಿದ್ದವು. ಅದರಲ್ಲಿ ಕೆಲ ಬಾವಿ, ಕೊಳವೆ ಬಾವಿಗಳಿಂದ ನೀರು ಪೂರೈಸಿ, ಬೆಳೆ ಉಳಿಸಿಕೊಂಡಿದ್ದರು. ಇದೀಗ ನದಿಗೆ ಮಹಾಪೂರ ಬಂದು ಇಕ್ಕೆಲಗಳಲ್ಲಿನ ಗದ್ದೆಗಳಲ್ಲಿ ಸುಮಾರು 15 ದಿನ ನೀರು ನಿಂತಿದ್ದರಿಂದ ಬೆಳೆ ಕೊಳೆತು ನಾಶವಾಗಿದೆ. ಇದರಿಂದ ರೈತನ ಜೀವನ ಕಷ್ಟಕರವಾಗಿದೆ ಎಂದರು.

ಬೆಳೆ ಹಾನಿ ಸಮೀಕ್ಷೆ ಸದ್ಯ ಜಾರಿಯಿದೆ. ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ 95 ಸಾವಿರ, ರಾಯಬಾಗ 20 ಸಾವಿರ, ಚಿಕ್ಕೋಡಿಯಲ್ಲಿ 70 ಸಾವಿರ ಎಕರೆ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನಂತೆ ಸುಮಾರು 2.75 ಲಕ್ಷ ಎಕರೆ ಕಬ್ಬು ಕೊಳೆತು ನಾಶವಾಗಿದೆ. ಇಂದಿನ ದರದಂತೆ ಪರಿಗಣಿಸಿದರೆ ಪ್ರತಿ ಎಕರೆಯಲ್ಲಿ ಸುಮಾರು 60ರಿಂದ 70 ಸಾವಿರ ರೂ. ಹಾನಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ