ಆ್ಯಪ್ನಗರ

ಕಬ್ಬಿನ ಲಾರಿ ಡಿಕ್ಕಿ: ಎತ್ತಿಗೆ ಗಾಯ

ಮಲ್ಲಮ್ಮನ ಬೆಳವಡಿ: ಸಮೀಪದ ಹಿರೇಬಾಗೆವಾಡಿ-ಸವದತ್ತಿ ...

Vijaya Karnataka 29 Dec 2019, 5:00 am
ಮಲ್ಲಮ್ಮನ ಬೆಳವಡಿ: ಸಮೀಪದ ಹಿರೇಬಾಗೆವಾಡಿ-ಸವದತ್ತಿ ರಾಜ್ಯ ಹೆದ್ದಾರಿ ರಸ್ತೆಯ ಪಟ್ಟಿಹಾಳ ಕ್ರಾಸ್‌ ಬಳಿ ಶನಿವಾರ ಕಬ್ಬು ಸಾಗಿಸುತ್ತಿದ್ದ ಲಾರಿಯೊಂದು ಎತ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತು ಗಾಯಗೊಂಡಿದೆ.
Vijaya Karnataka Web 28 DWDP 1_53
ಮಲ್ಲಮ್ಮನ ಬೆಳವಡಿ ಸಮೀಪ ಎತ್ತು ಅಪಘಾತದಿಂದ ಗಾಯಗೊಂಡಿರುವುದು.


ಬೆಳವಡಿಯ ರೈತ ಮಾಳೇಶ ಮಹಾರುದ್ರಪ್ಪ ಬಾಗೇವಾಡಿ ಅವರಿಗೆ ಸೇರಿದ ಎತ್ತು ಹೊಲಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕದ ತಗ್ಗಿಗೆ ಜಿಗಿದಿದ್ದರಿಂದ ರೈತ ವಿಠ್ಠಲ ಅಪಘಾತದಿಂದ ಪಾರಾಗಿದ್ದಾರೆ.

ಸೊಂಟ ಮುರಿದು ರಸ್ತೆ ಪಕ್ಕ ಬಿದ್ದು ನರಳಾಡುತ್ತಿರುವ ಎತ್ತು ಕಂಡು ಸಾರ್ವಜನಿಕರು ಮಮ್ಮಲ ಮರುಗಿದರು. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್‌ ಡಾ. ದೊಡ್ಡಪ್ಪ ಗೂಗಾರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಡಿಕ್ಕಿ ಹೊಡೆಸಿ ಪರಾರಿಯಾದ ಲಾರಿ ಪತ್ತೆ ಹಚ್ಚಿ ಚಾಲಕನನ್ನು ಬಂಧಿಸಿ ರೈತನಿಗೆ ಸೂಕ್ತ ಪರಿಹಾರ ಕೊಡಿಸಲು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ