ಆ್ಯಪ್ನಗರ

ಶಾಸಕ ಕುಮಠಳ್ಳಿಗೆ ಶೀಘ್ರ ಯೋಗ್ಯ ಸ್ಥಾನ

ಬೆಳಗಾವಿ: ''ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಯೋಗ್ಯ ...

Vijaya Karnataka 14 Feb 2020, 5:00 am
ಬೆಳಗಾವಿ: ''ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಯೋಗ್ಯ ಸ್ಥಾನಮಾನ ನೀಡಲು ಸರಕಾರಕ್ಕೆ ಮನವಿ ಮಾಡಲಾಗುವುದು'' ಎಂದು ನೂತನ ಜವಳಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
Vijaya Karnataka Web suitable post to mla kumathalli soon
ಶಾಸಕ ಕುಮಠಳ್ಳಿಗೆ ಶೀಘ್ರ ಯೋಗ್ಯ ಸ್ಥಾನ


ಬೆಳಗಾವಿಯ ಸಾಂಬ್ರಾವಿಮಾನ ನಿಲ್ದಾಣದಲ್ಲಿಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಚಿವ ಸ್ಥಾನ ತಪ್ಪಿರುವ ಸ್ನೇಹಿತ ಕುಮಠಳ್ಳಿ ಅವರಿಗೂ ಜವಾಬ್ದಾರಿಯುತ ಸ್ಥಾನ ನೀಡುವುದಾಗಿ ಈಗಾಗಲೆ ಹೈಕಮಾಂಡ್‌ ಭರವಸೆ ನೀಡಿದೆ. ಅಲ್ಲದೆ, ಹಿರಿಯ ಶಾಸಕರಲ್ಲಿಒಬ್ಬರಾದ ಉಮೇಶ ಕತ್ತಿ ಅವರಿಗೂ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ'' ಎಂದರು.

''ಸಕ್ಕರೆ ಖಾತೆ ಬೇಡ ಎಂದು ನಾನೇ ಹೇಳಿದ್ದೆ. ಈಗ ನೀಡಿರುವ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಫೆ.17ರಿಂದ ಅಧಿವೇಶನ ಆರಂಭಗೊಳ್ಳಲಿರುವುದರಿಂದ ಇಲಾಖೆ ವಿಷಯವಾಗಿ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕಿದೆ. ಶುಕ್ರವಾರ ಬೆಂಗಳೂರಿಗೆ ತೆರಳಿ ಅಧಿಕಾರಿಗಳ ಸಭೆ ನಡೆಸುತ್ತೇನೆ'' ಎಂದು ಶ್ರೀಮಂತ ಪಾಟೀಲ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ