ಬಾವನಸೌಂದತ್ತಿ : ಆರೋಗ್ಯವಂತ ವ್ಯಕ್ತಿಯೊಬ್ಬ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಬಹುದು ಎಂದು ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ. ಮುನ್ಯಾಳ ಹೇಳಿದರು.
ಅವರು, ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿರಿ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ನಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಾನಿಗಳು ನೀಡುವ ರಕ್ತವನ್ನು ಸಂಗ್ರಹಿಸಿ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ನೀಡಲಾಗುತ್ತಿದೆ. ಸಂಗ್ರಹಿಸಿದ ರಕ್ತವನ್ನು ಮೂರು ವಿಧದಲ್ಲಿ ವಿಂಗಡಿಸಲಾಗುವುದು. ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳೆಂದು ವಿಭಜಿಸಿ, ಆಯಾ ರೋಗಿಯ ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತಿದೆ. ಡೆಂಗೆ ರೋಗದಿಂದ ಬಳಲುತ್ತಿರುವವರಿಗೆ ಬಿಳಿ ರಕ್ತಗಳನ್ನು ನೀಡಲಾಗುವುದು. ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಮೂರು ವ್ಯಕ್ತಿಗಳನ್ನು ಬದುಕಿಸಬಹುದೆಂದು ಮಾಹಿತಿ ನೀಡಿದರು.
ಡಾ. ಪ್ರಿಯಾಂಕ ತಳವಾರ, ಡಾ. ಎಸ್.ವಿ. ಹುಣಶ್ಯಾಳ, ಡಾ. ಗಿರೀಶ ಕುಲಕರ್ಣಿ, ಡಾ. ಎಸ್.ಬಿ. ಪಾಟೀಲ, ಗ್ರಾಪಂ ಅಧ್ಯಕ್ಷ ಅಜೀತ ಖೆಮಲಾಪುರೆ, ಉಪಾಧ್ಯಕ್ಷೆ ಜಯಶ್ರೀ ಶಿಂಧೆ, ಅನೀಲ ಹಂಜೆ, ಶಾಂತಿನಾಥ ಪಾಟೀಲ, ದಶರಥ ಭೋವಿ, ಅರಿಹಂತ ಮಗದುಮ್ಮ, ದೀಪಾ ಹಿರೇಮಠ, ಪಿಡಿಒ ಎಸ್.ಆರ್. ಪಾಟೀಲ ಸೇರಿದಂತೆ ಅನೇಕರು ಇದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಜನರಿಂದ 48 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಅವರು, ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯಿರಿ, ತಾಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ನಸಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಾನಿಗಳು ನೀಡುವ ರಕ್ತವನ್ನು ಸಂಗ್ರಹಿಸಿ ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ನೀಡಲಾಗುತ್ತಿದೆ. ಸಂಗ್ರಹಿಸಿದ ರಕ್ತವನ್ನು ಮೂರು ವಿಧದಲ್ಲಿ ವಿಂಗಡಿಸಲಾಗುವುದು. ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳೆಂದು ವಿಭಜಿಸಿ, ಆಯಾ ರೋಗಿಯ ಅವಶ್ಯಕತೆಗೆ ಅನುಗುಣವಾಗಿ ನೀಡಲಾಗುತ್ತಿದೆ. ಡೆಂಗೆ ರೋಗದಿಂದ ಬಳಲುತ್ತಿರುವವರಿಗೆ ಬಿಳಿ ರಕ್ತಗಳನ್ನು ನೀಡಲಾಗುವುದು. ಒಬ್ಬ ವ್ಯಕ್ತಿ ನೀಡಿದ ರಕ್ತದಿಂದ ಮೂರು ವ್ಯಕ್ತಿಗಳನ್ನು ಬದುಕಿಸಬಹುದೆಂದು ಮಾಹಿತಿ ನೀಡಿದರು.
ಡಾ. ಪ್ರಿಯಾಂಕ ತಳವಾರ, ಡಾ. ಎಸ್.ವಿ. ಹುಣಶ್ಯಾಳ, ಡಾ. ಗಿರೀಶ ಕುಲಕರ್ಣಿ, ಡಾ. ಎಸ್.ಬಿ. ಪಾಟೀಲ, ಗ್ರಾಪಂ ಅಧ್ಯಕ್ಷ ಅಜೀತ ಖೆಮಲಾಪುರೆ, ಉಪಾಧ್ಯಕ್ಷೆ ಜಯಶ್ರೀ ಶಿಂಧೆ, ಅನೀಲ ಹಂಜೆ, ಶಾಂತಿನಾಥ ಪಾಟೀಲ, ದಶರಥ ಭೋವಿ, ಅರಿಹಂತ ಮಗದುಮ್ಮ, ದೀಪಾ ಹಿರೇಮಠ, ಪಿಡಿಒ ಎಸ್.ಆರ್. ಪಾಟೀಲ ಸೇರಿದಂತೆ ಅನೇಕರು ಇದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 48 ಜನರಿಂದ 48 ಯುನಿಟ್ ರಕ್ತ ಸಂಗ್ರಹಿಸಲಾಯಿತು.