ಆ್ಯಪ್ನಗರ

ಸಿಂಡಿಕೇಟ್‌ ಸದಸ್ಯತ್ವ ರದ್ದತಿಗೆ ಆಗ್ರಹ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ರಾಜು ಚಿಕ್ಕನಗೌಡರ ಅವರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿ ಮಾನವ ಬಂಧುತ್ವ ವೇದಿಕೆ

Vijaya Karnataka 6 Oct 2018, 5:00 am
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ರಾಜು ಚಿಕ್ಕನಗೌಡರ ಅವರ ಸದಸ್ಯತ್ವ ರದ್ದುಪಡಿಸುವಂತೆ ಆಗ್ರಹಿಸಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Vijaya Karnataka Web BEL-5 LBS 1


ಸಿಂಡಿಕೇಟ್‌ ಸದಸ್ಯ ರಾಜು ಚಿಕ್ಕನಗೌಡರ ಅವರು ರಾಣಿ ಚನ್ನಮ್ಮ ವಿವಿಯಲ್ಲಿ ಕೋಮುವಾದ, ಜಾತೀಯತೆ ಮಾಡುತ್ತಿದ್ದಾರೆ. ವಿವಿಯ ಎಲ್ಲ ವಿಷಯಗಳಲ್ಲೂ ಅನವಶ್ಯಕವಾಗಿ ಭಾಗಿಯಾಗುತ್ತಿದ್ದಾರೆ. ಅವ್ಯವಹಾರಗಳಲ್ಲೂ ಭಾಗಿಯಾಗಿದ್ದಾರೆ. ಅಲ್ಲದೆ, ಚನ್ನಮ್ಮ ವಿವಿಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಯುಜಿಸಿ ನಿಯಮದ ಪ್ರಕಾರ ಸಿಂಡಿಕೇಟ್‌ ಸದಸ್ಯರಾಗಿ ಒಂದು ಬಾರಿ ಮಾತ್ರ ಕಾರ್ಯನಿರ್ವಹಿಸಬೇಕು. ಆದರೆ, ರಾಜು ಚಿಕ್ಕನಗೌಡರ ಅವರನ್ನು ಎರಡನೇ ಅವಧಿಗೆ ಕಾನೂನು ಬಾಹಿರವಾಗಿ ಆಯ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ನಗರ ಸೇವಕಿ ಜಯಶ್ರೀ ಮಾಳಗಿ, ರವೀಂದ್ರ ನಾಯ್ಕರ್‌, ಮಲ್ಲಗೌಡ ಪಾಟೀಲ, ಕಿರಣ ರಜಪೂತ, ಜಯರಾಜ ಹಲಗೇಕರ್‌, ಯುವರಾಜ ತಳವಾರ, ಅನಿಲ ಪಾವಸಿ, ರಾಮಕೃಷ್ಣ ಪಾನಬುಡೆ, ಬಾಳೇಶ ದಾಸನಟ್ಟಿ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ