Please enable javascript.ತಹಸೀಲ್ದಾರರ ವರ್ಗಾವಣೆ - Tahsildar's transfer - Vijay Karnataka

ತಹಸೀಲ್ದಾರರ ವರ್ಗಾವಣೆ

Vijaya Karnataka 4 Apr 2018, 5:00 am
Subscribe

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ರಾಜ್ಯ ಸರಕಾರ ಕಂದಾಯ ಇಲಾಖೆಯ ಕೆಲ ತಹಸೀಲ್ದಾರರನ್ನು ವರ್ಗಾವಣೆಗೊಳಿಸಿದೆ...

tahsildars transfer
ತಹಸೀಲ್ದಾರರ ವರ್ಗಾವಣೆ

ಬೆಳಗಾವಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ರಾಜ್ಯ ಸರಕಾರ ಕಂದಾಯ ಇಲಾಖೆಯ ಕೆಲ ತಹಸೀಲ್ದಾರರನ್ನು ವರ್ಗಾವಣೆಗೊಳಿಸಿದೆ. ಬೆಳಗಾವಿ ಭೂಸ್ವಾಧೀನ ಕಚೇರಿಯ ವಿಶೇಷ ತಹಸೀಲ್ದಾರ ಸ್ಥಾನಕ್ಕೆ ಜಮಖಂಡಿ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ ಎಸ್‌.ಎಸ್‌.ನಾಯಕಲ್‌ಮಠ ಅವರನ್ನು ನೇಮಕ ಮಾಡಲಾಗಿದೆ. ಬೈಲಹೊಂಗಲ ತಹಸೀಲ್ದಾರ ಸ್ಥಾನಕ್ಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ ವಿ.ಜಿ.ಗುಳಗುಳಿ, ಬೆಳಗಾವಿ ತಾಲೂಕಿನ ತಹಸೀಲ್ದಾರ ಮಂಜುಳಾ ನಾಯಕ್‌ ಅವರನ್ನು ಮುದ್ದೇಬಿಹಾಳ ತಹಸೀಲ್ದಾರ, ಪ್ರಾದೇಶಿಕ ಆಯುಕ್ತ ಕಚೇರಿ ತಹಸೀಲ್ದಾರ ಆರ್‌.ಜೆ.ಹೊಸೂರ ಅವರನ್ನು ಕಾರವಾರ ತಹಸೀಲ್ದಾರ ಸ್ಥಾನಕ್ಕೆ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಪರಿಷತ್‌ ಕಾರ್ಯದರ್ಶಿ ಎಚ್‌.ಬಿ.ಪೀರಜಾದೆ ಅವರನ್ನು ಆಳಂದ ತಹಸೀಲ್ದಾರ ಸ್ಥಾನಕ್ಕೆ ವರ್ಗ ಮಾಡಲಾಗಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ