ಆ್ಯಪ್ನಗರ

ದೇಶನೂರ ಬಿಸಿಎಂ ಹಾಸ್ಟೇಲ್‌ ಅವ್ಯವಸ್ಥೆ ಸುಧಾರಿಸಿ

ಬೈಲಹೊಂಗಲ : ತಾಲೂಕಿನ ದೇಶನೂರ ಗ್ರಾಮದ ದಿ ದೇವರಾಜ ಅರಸು ಹಿಂದುಳಿದ ವರ್ಗದ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ...

Vijaya Karnataka 1 Feb 2019, 5:00 am
ಬೈಲಹೊಂಗಲ : ತಾಲೂಕಿನ ದೇಶನೂರ ಗ್ರಾಮದ ದಿ. ದೇವರಾಜ ಅರಸು ಹಿಂದುಳಿದ ವರ್ಗದ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿದೆ. ಮಕ್ಕಳಿಗೆ ಮೂಲ ಸೌಕರ್ಯವಿಲ್ಲ, ಜತೆಗೆ ಊಟದ ವ್ಯವಸ್ಥೆಯೂ ಸರಿಯಿಲ್ಲ ಎಂದು ಆರೋಪಿಸಿ ವಾಲ್ಮೀಕಿ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-31HTP6


ಈ ವೇಳೆ ವಾಲ್ಮೀಕಿ ಸೇನೆ ತಾಲೂಕಾಧ್ಯಕ್ಷ ಸಿದ್ದಪ್ಪ ಜಳಕದ ಮಾತನಾಡಿ, ದೇಶನೂರ ಗ್ರಾಮದ ಹಾಸ್ಟೆಲ್‌ಗೆ ಭೇಟಿ ನೀಡಿದ ವೇಳೆ ಹಾಸ್ಟಲ್‌ನ ಅವ್ಯವಸ್ಥೆ ಬೆಳಕಿಗೆ ಬಂತು. ಸರಕಾರದ ನಿಯಮದಂತೆ ಮಕ್ಕಳಿಗೆ ಎರಡು ಚಪಾತಿ ನೀಡಬೇಕೆಂದಿದ್ದರೂ ಒಂದೇ ಚಪಾತಿ ನೀಡಿ ಅರ್ಧ ಊಟ ವಿತರಿಸುತ್ತಿದ್ದಾರೆ. ಬೆಳಗ್ಗೆ ಮಾಡಿದ ಆಹಾರವನ್ನೇ ಸಂಜೆ ಮಕ್ಕಳಿಗೆ ವಿತರಿಸುತ್ತಿದ್ದಾರೆ. ಟೂತ್‌ಪೇಸ್ಟ್‌, ಸೋಪ್‌ ಒಳಗೊಂಡ ಆರೋಗ್ಯ ಕಿಟ್‌ ವಿತರಿಸುತ್ತಿಲ್ಲ ಎಂದು ದೂರಿದ್ದಾರೆ. ಹಾಸ್ಟೆಲ್‌ ವಾರ್ಡ್‌ನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಾಂತಾ ಮರಿಗೌಡರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸೋಮಪ್ಪ ನಾಯ್ಕರ, ರಮೇಶ ತಳವಾರ, ಮಲ್ಲಿಕಾರ್ಜುನ ಕಿತ್ತೂರ, ಶಿವಾನಂದ ಸೊಲಬನ್ನವರ, ಬಸವರಾಜ ಕೋರಿಕೊಪ್ಪ, ಫಕ್ಕೀರಪ್ಪ ಖಾನನ್ನವರ, ಬಾಳೇಶ ಮರೆಪ್ಪನವರ, ಗಿರಿಧರ ಗುಜ್ಜರ, ಬಸಪ್ಪ ನೇಗಿನಹಾಳ, ಅಜ್ಜಪ್ಪ ತಳವಾರ, ನಿಂಗಪ್ಪ ತಳವಾರ, ರವಿ ಶಾಪೂರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ