ಆ್ಯಪ್ನಗರ

ಕೃಷಿ ಯೋಜನೆಗಳ ಲಾಭ ಪಡೆದು ಸ್ವಾವಲಂಬಿಗಳಾಗಿ

ರಾಯಬಾಗ: ಸರಕಾರ ರೈತರಿಗಾಗಿ ಕೃಷಿಭಾಗ್ಯ, ರೈತಸಿರಿ ಯೋಜನೆಗಳು ಸೇರಿದಂತೆ ಕೃಷಿ ಇಲಾಖೆಯ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳ ...

Vijaya Karnataka 10 Jul 2019, 5:00 am
ರಾಯಬಾಗ : ಸರಕಾರ ರೈತರಿಗಾಗಿ ಕೃಷಿಭಾಗ್ಯ, ರೈತಸಿರಿ ಯೋಜನೆಗಳು ಸೇರಿದಂತೆ ಕೃಷಿ ಇಲಾಖೆಯ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂದು ಚಿಕ್ಕೋಡಿಯ ಉಪ ಕೃಷಿ ನಿರ್ದೇಶಕ ಎಚ್‌.ಡಿ. ಕೊಳೇಕರ ಹೇಳಿದರು.
Vijaya Karnataka Web BEL-9RAIBAG1PHOTO


ಮಂಗಳವಾರ ಪಟ್ಟಣದ ಡಾ. ಬಾಬು ಜಗಜೀವನರಾಮ್‌ ಸಭಾ ಭವನದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಒಂದೇ ಬೆಳಗೆ ಅಂಟಿಕೊಳ್ಳದೆ ಶೂನ್ಯ ಬಂಡವಾಳ ಕೃಷಿ ಹಾಗೂ ಸಾವಯುವ ಕೃಷಿಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಲ್ಲದೆ ಇಂದು ಬಹು ಬೇಡಿಕೆಯಲ್ಲಿರುವ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬೇಕೆಂದರು.

ಜಿಲ್ಲೆ ಹಾಗೂ ತಾಲೂಕಿನಲ್ಲಿ ಮಳೆಯ ಪ್ರಮಾಣ ತೀರ ಕಡಿಮೆಯಾಗಿದೆ. ಇಲಾಖೆಯಿಂದ ಉತ್ತಮ ಗುಣಮಟ್ಟದ ಬೀಜ ಗೊಬ್ಬರಗಳನ್ನು ನೀಡಲಾಗಿದೆ. ತಾಲೂಕಿನಲ್ಲಿ 29326 ಹೆಕ್ಟೆರ್‌ ಪ್ರದೇಶದಲ್ಲಿ ಕಬ್ಬು, ಗೋಧಿ, ಹಾಗೂ ಗೋವಿನ ಜೋಳ ಬೆಳೆಯಲಾಗಿದ್ದು ಇದರಲ್ಲಿ 5000 ಹೆಕ್ಟೇರ್‌ ಪ್ರದೇಶದಲ್ಲಿ ಆಲಸಂದಿ, ಹೆಸರು, ಮಡಕೆ ಬೆಳೆಯಲಾಗಿದೆ. ಪ್ರತಿಯೊಬ್ಬ ರೈತರು ಹನಿ ನೀರಾವರಿ ಮಾಡಿ ನೀರನ್ನು ಮಿತವಾಗಿ ಬಳಸಬೇಕೆಂದರು.

ಸಹಾಯಕ ಕೃಷಿ ನಿರ್ದೇಶಕ ಎಂ.ಸಿ.ಮಣ್ಣಿಕೇರಿ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಶೇ.60 ರಷ್ಟು ಬಿತ್ತನೆಯಾಗಿದೆ. ಬರುವ ಹದಿನೈದು ದಿನಗಳಲ್ಲಿ ಶೇಕಡಾ 90 ರಷ್ಟು ಬಿತ್ತನೆಯಾಗುತ್ತದೆ. ರೈತರಿಗೆ ಬೀಜ, ಗೊಬ್ಬರ, ಕೃಷಿ ಉಪಕರಣಗಳ ಯಾವುದೇ ಕೊರತೆ ಇಲ್ಲವೆಂದರು.

ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ನಿಂಗಪ್ಪ ಪಕಾಂಡಿ, ತಾಪಂ ಸದಸ್ಯರಾದ ನಾಮದೇವ ಕಾಂಬಳೆ, ಚವಗೌಡ ಪಾಟೀಲ, ಬಸಪ್ಪ ಖಿಚಡೆ, ಮಾರುತಿ ನಾಯಿಕ, ಕಲ್ಲಪ್ಪ ಹಾರೂಗೇರಿ, ಸರಸ್ವತಿ ಸಂಪಗಾಂವಿ, ಸುರೇಶ ಐಹೊಳೆ, ತಾಲೂಕಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಸಂಜು ಕುಸ್ತಿಗಾರ, ಎಂ.ಬಿ.ಪಾಟೀಲ, ಎ.ಎಸ್‌.ಚೌಗಲಾ, ಎಸ್‌.ಬಿ.ಕುಂಬಾರ, ಎಂ.ಎಸ್‌.ಕಳ್ಳಿಮನಿ, ಎಂ.ಎಸ್‌.ಸನದಿ, ಬಿ.ಎ.ಕಿಲ್ಲೇದಾರ, ಎಂ.ಕೆ.ಹುಂಚ್ಯಾಳ, ಆರ್‌.ಎಸ್‌.ದತ್ತವಾಡೆ ಹಾಗೂ ರೈತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ