ಆ್ಯಪ್ನಗರ

ಸಾಮೂಹಿಕ ಹಲ್ಲೆಕೋರರ ಮೇಲೆ ಕಠಿಣ ಕ್ರಮ ಜರುಗಿಸಿ

ಚಿಕ್ಕೋಡಿ: ಜಾರ್ಖಂಡ, ರಾಜಸ್ಥಾನ ಸೇರಿದಂತೆ ದೇಶಾದ್ಯಂತ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 266 ಸಾಮೂಹಿಕ ಹಲ್ಲೆ ಪ್ರಕರಣಗಳು ನಡೆದಿವೆ...

Vijaya Karnataka 10 Jul 2019, 5:00 am
ಚಿಕ್ಕೋಡಿ : ಜಾರ್ಖಂಡ, ರಾಜಸ್ಥಾನ ಸೇರಿದಂತೆ ದೇಶಾದ್ಯಂತ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 266 ಸಾಮೂಹಿಕ ಹಲ್ಲೆ ಪ್ರಕರಣಗಳು ನಡೆದಿವೆ. ಮುಸ್ಲಿಂ ಹಾಗೂ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಲ್ಲೆಗಳು ಖಂಡನೀಯ. ಇಂಥ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಚಿಕ್ಕೋಡಿ ತಹಸೀಲ್ದಾರ್‌ ಡಾ. ಸಂತೋಷಕುಮಾರ ಬಿರಾದಾರ ಅವರ ಮೂಲಕ ರಾಷ್ಟ್ರಪತಿಗೆ ನಾನಾ ಸಂಘಟನೆಗಳಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
Vijaya Karnataka Web BEL-9CKD4


ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿದ ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ, ದಲಿತ ಸಂಘರ್ಷ ಸಮಿತಿ, ಟಿಪ್ಪು ಸುಲ್ತಾನ ಸಂಘರ್ಷ ಸಮಿತಿ, ಭಾರತ ಮುಕ್ತಿ ಮೋರ್ಚಾ, ರಾಷ್ಟ್ರೀಯ ಮುಸ್ಲಿಂ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಮನವಿ ಸಲ್ಲಿಸಿದರು.

ಈ ವೇಳೆ ಬಹುಜನ ಕ್ರಾಂತಿ ಮೋರ್ಚಾದ ತಾಲೂಕಾಧ್ಯಕ್ಷ ರಹೀಸ್‌ಅಹ್ಮದ್‌ ಹವಾಲ್ದಾರ ಮಾತನಾಡಿ, ಒಂದು ಜನಸಮೂಹವನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ದೇಶದಲ್ಲಿ ಹಲ್ಲೆಗಳು ಹೆಚ್ಚುತ್ತಿವೆ. ಇಂಥ ಕುಕೃತ್ಯದಲ್ಲಿ ತೊಡಗಿದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇತ್ತೀಚೆಗೆ ಹಲ್ಲೆಗೊಳಗಾದ ಅನ್ಸಾರಿ ಕುಟುಂಬಕ್ಕೆ ಸರಕಾರಿ ನೌಕರಿ, ಪರಿಹಾರ ಧನ ನೀಡಬೇಕು. ಆರೋಪಿಗಳ ರಕ್ಷಣೆಗೆ ನಿಲ್ಲುವ ಪೊಲೀಸರನ್ನು ಹಾಗೂ ಘಟನೆಯಲ್ಲಿ ತೊಡಗಿರುವ ಪಕ್ಷ ಸಂಘಟನೆಯ ಪರವಾನಗಿ ವಜಾಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ಬಸವರಾಜ ಡಾಕೆ, ನ್ಯಾ. ಶಂಕರಾನಂದ, ಸಮೀರ ಮುಲ್ಲಾ, ಟಿ.ಇ. ಸನದಿ, ರಿಜವಾನ ಕಡಗಾವಕರ್‌, ಅಬೀದ ಮುಲ್ಲಾ, ಶಕೀಲ ಗೌಂಡಿ, ಮುಬಾರಕ ಗಡಕರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ