ಆ್ಯಪ್ನಗರ

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಶಿರಸಂಗಿ: ಗ್ರಾಮದಲ್ಲಿ ನಡೆದ ಸವದತ್ತಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸಮಾರಂಭವನ್ನು ಸ್ಥಳೀಯ ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಗೋಡಿ ಉದ್ಘಾಟಿಸಿದರು...

Vijaya Karnataka 15 Sep 2019, 5:00 am
ಶಿರಸಂಗಿ: ಗ್ರಾಮದಲ್ಲಿನಡೆದ ಸವದತ್ತಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸಮಾರಂಭವನ್ನು ಸ್ಥಳೀಯ ಗ್ರಾಪಂ ಅಧ್ಯಕ್ಷ ಕಲ್ಲಪ್ಪ ಗೋಡಿ ಉದ್ಘಾಟಿಸಿದರು.
Vijaya Karnataka Web 14-SHIRASANGI-1_53


ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಬೆಳಗಾವಿ ಜಿಪಂ, ಸವದತ್ತಿ ತಾಪಂ, ಕಲ್ಲಾಪುರದ ಶ್ರೀ ಕಲ್ಮೇಶ್ವರ ಕಲಾ ಹಾಗೂ ಕ್ರೀಡಾ ಆರಾಧನಾ ಸಂಘದ ಸಂಯುಕ್ತ ಆಶ್ರಯದಲ್ಲಿಇದನ್ನು ಹಮ್ಮಿಕೊಳ್ಳಲಾಗಿತ್ತು. ಜಿಪಂ ಸದಸ್ಯ ಎಮ್‌.ಎಸ್‌. ಹಿರೇಕುಂಬಿ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ ಮಾತನಾಡಿ, ಕ್ರೀಡೆಯಲ್ಲಿಸೋಲು- ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು.

ಸವದತ್ತಿ ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಬೆಳಗಾವಿ ಜಿಪಂ ಸದಸ್ಯರಾದ ಫಕ್ಕೀರಪ್ಪ ಹದ್ದನ್ನವರ, ಅಜಿತಕುಮಾರ ದೇಸಾಯಿ, ಬಸವರಾಜ ಬಂಡಿವಡ್ಡರ, ತಾಪಂ ಸದಸ್ಯ ಮಹಾರಾಜ ಕಣವಿ, ವಿ.ವಿ. ವೀರನಗೌಡ್ರ, ಅಪ್ಪು ಶಿಂಧೆ, ಸಂಗಪ್ಪ ಜ್ಯಾಯಿ, ಮಲ್ಲಪ್ಪ ಕಪಲನ್ನವರ ಉಪಸ್ಥಿತರಿದ್ದರು. ಬಿ.ಪಿ. ಗಾಣಿಗೇರ ನಿರೂಪಿಸಿದರು. ಭವಾನಿ ಖೊಂದುನಾಯ್ಕ ಸ್ವಾಗತಿಸಿದರು. ಎಚ್‌.ಕೆ. ಗುರ್ಲಕಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ