ರಾಯಬಾಗ : ರಾಯಬಾಗ ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಿಲ್ಲವೆಂದು ಆರೋಪಿಸಿ ಸೋಮವಾರ ತಾಪಂ ಬಾಗಿಲು ಮುಚ್ಚಿ ನಿಜಶರಣ ಅಂಬಿಗರ ಚೌಡಯ್ಯ ತಾಲೂಕು ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೋಮವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಇದ್ದುದರಿಂದ ತಾಪಂ ಕಾರ್ಯಾಲಯದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜಯಂತಿ ಆಚರಿಸದ ಕಾರಣ ಸ್ಥಳಕ್ಕೆ ಆಗಮಿಸಿದ ಅಂಬಿಗರ ಚೌಡಯ್ಯ ಸಂಘದವರು ತಾಪಂ ಕಚೇರಿಯ ಮುಖ್ಯದ್ವಾರ ಮುಚ್ಚಿ ಪ್ರತಿಭಟಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಜಕ್ಕಪ್ಪಗೋಳ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ವಿಷಯ ತಿಳಿದ ತಹಸೀಲ್ದಾರ್ ಡಿ.ಎಚ್. ಕೋಮಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ವರದಿ ಮಾಡುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಿ ಕೂಡಲೇ ಕಾರ್ಯಾಲದಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸುವಂತೆ ಆದೇಶ ನೀಡಿ ಜಯಂತಿ ಆಚರಿಸಿದ ನಂತರ ಕಚೇರಿಯ ಕಾರ್ಯ ಕಲಾಪಗಳು ನಡೆಯುವಂತೆ ನೋಡಿಕೊಂಡರು.
ನಿಜಶರಣ ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಬಾಬುರಾವ ಕೋಳಿ, ಪಪಂ ಸದಸ್ಯ ರವಿ ತರಾಳ, ಶಿವಾನಂದ ಕೋಳಿ, ಬಸವರಾಜ ಕೋಳಿ, ಸುನೀಲ ಕೋಳಿ, ಮಹಾಂತೇಶ ಕೋಳಿ, ಪಿಂಟು ಕೋಳಿ, ದಶರಥ ಕೋಳಿ, ಸಂತೋಷ ಕೋಳಿ ಮತ್ತಿತರು ಇದ್ದರು.
ಸೋಮವಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಇದ್ದುದರಿಂದ ತಾಪಂ ಕಾರ್ಯಾಲಯದಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಜಯಂತಿ ಆಚರಿಸದ ಕಾರಣ ಸ್ಥಳಕ್ಕೆ ಆಗಮಿಸಿದ ಅಂಬಿಗರ ಚೌಡಯ್ಯ ಸಂಘದವರು ತಾಪಂ ಕಚೇರಿಯ ಮುಖ್ಯದ್ವಾರ ಮುಚ್ಚಿ ಪ್ರತಿಭಟಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಂ. ಜಕ್ಕಪ್ಪಗೋಳ ಹಾಗೂ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ವಿಷಯ ತಿಳಿದ ತಹಸೀಲ್ದಾರ್ ಡಿ.ಎಚ್. ಕೋಮಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ವರದಿ ಮಾಡುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಿ ಕೂಡಲೇ ಕಾರ್ಯಾಲದಯಲ್ಲಿ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸುವಂತೆ ಆದೇಶ ನೀಡಿ ಜಯಂತಿ ಆಚರಿಸಿದ ನಂತರ ಕಚೇರಿಯ ಕಾರ್ಯ ಕಲಾಪಗಳು ನಡೆಯುವಂತೆ ನೋಡಿಕೊಂಡರು.
ನಿಜಶರಣ ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಬಾಬುರಾವ ಕೋಳಿ, ಪಪಂ ಸದಸ್ಯ ರವಿ ತರಾಳ, ಶಿವಾನಂದ ಕೋಳಿ, ಬಸವರಾಜ ಕೋಳಿ, ಸುನೀಲ ಕೋಳಿ, ಮಹಾಂತೇಶ ಕೋಳಿ, ಪಿಂಟು ಕೋಳಿ, ದಶರಥ ಕೋಳಿ, ಸಂತೋಷ ಕೋಳಿ ಮತ್ತಿತರು ಇದ್ದರು.