ಚಿಕ್ಕೋಡಿ : ಪ್ರತಿ ತಿಂಗಳು ಸಮರ್ಪಕ ವೇತನ ಕೊಡಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಎಸ್ಎಸ್ಎ ಶಿಕ್ಷ ಕರು ಗುರುವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕಾ ಅಧ್ಯಕ್ಷ ಎಸ್.ಎ. ಖಡ್ಡ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ನವಂಬರ್ ತಿಂಗಳಿಂದ ಎಸ್ಎಸ್ಎ ಶಿಕ್ಷ ಕರ ವೇತನ ಬಂದಿಲ್ಲ. ಮೂರು ಮೂರು ತಿಂಗಳು ವೇತನ ದೊರೆಯದ ಕಾರಣ ಶಿಕ್ಷ ಕರು ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಶಿಕ್ಷ ಣ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈಗಲಾದರೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘಟನೆ ಮುಖಾಂತರ ಅಧಿಕಾರಿಗಳ ಮೇಲೆ ಒತ್ತಡ ತಂದು ಮೂರು ತಿಂಗಳ ವೇತನ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಧ್ಯಕ್ಷ ರಲ್ಲಿ ಮನವಿ ಮಾಡಿದರು.
ಬರುವ ಒಂದು ವಾರದಲ್ಲಿ ಮೂರು ತಿಂಗಳ ವೇತನವನ್ನು ಒಂದೇ ಬಾರಿಗೆ ಕೊಡುವ ವ್ಯವಸ್ಥೆ ಮಾಡದಿದ್ದಲ್ಲಿ ಎಸ್ಎಸ್ಎ ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲ ಶಿಕ್ಷ ಕರು ಕೂಡ ಶಿಕ್ಷ ಕರ ಸಂಘದ ಸಹಕಾರದೊಂದಿಗೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷ ಕರ ಸಂಘಟನೆ ಪದಾಧಿಕಾರಿಗಳು ಮತ್ತು ಶಿಕ್ಷ ಣ ಇಲಾಖೆಯ ಅಧಿಕಾರಿಗಳು ಶಿಕ್ಷ ಕರ ಸಮಸ್ಯೆಗೆ ಸ್ಪಂಧಿಸಬೇಕು. ಕೂಡಲೇ ಎಸ್ಎಸ್ಎ ಶಿಕ್ಷ ಕರ ವೇತನ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಎಸ್ಎಸ್ಎ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಕರಾದ ಎಸ್.ಎಂ. ಡಂಗ, ಆರ್.ಕೆ. ಮುನ್ನೋಳಿ, ಎಸ್.ಎಂ. ಕಿವಡಗೋಳ, ಎಸ್.ಎಂ. ಕಮತೆ, ವಿ.ಎಸ್. ಖೋತ, ಡಿ.ಎಚ್. ಕಾಂಬಳೆ, ಯು.ಐ. ಪಾಟೀಲ, ಆರ್.ವಿ. ಪೋತದಾರ, ಆರ್.ಎಸ್. ಗುಂಡಪ್ಪಗೋಳ, ಎಸ್.ಬಿ. ಖೋತ, ಪಿ.ಪಿ. ಸಾಮಕ, ರಾಜು ರುದ್ರಗೌಡರ, ಸಿ.ಎಂ. ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.
ಕಳೆದ ನವಂಬರ್ ತಿಂಗಳಿಂದ ಎಸ್ಎಸ್ಎ ಶಿಕ್ಷ ಕರ ವೇತನ ಬಂದಿಲ್ಲ. ಮೂರು ಮೂರು ತಿಂಗಳು ವೇತನ ದೊರೆಯದ ಕಾರಣ ಶಿಕ್ಷ ಕರು ಕಂಗಾಲಾಗುವ ಪರಿಸ್ಥಿತಿ ಬಂದಿದೆ. ಶಿಕ್ಷ ಣ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಈಗಲಾದರೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘಟನೆ ಮುಖಾಂತರ ಅಧಿಕಾರಿಗಳ ಮೇಲೆ ಒತ್ತಡ ತಂದು ಮೂರು ತಿಂಗಳ ವೇತನ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಧ್ಯಕ್ಷ ರಲ್ಲಿ ಮನವಿ ಮಾಡಿದರು.
ಬರುವ ಒಂದು ವಾರದಲ್ಲಿ ಮೂರು ತಿಂಗಳ ವೇತನವನ್ನು ಒಂದೇ ಬಾರಿಗೆ ಕೊಡುವ ವ್ಯವಸ್ಥೆ ಮಾಡದಿದ್ದಲ್ಲಿ ಎಸ್ಎಸ್ಎ ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲ ಶಿಕ್ಷ ಕರು ಕೂಡ ಶಿಕ್ಷ ಕರ ಸಂಘದ ಸಹಕಾರದೊಂದಿಗೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಿಕ್ಷ ಕರ ಸಂಘಟನೆ ಪದಾಧಿಕಾರಿಗಳು ಮತ್ತು ಶಿಕ್ಷ ಣ ಇಲಾಖೆಯ ಅಧಿಕಾರಿಗಳು ಶಿಕ್ಷ ಕರ ಸಮಸ್ಯೆಗೆ ಸ್ಪಂಧಿಸಬೇಕು. ಕೂಡಲೇ ಎಸ್ಎಸ್ಎ ಶಿಕ್ಷ ಕರ ವೇತನ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಎಸ್ಎಸ್ಎ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಕರಾದ ಎಸ್.ಎಂ. ಡಂಗ, ಆರ್.ಕೆ. ಮುನ್ನೋಳಿ, ಎಸ್.ಎಂ. ಕಿವಡಗೋಳ, ಎಸ್.ಎಂ. ಕಮತೆ, ವಿ.ಎಸ್. ಖೋತ, ಡಿ.ಎಚ್. ಕಾಂಬಳೆ, ಯು.ಐ. ಪಾಟೀಲ, ಆರ್.ವಿ. ಪೋತದಾರ, ಆರ್.ಎಸ್. ಗುಂಡಪ್ಪಗೋಳ, ಎಸ್.ಬಿ. ಖೋತ, ಪಿ.ಪಿ. ಸಾಮಕ, ರಾಜು ರುದ್ರಗೌಡರ, ಸಿ.ಎಂ. ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.