ಆ್ಯಪ್ನಗರ

ತೆಲಸಂಗ ಗ್ರಾಪಂ ಕಚೇರಿಗೆ ಗ್ರಾಮಸ್ಥರಿಂದ ಬೀಗ

ತೆಲಸಂಗ: ಚರಂಡಿಗಳನ್ನು ಸ್ವಚ್ಛಗೊಳಿಸಿದ ಗ್ರಾಪಂ ಕ್ರಮ ಖಂಡಿಸಿ ಸೋಮವಾರ ಮಹಿಳೆಯರು ಗ್ರಾಪಂ ...

Vijaya Karnataka 24 Jul 2018, 5:00 am
ತೆಲಸಂಗ: ಚರಂಡಿಗಳನ್ನು ಸ್ವಚ್ಛಗೊಳಿಸಿದ ಗ್ರಾಪಂ ಕ್ರಮ ಖಂಡಿಸಿ ಸೋಮವಾರ ಮಹಿಳೆಯರು ಗ್ರಾಪಂ ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿ, ಕಚೇರಿಕೆ ಬೀಗ ಜಡಿದು ಪ್ರತಿಭಟಿಸಿದರು.
Vijaya Karnataka Web BEL-23TELSANG2


ಇದೇ ವೇಳೆ ಪ್ರತಿಭಟನಾಕರರು ಮಾತನಾಡಿ, ಗ್ರಾಮದ ವಿವೇಕಾನಂದ ನಗರದ ರಸ್ತೆ ಮೇಲೆ ಬಚ್ಚಲು ನಿಂತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಪಿಡಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಸ್ಪಂದಿಸದ ಪಿಡಿಒ ನಮ್ಮೂರಿಗೆ ಬೇಡವೇ ಬೇಡ ಪಟ್ಟು ಹಿಡಿದರು.

ಇದೇ ವೇಳೆ ಗ್ರಾಪಂ ಕಚೇರಿಗೆ ಹೋಗಲೆತ್ನಿಸಿದ ಪಿಡಿಒ ಬೀರಪ್ಪ ಕಡಗಂಚಿ ಅವರನ್ನು ತಡೆದು, ನಮ್ಮೊಂದಿಗೆ ಬಂದು ಸ್ಥಳೀಯ ಸಮಸ್ಯೆಯನ್ನು ತಿಳಿಯುವುವಂತೆ ಪಟ್ಟು ಹಿಡಿದರು.

ಸ್ಥಳಕ್ಕೆ ತೆರಳಿದ ಪಿಡಿಒ ಬೀರಪ್ಪ ಕಡಗಂಚಿ, ನೀವು ಸಹಕಾರ ಕೊಟ್ಟರೆ ಖಂಡಿತಾ ನಾನು ಕೆಲಸ ಮಾಡಿಸುವೆ ಎಂದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು, ಈ ನಾಟಕ ಬೇಕಿಲ್ಲ. ಕಳೆದ ಎರಡು ವರ್ಷಗಳಿಂದ ಇದೇ ಮಾತು ಕೇಳುತ್ತಿದ್ದೇವೆ. ಮೊದರು ಸ್ವಚ್ಛತೆಗೆ ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ