ಆ್ಯಪ್ನಗರ

ಕಿರುತೆರೆ ಕಲಾವಿದೆ ಶ್ರಾವಣಿಗೆ ಸನ್ಮಾನ

ಬೆಳಗಾವಿ: ಕಿರುತೆರೆ ಧಾರಾವಾಹಿ 'ಮಾಂಗಲ್ಯಂ ತಂತು ನಾನೇನ'ದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ಕಲಾವಿದೆ, ಬೆಳಗಾವಿಯ ಶ್ರಾವಣಿ (ದಿವ್ಯಾ ವಾಗೂಕರ) ಅವರನ್ನು ...

Vijaya Karnataka 15 Aug 2018, 5:00 am
ಬೆಳಗಾವಿ: ಕಿರುತೆರೆ ಧಾರಾವಾಹಿ 'ಮಾಂಗಲ್ಯಂ ತಂತು ನಾನೇನ'ದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ಕಲಾವಿದೆ, ಬೆಳಗಾವಿಯ ಶ್ರಾವಣಿ (ದಿವ್ಯಾ ವಾಗೂಕರ) ಅವರನ್ನು ತಾಳೂಕರ ಚಿತ್ರಕಲಾ ಮತ್ತು ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
Vijaya Karnataka Web BLG-1408-2-52-TALUKAR


ಅನ್ನಪೂರ್ಣ ಕೃಷ್ಣರಾಜೇಂದ್ರ ತಾಳೂಕರ, ನಿರ್ಮಲಾ ಕಾಮಕರ, ರೇಖಾ ಮೊರಕರ ಹಾಗೂ ಗಾಯತ್ರಿ, ರಾಜೇಶ್ವರಿ, ಸುಧಾರಾಣಿ, ಆರತಿ, . ಮಂಜುಳಾ, ಪ್ರೇಮಾ, ಸಂಜಯ ಹಜೇರಿ, ಮಂಜುನಾಥ ಮಕಾಟಿ, ರಾಘವೇಂದ್ರ, ವಿಶ್ವನಾಥ ಅವರು ಶ್ರಾವಣಿ ಅವರಿಗೆ ಶಾಲು ಹೊದೆಸಿ, ನೆನಪಿನ ಕಾಣಿಕೆ, ಫಲಪುಷ್ಪ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರಾವಣಿ ಸದ್ಯ 'ಪ್ರೀತಿಯ ಅಂಬಾರಿ', ಲೈಟಾಗಿ ಲೌವ್‌ ಆಗಿದೆ' ಎಂಬೆರಡು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ತಮ್ಮ ತಂದೆ ಶಿವಕುಮಾರ ಹಾಗೂ ಕುಟುಂಬದವರ ಅಪಾರ ಪ್ರೋತ್ಸಾಹ ತಮ್ಮನ್ನು ಇ ಮಟ್ಟಕ್ಕೆ ತಂದಿದೆ ಎಂದರು.

ಶ್ರಾವಣಿ ಅವರ ತಂದೆ ಶಿವಕುಮಾರ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ ಚಲನಚಿತ್ರಗಳಲ್ಲಿ ಅಭಿನುಸುವ ಅವಕಾಶ ತಮಗೆ ಬಂದಿದ್ದು ಮನೆಯ ಉದ್ಯೋಗ ಬಿಟ್ಟು ಹೋಗುವುದು ಕಷ್ಟವಾಗಿತ್ತು. ಆದರೆ ತಾವು ಕಂಡ ಕನಸನ್ನು ಮಗಳು ನನಸಾಗಿಸಿದ್ದಾಳೆ ಎಂದರು.

ಅನ್ನಪೂರ್ಣ ತಾಳೂಕರ, ರೇಖಾ ಮೊರಕರ, ನಿರ್ಮಲಾ ಕಾಮಕರ ಮುಂತಾದವರು ಮಾತನಾಡಿ ಶ್ರಾವಣಿ ಅವರಿಗೆ ಶುಭ ಕೋರಿದರು. ರಾಧಾ ಸ್ವಾಗತಿಸಿದರು. ಗಾಯತ್ರಿ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು. ಕಾರ್ಯ ಕಾರ‍್ಯಕ್ರಮವನ್ನು ಕೃಷ್ಣರಾಜೇಂದ್ರ ತಾಳೂಕರ ಕಾರ್ಯಕ್ರಮ ಆಯೋಜಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ