ಆ್ಯಪ್ನಗರ

ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಿದ ವಸ್ತು ಪ್ರದರ್ಶನ

ತೆಲಸಂಗ: ಸಮೀಪದ ಕೊಕಟನೂರ ಗ್ರಾಮದ ಶಾಂತಾಬಾಯಿ ದೇಶಪಾಂಡೆ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಇಂಟೆಗ್ರಿಟಿ ಎಕ್ಸಿಬಿಷನ್‌ ವಿದ್ಯಾರ್ಥಿಗಳಲ್ಲಿ ಹಬ್ಬದ ಕಳೆ ತಂದಿತ್ತು...

Vijaya Karnataka 19 Feb 2019, 5:00 am
ತೆಲಸಂಗ : ಸಮೀಪದ ಕೊಕಟನೂರ ಗ್ರಾಮದ ಶಾಂತಾಬಾಯಿ ದೇಶಪಾಂಡೆ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಇಂಟೆಗ್ರಿಟಿ ಎಕ್ಸಿಬಿಷನ್‌ ವಿದ್ಯಾರ್ಥಿಗಳಲ್ಲಿ ಹಬ್ಬದ ಕಳೆ ತಂದಿತ್ತು. ತಾವು ಸಿದ್ಧಗೊಳಿಸಿದ್ದ ಮಾದರಿಗಳ ಬಗ್ಗೆ ಹೆಮ್ಮೆಯಿಂದ ಮಾಹಿತಿ ನೀಡಿದ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
Vijaya Karnataka Web BEL-18TELSANG1


ಸಮಾಜ ವಿಜ್ಞಾನ, ಸಮಾಜ, ಕನ್ನಡ ಭಾಷೆ, ಗಣಿತ ಸೇರಿದಂತೆ ವಿವಿಧ ಪಠ್ಯ ವಿಷಯಗಳ ಮಾದರಿಯನ್ನು ಸಿದ್ಧಗೊಳಿಸಿ ಪ್ರದರ್ಶನಕ್ಕೆ ಇಟ್ಟಿದ್ದಷ್ಟೇ ಅಲ್ಲ, ವ್ಯಾಪಾರಿ ಮಳಿಗೆ, ಭಾರತೀಯ ಪುರಾತನ ವೈಭವ ಪ್ರದರ್ಶನ, ಮಕ್ಕಳ ವೇಷಭೂಷಣ ಸೇರಿದಂತೆ ವೈವಿಧ್ಯತೆಯಿಂದ ಕೂಡಿದ ಪ್ರದರ್ಶನ ಪಾಲಕರಿಗೆ ಹಾಗೂ ಬೇರೆ ಶಾಲೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ದೊಡ್ಡ ಮಾರ್ಕೆಟ್‌ನ ಅನುಭವ ನೀಡಿತು.

ಕಾಡು, ಪರಿಸರ, ಟ್ರಾಫಿಕ್‌ ಸಮಸ್ಯೆ, ಬಾವಿಗಳು, ಕಾಡಿನ ಬೆಳವಣಿಗೆ, ಪರಿಸರ ನಾಶದಿಂದಾಗುವ ಜಾಗತಿಕ ತಾಪಮಾನ, ಉದ್ಯಾನ, ಸಾರ್ವಜನಿಕ ಆಸ್ತಿಯ ರಕ್ಷ ಣೆ, ರಾಷ್ಟ್ರೀಯ ಚಿನ್ನೆಗಳು, ವಾಟರ್‌ ಹೀಟರ್‌, ಸಂಚಾರಿ ನಿಯಮಗಳು, ಹುಡಗು ಜಲಾಂತರಗಾಮಿ, ಥರ್ಮಲ್‌ ಘಟಕ, ಏರ್‌ ಕೂಲರ್‌, ಮನೆ ಬಳಕೆ ವಸ್ತುಗಳು, ಮೊಳಕೆ ಕಾಳುಗಳ ಉಪಯೋಗ ಮತ್ತು ಪೌಷ್ಟಿಕತೆ, ಮರಗಿಡಗಳು, ಮನುಷ್ಯನ ರಕ್ತ ಸಂಚಾರ, ದೇಹದ ವಿವಿಧ ಅಂಗಗಳ ರಚನೆ, ಅಂಗಗಳ ಕೆಲಸ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಿವಿಧ ವ್ಯಾಪಾರ, ಹಳ್ಳಿ ರೈತರ ಜೀವನ ಪದ್ಧತಿಯ ಮಾದರಿ ಪ್ರದರ್ಶನ ಒಂದಕ್ಕಿಂತ ಒಂದು ಗಮನ ಸೆಳೆದವು.

ಸಮಕಾಲೀನ ವಿಷಯಗಳ ಅಡಿ ರೂಪಿಸಿದ್ದ ಮಾದರಿಗಳು, ಪಠ್ಯ ವಸ್ತುವಿನಲ್ಲಿರುವ ವಿಷಯವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಅನುಕೂಲವಾಯಿತು ಎನ್ನುವ ಅಭಿಪ್ರಾಯವನ್ನು ಹಲವು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ್ಯ ಉದಯಕುಮಾರ ಎ.ಎನ್‌. ಮಾತನಾಡಿ, ಮಕ್ಕಳು ಚಿತ್ರ ರೂಪದಲ್ಲಿ ಹಿಡಿದಿಟ್ಟ ಪ್ರದರ್ಶನ ನಿಜಕ್ಕೂ ಮಾದರಿಯಾಗಿದೆ. ಮಕ್ಕಳ ಶೈಕ್ಷ ಣಿಕ ಬೆಳವಣಿಗೆಗೆ ಪೂರಕವಾಗುವುದಲ್ಲದೆ ವ್ಯಾಪಾರ ವ್ಯವಹಾರಿಕ ಜ್ಞಾನ ಪಡೆಯುವ ಕ್ರಿಯಾಶೀಲತೆ ಮಕ್ಕಳಲ್ಲಿ ಮೂಡಿರುವುದು ಸಂತಸದಾಯಕ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ