ಮಹೇಶ ವಿಜಾಪುರ ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ತಾಪ ತುಸು ಹೆಚ್ಚಾಗಿಯೇ ಕಂಡುಬರುತ್ತಿದ್ದು ಸಾರ್ವಜನಿಕರು ಸೂರ್ಯನ ಪ್ರಖರ ಕಿರಣಗಳ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನೀರಿನ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಎಲ್ಲ ಕಾಲಮಾನದಲ್ಲಿ ಎಲ್ಲರಿಗೂ ಒಗ್ಗುವ ಹವಾಗುಣ ಹೊಂದಿರುವ ಬೆಳಗಾವಿಯಲ್ಲಿ ಈಗ ಬಿಸಿಲು ಜೋರು ಪಡೆದುಕೊಳ್ಳುತ್ತಿದೆ. ನಿಗದಿತಾವಧಿಗೂ ಮೊದಲೇ ಜಿಲ್ಲೆಗೆ ಕಾಲಿಟ್ಟಿರುವ ಬೇಸಿಗೆಯ ಬಿಸಿ ಹೈದ್ರಾಬಾದ್ ಕರ್ನಾಟಕದ ಉಷ್ಣಾಂಶದ ಹತ್ತಿರ ಸುಳಿದಾಡುತ್ತಿದೆ. ಮುಂದಿನ ಒಂದು ವಾರದಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಸಿಲಿನ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನಿವಾರ್ಯ.
ಸಾಮಾನ್ಯವಾಗಿ ಮಾರ್ಚ್ ಮಧ್ಯದಲ್ಲಿ ಕಾಲಿಡಬೇಕಿದ್ದ ಬೇಸಿಗೆ ಈ ವರ್ಷ ಫೆಬ್ರವರಿ ಅಂತ್ಯಕ್ಕೇ ಕಾಣಿಸಿಕೊಂಡಿದೆ. ಅಷ್ಟೆ ಅಲ್ಲದೆ, ಕಳೆದೊಂದು ವಾರದಿಂದ ಉಷ್ಣಾಂಶದಲ್ಲಿ ಇಳಿಕೆ ಕಾಣದಿರುವುದು ಜನರಲ್ಲಿ ಆರೋಗ್ಯ ದೃಷ್ಟಿಯಿಂದ ಒಂದಿಷ್ಟು ಆತಂಕ ಮೂಡಿಸಿದೆ. ಸದ್ಯ 36 ಡಿಗ್ರಿ ಸೆಲ್ಸಿಯಸ್ ಮೇಲಿರುವ ತಾಪಮಾನ ಮುಂದಿನ ಒಂದು ವಾರದಲ್ಲಿ 39 ಡಿಗ್ರಿ ಸೆಲ್ಸಿಯಸ್ವರೆಗೂ ಹೆಚ್ಚುವ ಸಾಧ್ಯತೆ ಇರುವುದರಿಂದ ಬೆಳಗಾವಿಗರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಹೆಚ್ಚುತ್ತಿರುವ ಉಷ್ಣಾಂಶ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದೆ.
ನೀರಿನ ಅಂಶ ಕಡಿಮೆಯಾಗುವುದು ಮತ್ತು ತಕ್ಷಣ ವಾತಾವರಣ ಬದಲಾವಣೆಯಿಂದ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ನಿಶ್ಶಕ್ತಿ ಎದ್ದು ಕಾಣುತ್ತಿದೆ. ಇದೇ ಕಾರಣದಿಂದ ಕಳೆದೊಂದು ವಾರದಿಂದ ಜ್ವರ, ಕೆಮ್ಮು, ಮೈಕೈ ನೋವು ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ ಎನ್ನುತ್ತಾರೆ ವೈದ್ಯರು. ಆದ್ದರಿಂದ ಪ್ರತಿಯೊಬ್ಬರೂ ದೇಹದಲ್ಲಿ ನೀರಿನ ಅಂಶ ಹೆಚ್ಚು ಕಾಯ್ದುಕೊಳ್ಳಬೇಕಿದ್ದು, ಮನೆ, ಕಚೇರಿಗಳಲ್ಲಿ ಕುಡಿಯುವ ನೀರಿಗೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಮನೆಯಿಂದ ಹೊರಗೆ ಬಂದರೆ ಮಕ್ಕಳಾದಿಯಾಗಿ ಎಲ್ಲರೂ ಕುಡಿಯುವ ನೀರಿನ ಬಾಟಲಿ ಜತೆಗೆ ಕೊಂಡೊಯ್ಯುವುದನ್ನು ಮರೆಯಬಾರದು. ವಾತಾವರಣ ಬದಲಾವಣೆಯಿಂದಾಗುವ ಪರಿಣಾಮ ಎದುರಿಸಲು ನಮ್ಮಲ್ಲಿನ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳಬೇಕಿದೆ. ಹಾಗಾಗಿ ತರಕಾರಿ ಮತ್ತು ಹಣ್ಣುಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಿತ್ಯ ಸೇವನೆ ಆಹಾರದಲ್ಲಿ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನೇ ಅವಲಂಬಿಸಬೇಕು ಎನ್ನುತ್ತಾರೆ ವೈದ್ಯರು.
''ಇತರೆ ದಿನಗಳಿಗಿಂತ ಬೇಸಿಗೆಯಲ್ಲಿ ದೇಹದ ನೀರಿನಾಂಶ ಗಣನೀಯವಾಗಿ ಕಡಿಮೆಯಾಗುವುದರಿಂದ ಮೂತ್ರ ಸೋಂಕು ರೋಗ ಪ್ರಕರಣ ಅಧಿಕ. ಕಿಡ್ನಿ ಸ್ಟೋನ್ನಂಥ ಕಾಯಿಲೆಗಳೂ ಬರಬಹುದು. ಬೀದಿ ಬದಿ ಆಹಾರ ಪದಾರ್ಥಗಳ ಸೇವನೆಯಿಂದ ಜಾಂಡೀಸ್ ರೋಗ ತಗುಲಬಹುದು. ಅದರಲ್ಲೂ ಕರಿದ ಪದಾರ್ಥಗಳ ಸೇವನೆಗೆ ನಿಷೇಧ ಹೇರುವುದೇ ಸೂಕ್ತ'', ಎನ್ನುತ್ತಾರೆ ನ್ಯೂರಾಲಾಜಿಸ್ಟ್ ಡಾ.ಕಮಲಾಕರ ಅಜ್ರೇಕರ್.
ಗ್ರಾಮೀಣದಲ್ಲಿ ಹೆಚ್ಚು : ಜಿಲ್ಲೆಯಲ್ಲಿ ಅಥಣಿ, ರಾಯಬಾಗ, ಚಿಕ್ಕೋಡಿ, ಸವದತ್ತಿ ಭಾಗದಲ್ಲಿ ಬಿಸಿಲು ಹೆಚ್ಚುತ್ತಿದೆ. ಬೆಳಗಾವಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬಿಸಿಲಿನ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಸಮದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೆಲ್ಲರಿಗೂ ಒಆರ್ಎಸ್ ಪ್ಯಾಕೆಟ್ಗಳನ್ನು ವಿತರಿಸಲಾಗಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಸಮೀಕ್ಷಾಧಿಕಾರಿ ಡಾ.ಬಿ.ಐ.ತುಕ್ಕಾರ ಹೇಳಿದ್ದಾರೆ.
ಸೋಂಕು ರೋಗ ಸಾಧ್ಯತೆ :
''ಸದ್ಯ ಜಿಲ್ಲೆಯಲ್ಲಿ ಸೋಂಕು ರೋಗದ ಆತಂಕ ಎದುರಾಗಿಲ್ಲವಾದರೂ ಬಿಸಿಲು ಇನ್ನಷ್ಟು ಹೆಚ್ಚಿದರೆ ಅದೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚು ನೀರು ಕುಡಿದು ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸಾಧ್ಯವಾದಷ್ಟು ಮಧ್ಯಾಹ್ನ 12 ಗಂಟೆಯಿಂದ 3.30ರ ವರೆಗಿನ ಸಮಯದಲ್ಲಿ ಬಿಸಿಲಿಗೆ ಮೈಯೊಡ್ಡದಿರುವುದು ಉತ್ತಮ'', ಎನ್ನುತ್ತಾರೆ ಜಿಲ್ಲಾ ಸಮೀಕ್ಷಾಧಿಕಾರಿ ಡಾ.ಬಿ.ಐ.ತುಕ್ಕಾರ.
ಜಿಲ್ಲೆಯ ಉಷ್ಣಾಂಶ (ಡಿ.ಸೆಲ್ಸಿಯಸ್)
ಮಾ.9 -36
ಮಾ.10 -36.2
ಮಾ. 11 -36.4
ಮಾ. 12 -35
ಮಾ.13 -36
ಮಾ. 14 -36
ಮಾ.15 -37
ಮಾ. 16 37
ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಬಿಳಿ ಬಣ್ಣದ ತೆಳುವಾದ ಬಟ್ಟೆಗಳನ್ನು ತೊಡುವುದು ಉತ್ತಮ. ಹೆಚ್ಚು ನೀರು, ಆಹಾರದಲ್ಲಿ ದ್ರವ ಪದಾರ್ಥ, ತರಕಾರಿ, ಹಣ್ಣು ಸೇವನೆ ಜತೆಗೆ ಸರಳ ವ್ಯಾಯಾಮ ದಿನಚರಿಯಾಗಿರಲಿ.
- ಡಾ.ಕಮಲಾಕರ ಅಜ್ರೇಕರ್. ನ್ಯೂರಾಲಾಜಿಸ್ಟ್. ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲಿನ ತಾಪ ತುಸು ಹೆಚ್ಚಾಗಿಯೇ ಕಂಡುಬರುತ್ತಿದ್ದು ಸಾರ್ವಜನಿಕರು ಸೂರ್ಯನ ಪ್ರಖರ ಕಿರಣಗಳ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ನೀರಿನ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಎಲ್ಲ ಕಾಲಮಾನದಲ್ಲಿ ಎಲ್ಲರಿಗೂ ಒಗ್ಗುವ ಹವಾಗುಣ ಹೊಂದಿರುವ ಬೆಳಗಾವಿಯಲ್ಲಿ ಈಗ ಬಿಸಿಲು ಜೋರು ಪಡೆದುಕೊಳ್ಳುತ್ತಿದೆ. ನಿಗದಿತಾವಧಿಗೂ ಮೊದಲೇ ಜಿಲ್ಲೆಗೆ ಕಾಲಿಟ್ಟಿರುವ ಬೇಸಿಗೆಯ ಬಿಸಿ ಹೈದ್ರಾಬಾದ್ ಕರ್ನಾಟಕದ ಉಷ್ಣಾಂಶದ ಹತ್ತಿರ ಸುಳಿದಾಡುತ್ತಿದೆ. ಮುಂದಿನ ಒಂದು ವಾರದಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಸಿಲಿನ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನಿವಾರ್ಯ.
ಸಾಮಾನ್ಯವಾಗಿ ಮಾರ್ಚ್ ಮಧ್ಯದಲ್ಲಿ ಕಾಲಿಡಬೇಕಿದ್ದ ಬೇಸಿಗೆ ಈ ವರ್ಷ ಫೆಬ್ರವರಿ ಅಂತ್ಯಕ್ಕೇ ಕಾಣಿಸಿಕೊಂಡಿದೆ. ಅಷ್ಟೆ ಅಲ್ಲದೆ, ಕಳೆದೊಂದು ವಾರದಿಂದ ಉಷ್ಣಾಂಶದಲ್ಲಿ ಇಳಿಕೆ ಕಾಣದಿರುವುದು ಜನರಲ್ಲಿ ಆರೋಗ್ಯ ದೃಷ್ಟಿಯಿಂದ ಒಂದಿಷ್ಟು ಆತಂಕ ಮೂಡಿಸಿದೆ. ಸದ್ಯ 36 ಡಿಗ್ರಿ ಸೆಲ್ಸಿಯಸ್ ಮೇಲಿರುವ ತಾಪಮಾನ ಮುಂದಿನ ಒಂದು ವಾರದಲ್ಲಿ 39 ಡಿಗ್ರಿ ಸೆಲ್ಸಿಯಸ್ವರೆಗೂ ಹೆಚ್ಚುವ ಸಾಧ್ಯತೆ ಇರುವುದರಿಂದ ಬೆಳಗಾವಿಗರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಹೆಚ್ಚುತ್ತಿರುವ ಉಷ್ಣಾಂಶ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಸುಲಭವಾಗಿ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದೆ.
ನೀರಿನ ಅಂಶ ಕಡಿಮೆಯಾಗುವುದು ಮತ್ತು ತಕ್ಷಣ ವಾತಾವರಣ ಬದಲಾವಣೆಯಿಂದ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ನಿಶ್ಶಕ್ತಿ ಎದ್ದು ಕಾಣುತ್ತಿದೆ. ಇದೇ ಕಾರಣದಿಂದ ಕಳೆದೊಂದು ವಾರದಿಂದ ಜ್ವರ, ಕೆಮ್ಮು, ಮೈಕೈ ನೋವು ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ ಎನ್ನುತ್ತಾರೆ ವೈದ್ಯರು. ಆದ್ದರಿಂದ ಪ್ರತಿಯೊಬ್ಬರೂ ದೇಹದಲ್ಲಿ ನೀರಿನ ಅಂಶ ಹೆಚ್ಚು ಕಾಯ್ದುಕೊಳ್ಳಬೇಕಿದ್ದು, ಮನೆ, ಕಚೇರಿಗಳಲ್ಲಿ ಕುಡಿಯುವ ನೀರಿಗೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. ಮನೆಯಿಂದ ಹೊರಗೆ ಬಂದರೆ ಮಕ್ಕಳಾದಿಯಾಗಿ ಎಲ್ಲರೂ ಕುಡಿಯುವ ನೀರಿನ ಬಾಟಲಿ ಜತೆಗೆ ಕೊಂಡೊಯ್ಯುವುದನ್ನು ಮರೆಯಬಾರದು. ವಾತಾವರಣ ಬದಲಾವಣೆಯಿಂದಾಗುವ ಪರಿಣಾಮ ಎದುರಿಸಲು ನಮ್ಮಲ್ಲಿನ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳಬೇಕಿದೆ. ಹಾಗಾಗಿ ತರಕಾರಿ ಮತ್ತು ಹಣ್ಣುಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಿತ್ಯ ಸೇವನೆ ಆಹಾರದಲ್ಲಿ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನೇ ಅವಲಂಬಿಸಬೇಕು ಎನ್ನುತ್ತಾರೆ ವೈದ್ಯರು.
''ಇತರೆ ದಿನಗಳಿಗಿಂತ ಬೇಸಿಗೆಯಲ್ಲಿ ದೇಹದ ನೀರಿನಾಂಶ ಗಣನೀಯವಾಗಿ ಕಡಿಮೆಯಾಗುವುದರಿಂದ ಮೂತ್ರ ಸೋಂಕು ರೋಗ ಪ್ರಕರಣ ಅಧಿಕ. ಕಿಡ್ನಿ ಸ್ಟೋನ್ನಂಥ ಕಾಯಿಲೆಗಳೂ ಬರಬಹುದು. ಬೀದಿ ಬದಿ ಆಹಾರ ಪದಾರ್ಥಗಳ ಸೇವನೆಯಿಂದ ಜಾಂಡೀಸ್ ರೋಗ ತಗುಲಬಹುದು. ಅದರಲ್ಲೂ ಕರಿದ ಪದಾರ್ಥಗಳ ಸೇವನೆಗೆ ನಿಷೇಧ ಹೇರುವುದೇ ಸೂಕ್ತ'', ಎನ್ನುತ್ತಾರೆ ನ್ಯೂರಾಲಾಜಿಸ್ಟ್ ಡಾ.ಕಮಲಾಕರ ಅಜ್ರೇಕರ್.
ಗ್ರಾಮೀಣದಲ್ಲಿ ಹೆಚ್ಚು : ಜಿಲ್ಲೆಯಲ್ಲಿ ಅಥಣಿ, ರಾಯಬಾಗ, ಚಿಕ್ಕೋಡಿ, ಸವದತ್ತಿ ಭಾಗದಲ್ಲಿ ಬಿಸಿಲು ಹೆಚ್ಚುತ್ತಿದೆ. ಬೆಳಗಾವಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬಿಸಿಲಿನ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಸಮದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೆಲ್ಲರಿಗೂ ಒಆರ್ಎಸ್ ಪ್ಯಾಕೆಟ್ಗಳನ್ನು ವಿತರಿಸಲಾಗಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಸಮೀಕ್ಷಾಧಿಕಾರಿ ಡಾ.ಬಿ.ಐ.ತುಕ್ಕಾರ ಹೇಳಿದ್ದಾರೆ.
ಸೋಂಕು ರೋಗ ಸಾಧ್ಯತೆ :
''ಸದ್ಯ ಜಿಲ್ಲೆಯಲ್ಲಿ ಸೋಂಕು ರೋಗದ ಆತಂಕ ಎದುರಾಗಿಲ್ಲವಾದರೂ ಬಿಸಿಲು ಇನ್ನಷ್ಟು ಹೆಚ್ಚಿದರೆ ಅದೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚು ನೀರು ಕುಡಿದು ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸಾಧ್ಯವಾದಷ್ಟು ಮಧ್ಯಾಹ್ನ 12 ಗಂಟೆಯಿಂದ 3.30ರ ವರೆಗಿನ ಸಮಯದಲ್ಲಿ ಬಿಸಿಲಿಗೆ ಮೈಯೊಡ್ಡದಿರುವುದು ಉತ್ತಮ'', ಎನ್ನುತ್ತಾರೆ ಜಿಲ್ಲಾ ಸಮೀಕ್ಷಾಧಿಕಾರಿ ಡಾ.ಬಿ.ಐ.ತುಕ್ಕಾರ.
ಜಿಲ್ಲೆಯ ಉಷ್ಣಾಂಶ (ಡಿ.ಸೆಲ್ಸಿಯಸ್)
ಮಾ.9 -36
ಮಾ.10 -36.2
ಮಾ. 11 -36.4
ಮಾ. 12 -35
ಮಾ.13 -36
ಮಾ. 14 -36
ಮಾ.15 -37
ಮಾ. 16 37
ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಬಿಳಿ ಬಣ್ಣದ ತೆಳುವಾದ ಬಟ್ಟೆಗಳನ್ನು ತೊಡುವುದು ಉತ್ತಮ. ಹೆಚ್ಚು ನೀರು, ಆಹಾರದಲ್ಲಿ ದ್ರವ ಪದಾರ್ಥ, ತರಕಾರಿ, ಹಣ್ಣು ಸೇವನೆ ಜತೆಗೆ ಸರಳ ವ್ಯಾಯಾಮ ದಿನಚರಿಯಾಗಿರಲಿ.
- ಡಾ.ಕಮಲಾಕರ ಅಜ್ರೇಕರ್. ನ್ಯೂರಾಲಾಜಿಸ್ಟ್. ಬೆಳಗಾವಿ