ಆ್ಯಪ್ನಗರ

ಜಡಿಸಿದ್ದೇಶ್ವರ ಶ್ರೀಗಳ ತಪೋನುಷ್ಠಾನ ಮುಕ್ತಾಯ

ದೊಡವಾಡ: ವರುಣನ ಕೃಪೆಗಾಗಿ ಗ್ರಾಮದ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಗಳು ನಿರಂತರ ಒಂಭತ್ತು ದಿನಗಳ ಕಾಲ ಕೈಗೊಂಡಿದ್ದ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ ...

Vijaya Karnataka 17 Jul 2019, 5:00 am
ದೊಡವಾಡ : ವರುಣನ ಕೃಪೆಗಾಗಿ ಗ್ರಾಮದ ಹಿರೇಮಠದ ಜಡಿಸಿದ್ದೇಶ್ವರ ಸ್ವಾಮಿಗಳು ನಿರಂತರ ಒಂಭತ್ತು ದಿನಗಳ ಕಾಲ ಕೈಗೊಂಡಿದ್ದ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
Vijaya Karnataka Web BEL-16 DWDP 1


ಈ ಪ್ರಯುಕ್ತ ಸ್ಥಳೀಯ ಐತಿಹಾಸಿಕ ಮಹಾಬಳೇಶ್ವ ದೇವಸ್ಥಾನದಲ್ಲಿ ಚಂಡಿಕಾ ಹೋಮ, ನವದುರ್ಗಾ ಯಾಗ, ದುರ್ಗಾ ಪಾರಾಯಣ ಕಾರ್ಯಕ್ರಮಗಳು ನೆರವೇರಿದವು.

ರಾಯಚೂರು ಗುರಗುಂಟಾ ಅಮರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗಂಗಾಧರಯ್ಯ ಶಾಸ್ತ್ರೀ ನೇತೃತ್ವ ಹಾಗೂ ತುರಮರಿಯ ಮಹಾಂತೇಶ ಶಾಸ್ತ್ರಿ, ಶಕ್ತಿಪ್ರಸಾದ ಶಾಸ್ತ್ರಿ, ಶ್ರೀಶೈಲ ಶಾಸ್ತ್ರಿಗಳ ನೇತೃತ್ವದಲ್ಲಿ ನಾನಾ ಧಾರ್ಮಿಕ ಪೂಜಾವಿಧಿ ವಿಧಾನಗಳ ಜರುಗಿದವು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯರು, ''ಎಲ್ಲೆಡೆ ಉತ್ತಮ ಮಳೆ ಸುರಿದು, ಸಮೃದ್ಧ ಬೆಳೆ ಬಂದು, ಎಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಬದುಕುವಂತಾಗಬೇಕು ಎಂಬ ಉದ್ದೇಶದಿಂದ ನಿರಂತರ ಒಂಭತ್ತು ದಿನಗಳಿಂದ ತ್ರಿಕಾಲ ಪೂಜಾ ಕಾರ್ಯಕ್ರಮ, ದುರ್ಗಾ ಪಾರಾಯಣ, ದುರ್ಗಾಶಪ್ತಶತಿ, ದೇವಿ ಪುರಾಣ ಪಠಣ ಹಾಗೂ ಕಠಿಣ ತಪೋನುಷ್ಠಾನ ಕೈಗೊಳ್ಳಲಾಗಿತ್ತು. ಇದರ ಫಲವಾಗಿ ವರುಣ ದೇವ ಕಣ್ಣು ತೆರೆದಿದ್ದು ಸಂತಸ ಮೂಡಿಸಿದೆ'' ಎಂದರು.

ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು. ಗ್ರಾಮದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ