ಆ್ಯಪ್ನಗರ

ರಾಷ್ಟ್ರಸಂತ ಚಿನ್ಮಯಸಾಗರಜೀ ಮುನಿಗಳಿಗೆ ಕೃತಜ್ಞತಾ ಸಮಾರಂಭ

ಕಾಗವಾಡ: ಕಾಡಿನಲ್ಲಿ ಆದಿವಾಸಿ ಜನರೊಂದಿಗೆ ವಾಸವಿದ್ದು ಸಮಾಜದಲ್ಲಿ ವ್ಯಸನಮುಕ್ತಿಗಾಗಿ ...

Vijaya Karnataka 23 Sep 2019, 5:00 am
ಕಾಗವಾಡ: ಕಾಡಿನಲ್ಲಿಆದಿವಾಸಿ ಜನರೊಂದಿಗೆ ವಾಸವಿದ್ದು ಸಮಾಜದಲ್ಲಿವ್ಯಸನಮುಕ್ತಿಗಾಗಿ ಸುದೀರ್ಘ ಸೇವೆ ಸಲ್ಲಿಸಿದ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜ (ಜಂಗಲವಾಲೆ ಬಾಬಾ) ಅವರಿಗೆ ಶೇಡಬಾಳದ ಶಾಂತಿಸಾಗರ ಜೈನ ಆಶ್ರಮದಲ್ಲಿಕೃತಜ್ಞತೆ ಸಲ್ಲಿಸುವ ವಿಶೇಷ ಕಾರ್ಯಕ್ರಮ ಜರುಗಿತು.
Vijaya Karnataka Web 22 KAGWAD 2 NEWS PHOTO_53


ಶೇಡಬಾಳದ ವೀರ ಸೇವಾದಳ ಮಧ್ಯವರ್ತಿ ಸಮಿತಿ ಹಾಗೂ ದಕ್ಷಿಣ ಭಾರತ ಜೈನ ಸಭೆಯ ಸಂಯುಕ್ತಾಶ್ರಯದಲ್ಲಿನಡೆದ ಕಾರ್ಯಕ್ರಮದಲ್ಲಿಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಮಾತನಾಡಿ, ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸುಪುತ್ರರಾದ ಮುನಿಗಳು, ಮುನಿದೀಕ್ಷೆ ಪಡೆದ ಬಳಿಕ ಜೀವನದುದ್ದಕ್ಕೂ ಬರಿಗಾಲಿನಲ್ಲಿದೇಶವ್ಯಾಪಿ ಸಂಚಾರ ಮಾಡಿ ವ್ಯಸನಮುಕ್ತಿ, ಜೈನ ಸಮಾಜದ ಅಹಿಂಸಾ ತತ್ವಗಳನ್ನು ಸಾರಿ ಸಮಾಜದ ಅಭಿವೃದ್ಧಿಗೆ ಅಪಾರ ಸೇವೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಆದಿವಾಸಿ ಸಮಾಜದ ಅನೇಕ ಕುಟುಂಬಗಳನ್ನು ದುಷ್ಚಟಗಳಿಂದ ಮುಕ್ತಿಗೊಳಿಸಿದ್ದಾರೆ. ಇವರ ಸೇವೆ ಗುರುತಿಸಿದ ಅಮೆರಿಕಾದ ವಿಶ್ವವಿದ್ಯಾಲಯವೊಂದು ಇವರಿಗೆ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಇದು ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ವೀರ ಸೇವಾದಳ ಮಧ್ಯವರ್ತಿ ಸಮಿತಿ ಅಧ್ಯಕ್ಷ ಶಶಿಕಾಂತ ರಾಜೋಬಾ ಹಾಗೂ ಮಾಜಿ ಅಧ್ಯಕ್ಷ ಸಂಜಯ ಗೋಪಾಲಕರ ಅವರು, ಮುನಿಗಳ ಸಮಾಜ ಸೇವೆಯನ್ನು ಕೊಂಡಾಡಿದರು.

ಜೈನ ಸಭೆಯ ಡಿ.ಎ. ಪಾಟೀಲ, ಸಾಗರ ಚೌಗುಲೆ, ಸಾಂಗಲಿಯ ಮಾಜಿ ಮಹಾಪೌರ ಸುರೇಶ ಪಾಟೀಲ, ಶ್ರೇಣಿಕ ಅಕ್ಕೋಳೆ, ಶಾಂತಿನಾಥ ದೇಸಾಯಿ, ಡಾ. ಅಶೋಕ ಪಾಟೀಲ, ಎನ್‌.ಜೆ. ಪಾಟೀಲ, ಪ್ರೊ. ಕಲ್ಲಪ್ಪಾ ಸಮಾಜ ಕಾರ್ಯಕ್ರಮದಲ್ಲಿಮಾತನಾಡಿದರು.

ಆಶ್ರಯದಾತರಿಗೆ ಸತ್ಕಾರ:
ಛತ್ತೀಸಗಡದಲ್ಲಿಕಳೆದ 25 ವರ್ಷಗಳಿಂದ ಜಂಗಲವಾಲೆ ಬಾಬಾ ಅವರಿಗೆ ಆಶ್ರಯ ನೀಡಿದ ಪ್ರಕಾಶ ಹಾಗೂ ಸುಮನಲತಾ ಮೋದಿ ದಂಪತಿಯನ್ನು ಸತ್ಕರಿಸಲಾಯಿತು. ಇದೇ ವೇಳೆ ಸುಮನಲತಾ ಅವರು ಮುನಿಗಳ ಬಗ್ಗೆ ಬರೆದ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ಅಣ್ಣಾಗೌಡಾ ಪಾಟೀಲ, ಡಾ. ಬಿ.ಬಿ. ಪಾಟೀಲ, ಶ್ರೇಣಿಕ್‌ ಅಕ್ಕೋಳೆ, ಅರುಣ ಗಣೇಶವಾಡಿ, ಪ್ರಕಾಶ ಯಂದಗೌಡರ, ಭರತೇಶ ನಾಂದ್ರೆ ಸೇರಿದಂತೆ ಅನೇಕ ಶ್ರಾವಕ, ಶ್ರಾವಿಕಿಯರು ಪಾಲ್ಗೊಂಡಿದ್ದರು.

ಆಹಾರ ತ್ಯಜಿಸಿದ ಮುನಿಗಳು:
ಈಗಾಗಲೇ ಆಹಾರ ತ್ಯಜಿಸಿರುವ ಚಿನ್ಮಯಸಾಗರಜೀ ಮುನಿಗಳು 3 ದಿನಗಳಿಂದ ಸ್ವಲ್ಪ ಜಲ ಸ್ವೀಕರಿಸುತ್ತಿದ್ದಾರೆ. ಇದರಿಂದ ಅಸ್ವಸ್ಥರಾಗಿದ್ದರೂ ಕಾರ್ಯಕ್ರಮಕ್ಕೆ ಆಗಮಿಸಿದ ಮುನಿಗಳು ಸತ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ''ವಿಶ್ವದಲ್ಲೇ ಶಾಂತಿಪ್ರಿಯ ಮತ್ತು ಪರೋಪಕಾರಿಯಾದ ಜೈನ ಸಮಾಜದ ಭಗವಾನ ಮಹಾವೀರರು ನೀಡಿದ ಸಂದೇಶದಂತೆ 'ನೀನು ಬದುಕು, ಇನ್ನೊಬ್ಬರನ್ನೂ ಬದುಕಲು ಬಿಡು' ಎಂಬ ನುಡಿಗಳಂತೆ ಸಮಾಜ ನನಗೆ ಈವರೆಗೂ ಗೌರವ ಸಲ್ಲಿಸುತ್ತಿದೆ'' ಎಂದು ಅವರು ಸಂತೃಪ್ತಿ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ