ಆ್ಯಪ್ನಗರ

ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರ ಬಂಧನ

ಇಚಲಕರಂಜಿ: ಇಲ್ಲಿನ ಶಿವಾಜಿ ನಗರ ಪೊಲೀಸರು ಶನಿವಾರ ಕಾಗಲ ನಗರದಲ್ಲಿ ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರನ್ನು ಬಂಧಿಸಿ ಅವರಿಂದ ಐದು ಬೈಕ್‌ಗಳನ್ನು ...

Vijaya Karnataka 24 Mar 2019, 5:00 am
ಇಚಲಕರಂಜಿ : ಇಲ್ಲಿನ ಶಿವಾಜಿ ನಗರ ಪೊಲೀಸರು ಶನಿವಾರ ಕಾಗಲ ನಗರದಲ್ಲಿ ಇಬ್ಬರು ಅಂತಾರಾಜ್ಯ ಬೈಕ್‌ ಕಳ್ಳರನ್ನು ಬಂಧಿಸಿ ಅವರಿಂದ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web BEL-23ICH6


ಮೂಲತಃ ಗೋಕಾಕ ತಾಲೂಕಿನ ಬೆಳವಂಕಿ ಗ್ರಾಮದ ಶಿವಾ ಉರ್ಫ್‌ ಕಿಶನ್‌ ಗುಂಡಪ್ಪ ಪಾಟೀಲ (19) ಹಾಗೂ ಕೊಲ್ಲಾಪುರ ಸಮೀಪದ ಚಿಂಚವಾಡ ಗ್ರಾಮದ ಜುನೇದ ಮುಜಾವರ (19) ಬಂಧಿತರು. ಇವರಿಂದ ಎರಡು ಹಿರೋಹೋಂಡಾ ಬೈಕ್‌, ತಲಾ ಒಂದು ಹೋಂಡಾ ಆ್ಯಕ್ಟಿವಾ, ಸ್ಪ್ಲೆಂಡರ್‌ ಪ್ಲಸ್‌ ಹಾಗೂ ಸುಜುಕಿ ಬೈಕ್‌ ವಶ ಪಡಿಸಿಕೊಳ್ಳಲಾಗಿದೆ.

ಈ ಕುರಿತು ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪವಿಭಾಗೀಯ ಪೊಲೀಸ್‌ ಅಧಿಕಾರಿ ಗಣೇಶ ಬಿರಾದಾರ, ಪೊಲೀಸ್‌ ನಿರೀಕ್ಷ ಕ ತಾನಾಜಿ ಸಾವಂತ, ಸಹಾಯಕ ಪೊಲೀಸ್‌ ನಿರೀಕ್ಷ ಕ ಸತೀಶ ಶಿಂಧೆ, ಅಮೋಲ ಮಾಳಿ, ರಣಜೀತ ತಿಪ್ಪೆ, ಹವಾಲ್ದಾರ ಮಹೇಶ ಕೋರೆ, ವೈಭವ ದಡ್ಡಿಕರ, ಶಹಾಜಹಾನ ಕನವಾಡೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬಸವೇಶ್ವರ ಪೊಲೀಸ್‌ ಠಾಣೆ ನಿಪ್ಪಾಣಿ, ಗಾಂಧಿನಗರ ಪೊಲೀಸ್‌ ಠಾಣೆಗಳಲ್ಲೂ ಕಳ್ಳತನ ಪ್ರಕರಣ ದಾಖಲಾಗಿವೆ.

ವಾರದ ಹಿಂದಷ್ಟೇ ಇಬ್ಬರ ಬಂಧನ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಅಧೀಕ್ಷ ಕರ ಆದೇಶದಂತೆ ಇಚಲಕರಂಜಿ ನಗರದಲ್ಲಿ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಕಳೆದ ವಾರ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಹಾರಾಜಾ ಹೋಟೆಲ್‌ ಹತ್ತಿರ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಕಾಗಲ್‌ನ ರಫೀಕ ಶಿರಡೋಣೆ (35) ಹಾಗೂ ನಿಪ್ಪಾಣಿಯ ಅಲೀ ಹಬೀಬ ಶೇಖ (28) ಎಂಬುವರನ್ನು ಬಂಧಿಸಿ, 4.11 ಕೆಜಿ ಗಾಂಜಾ ಹಾಗೂ ಒಂದು ಸುಜುಕಿ ಬೈಕ್‌ ವಶಪಡಿಸಿಕೊಂಡಿದ್ದರು. ನಂತರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಸದರಿ ಬೈಕ್‌ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಶನಿವಾರ ಇನ್ನಿಬ್ಬರು ಬೈಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ