ಆ್ಯಪ್ನಗರ

23ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ: ರಮೇಶ್‌ ಜಾರಕಿಹೊಳಿ

ಗೋಕಾಕ: ಕೆಲ ದಿನಗಳಿಂದ ಮೌನವಾಗಿದ್ದ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಗುರುವಾರ ಮತ್ತೆ ...

Vijaya Karnataka 3 May 2019, 5:00 am
ಗೋಕಾಕ : ಕೆಲ ದಿನಗಳಿಂದ ಮೌನವಾಗಿದ್ದ ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಗುರುವಾರ ಮತ್ತೆ ಗುಡುಗಿದ್ದಾರೆ. ಪುತ್ರ ಅಮರನಾಥ್‌ ಜಿಲ್ಲಾ ಕೆಎಂಎಫ್‌ಗೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರಾಜ್ಯದ ಮೈತ್ರಿ ಸರಕಾರ ಶೀಘ್ರ ಪತನವಾಗುವ ಸುಳಿವು ನೀಡಿದ್ದಾರೆ.
Vijaya Karnataka Web BEL-2GOK8A


ಸಹೋದರ ಬಾಲಚಂದ್ರ ಜಾರಕಿಹೊಳಿ ಸದ್ಯಕ್ಕೆ ಸುಮ್ಮನಿರುವಂತೆ ಸಲಹೆ ನೀಡಿದ್ದರೂ ರಮೇಶ್‌ ಸಭೆ ನಡೆಸಿದ್ದು, ತಮ್ಮ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಈ ಸಮಾರಂಭದಲ್ಲಿ ಅಥಣಿ ಶಾಸಕ ಮಹೇಶ ಕುಮಠಳ್ಳಿ ಕೂಡ ಭಾಗವಹಿಸಿದ್ದು, ತಾವು ಏಕಾಂಗಿ ಅಲ್ಲ ಎಂಬ ಸಂದೇಶವನ್ನೂ ಈ ಮೂಲಕ ರಮೇಶ್‌ ರವಾನಿಸಿದ್ದಾರೆ.

''ಕೆಂಪು ದೀಪದ ಕಾರಿನಲ್ಲಿ ಓಡಾಡುತ್ತಿರುವವರು ಮಾಜಿ ಆಗುವ ಕಾಲ ದೂರವಿಲ್ಲ. ನಮಗೆ ದೊಡ್ಡ ಮಟ್ಟದ ಅಧಿಕಾರ ಸಿಗಲಿದೆ. ಬೆನ್ನಿಗೆ ಚೂರಿ ಹಾಕುವವರನ್ನು ನಂಬಬೇಡಿ. ಮೇ 23ರ ನಂತರ ಮಹತ್ತರ ಬದಲಾವಣೆಯಾಗಲಿದೆ. ನೀವು ನಮ್ಮನ್ನು ನಂಬಿ'', ಎಂದು ಸಭೆಯಲ್ಲಿ ರಮೇಶ್‌ ಹೇಳಿದ್ದಾರೆಂದು ತಿಳಿದುಬಂದಿದೆ.

ಸಭೆಯ ನಂತರ 'ವಿಕ'ದೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ''ನಾನು ಮತದಾನದ ದಿನದಂದು ಯಾವುದೇ ಕ್ಷ ಣದಲ್ಲಿ ರಾಜೀನಾಮೆ ನೀಡಬಹುದು ಎಂದು ಹೇಳಿದ್ದೆ. ಅಂದೇ ನೀಡುತ್ತೇನೆ ಎಂದಿರಲಿಲ್ಲ. ಆದರೆ, ರಾಜೀನಾಮೆ ನೀಡುವುದಾಗಿ ಹೇಳಿ ಹೋದವರು ಈಗ ಮಾತು ಬದಲಿಸಿದ್ದಾರೆಂದು ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು. ''ಮೇ 23ರ ವರೆಗೂ ನೋ ಕಮೆಂಟ್ಸ್‌, 25ರಂದು ಎಲ್ಲ ಪಿಕ್ಚರ್‌ ಕ್ಲಿಯರ್‌'' ಎಂದರು.

ಬಿಜೆಪಿಗೆ ಹೋಗಲು ಸತೀಶ್‌, ಲಖನ್‌ ಪ್ರೇರೇಪಿಸಿದ್ದಾರೆ ಎಂಬ ರಮೇಶ್‌ ಹೇಳಿಕೆ ಸರಿಯಲ್ಲ. ಎಂದೋ ನಡೆದ ಘಟನೆಗಳನ್ನು ರಮೇಶ್‌ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮಂತ್ರಿಗಿರಿಗಾಗಿ ಏನು ಬೇಕಾದರೂ ಮಾಡಲಾಗುತ್ತದೆಯೇ?
-ಸತೀಶ್‌ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ, ಬೆಳಗಾವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ