ಆ್ಯಪ್ನಗರ

ಕೈಗಳಿಲ್ಲದಿದ್ದರೂ ಎಲ್ಲರಂತೆ ಜೀವಿಸುತ್ತಿರುವ ಬಾಲಕ

ನೇಸರಗಿ: ಹುಟ್ಟಿನಿಂದಲೇ ಎರಡೂ ಕೈಗಳನ್ನು ...

Vijaya Karnataka 8 Jun 2019, 5:00 am
ನೇಸರಗಿ : ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡ ಬಾಲಕನೊಬ್ಬ ಕಷ್ಟವಾದರೂ ಸಹ ಎಲ್ಲರಂತೆ ಕೆಲಸ ಮಾಡುತ್ತಾ, ಶಾಲೆಯಲ್ಲಿ ಓದು, ಬರಹದ ಜತೆ ಸ್ವತಃ ತಾನೇ ಊಟ ಮಾಡುತ್ತಾ ಗಮನ ಸೆಳೆದಿದ್ದಾನೆ. ಕೈಗಳಿಲ್ಲದ್ದರೂ ತನಗೇನೂ ಆಗಿಲ್ಲ ಎನ್ನುವಂತೆ ಎಲ್ಲರೂ ಅಚ್ಚರಿ ಮೂಡಿಸುವಂತೆ ಮಾದರಿಯಾಗಿ ಬಾಳುತ್ತಿದ್ದಾನೆ.
Vijaya Karnataka Web BEL-7NSG1B


ಬೈಲಹೊಂಗಲ ತಾಲೂಕಿನ ಹಣಮನಹಟ್ಟಿ ಗ್ರಾಮದ ಕಿರಣ ಫಕೀರಪ್ಪ ಕ್ಯಾಮನಕೋಲ ಎಂಬ ಈ ಬಾಲಕ ಅದೇ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ಕಲಿಯುತ್ತಿದ್ದಾನೆ. ಹುಟ್ಟಿನಿಂದಲೇ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ದಾನೆ. ಮೂಲತಃ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ಕಿರಣ ಬಾಲ್ಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ಕಾರಣ ತಾಯಿಯ ತವರೂರಾದ ಹಣಮನಹಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ.

ವಿಶೇಷಚೇತನನಾದರೂ ಶಾಲೆಯಲ್ಲಿ ಓದಿನಲ್ಲಿ ಬುದ್ಧಿವಂತನಾಗಿದ್ದಾನೆ. ಕೈಗಳಿಲ್ಲದಿರುವುದರಿಂದ ಕಾಲಿನಿಂದ ಮುದ್ದಾದ ಅಕ್ಷ ರಗಳನ್ನು ಬರೆದು ಅಚ್ಚರಿ ಮೂಡಿಸುತ್ತಾನೆ. ಪ್ರತಿದಿನ ಶಾಲೆಯಲ್ಲಿ ತನ್ನ ಮೊಂಡು ಕೈಗಳಿಂದಲೇ ಬಿಸಿಯೂಟ ಮಾಡುತ್ತಾನೆ. ಶಾಲೆಯ ಪುಸ್ತಕ, ಚೀಲವನ್ನು ಯಾರ ನೆರವಿಲ್ಲದೆ ತೆಗೆದುಕೊಳ್ಳುತ್ತಾನೆ.

ಮನೆಯಲ್ಲಿಯ ಕೆಲಸಗಳನ್ನು ಸಹ ಉತ್ತಮವಾಗಿ ನಿರ್ವಹಿಸುತ್ತಾನೆ. ಯಾರ ನೆರವಿಲ್ಲದೇ ಸ್ನಾನ ಮಾಡುವುದು, ನೀರು ತುಂಬುವುದು, ಕಟ್ಟಿಗೆ ಮುರಿದುಕೊಡುವುದು, ಕಸ ಹೊಡೆಯುವುದು, ದನಗಳನ್ನು ಮೇಯಿಸುವ ಕೆಲಸ ಮಾಡುತ್ತಾನೆ.

ನೆರವಿಗೆ ಮೊರೆ: ಬಾಲಕನ ಕುಟುಂಬದವರು ಅತಿ ಬಡವರಾಗಿದ್ದು, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಯೂ ಉತ್ತಮವಾಗಿಲ್ಲ. ಈತನ ಇನ್ನೊಬ್ಬ ಸಹೋದರ ಶಂಕರ 2ನೇ ತರಗತಿ ಕಲಿಯುತ್ತಿದ್ದಾನೆ. ಈ ಬಡ ಕುಟುಂಬಕ್ಕೆ ಧನಸಹಾಯ ಮಾಡಲು ಇಚ್ಛಿಸುವವರು ಬ್ಯಾಂಕ್‌ ಅಕೌಂಟ್‌ ನಂ.05252210081410, ಸಿಂಡಿಕೇಟ್‌ ಬ್ಯಾಂಕ್‌ ದೇಶನೂರ, ಬೈಲಹೊಂಗಲ ಇಲ್ಲಿಗೆ ಹಣ ಕಳುಹಿಸಬಹುದು.

ಬಾಲಕ ಕಿರಣ ಕ್ಯಾಮನಕೋಲ ವಿಶೇಷಚೇತನನಾದರೂ ಓದಿನಲ್ಲಿ ಚುರುಕಾಗಿದ್ದಾನೆ. ಮೊದಲು ಮೊಂಡು ಕೈಗಳಿಂದ ಬರೆಯಲು ಪ್ರಯತ್ನಿಸುತ್ತಿದ್ದ. ಕಾಲಿನಿಂದ ಬರೆಯುವುದನ್ನು ರೂಢಿ ಮಾಡಿದ್ದರಿಂದ ಉತ್ತಮ ರೀತಿಯಲ್ಲಿ ಬರೆಯುತ್ತಿದ್ದಾನೆ.
-ಆರ್‌.ಆರ್‌. ಪಾಟೀಲ, ಮುಖ್ಯೋಪಾಧ್ಯಾಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಣಮನಹಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ