ಆ್ಯಪ್ನಗರ

ಸ್ಪರ್ಧಾ ಮನೋಭಾವ ಭಾರತೀಯರ ಗುಣ

ನಿಪ್ಪಾಣಿ ''ಇಂದಿನ ಹೈಟೆಕ್‌ ಯುಗದಲ್ಲಿ ...

Vijaya Karnataka 22 May 2018, 5:00 am
ನಿಪ್ಪಾಣಿ: ''ಇಂದಿನ ಹೈಟೆಕ್‌ ಯುಗದಲ್ಲಿ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳಿವೆ. ಭಾರತೀಯರ ಗುಣದಲ್ಲೇ ಸಂವಹನ ಕಲೆ, ಸ್ಪರ್ಧಾ ಮನೋಭಾವ ಇರುವುದರಿಂದ ನಾವು ಸಂಪನ್ಮೂಲ ವ್ಯಕ್ತಿಗಳಾಗಿ ಗುರುತಿಸಿಕೊಂಡಿದ್ದೇವೆ'' ಎಂದು ಬೆಂಗಳೂರಿನ ಡೇರ್‌ ಟು ಡ್ರಿಮ್‌ ಕಂಪೆನಿಯ ಸಿಇಓ ರಾಘವೇಂದ್ರ ಎನ್‌. ಹೇಳಿದರು.
Vijaya Karnataka Web BLG-2105-2-52-21LBS7


ಚಿಕ್ಕೋಡಿಯ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜು ಹಾಗೂ ''ವಿಜಯ ಕರ್ನಾಟಕ'' ಮಾಧ್ಯಮ ಸಹಯೋಗದಲ್ಲಿ ನಗರದ ಜಿ.ಐ ಬಾಗೇವಾಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 'ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ'ದಲ್ಲಿ ಅವರು ಮಾತನಾಡಿದರು.

ಜಗತ್ತಿನ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ಭಾರತೀಯರು ಸಿಇಒಗಳಾಗಿರುವುದನ್ನು ಕಾಣುತ್ತೇವೆ. ವಿದ್ಯಾರ್ಥಿಗಳು ತಮ್ಮ ಬಲ ಮತ್ತು ದುರ್ಬಲ ಮನಗಂಡು ವೃತ್ತಿಯ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ವ್ಯಕ್ತಿತ್ವಕ್ಕೆ ಹೊಂದುವಂತಹ ಕಾಲೇಜಿನ ಆಯ್ಕೆ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷ ಣ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಪರಿಪೂರ್ಣ ಜ್ಞಾನ , ಇಂಗ್ಲಿಷ್‌ ಭಾಷೆಯಲ್ಲಿ ಸಮರ್ಥವಾದ ಮಾತುಗಾರಿಕೆಯ ಮನೋಬಲ ಹೊಂದಿರಬೇಕಾದ ಅವಶ್ಯಕತೆ ಇದೆ ಎಂದರು.

ಪ್ರಾಚಾರ್ಯ ಡಾ.ಸಿದ್ದರಾಮಪ್ಪ ಇಟ್ಟಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಆವಿಷ್ಕಾರಗಳಿಂದಲೇ ಸಮಾಜದಲ್ಲಿ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳು ವೃತ್ತಿ ಶಿಕ್ಷ ಣ ಆಯ್ಕೆ ಸಂದರ್ಭದಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರವನ್ನು ಸೂಕ್ಷ ್ಮತೆ ಹಾಗೂ ಜಾಣತನದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರೊ.ಎಂ.ಬಿ. ಕೋಥಳಿ, ಸುನಿಲ ಪಾಟೀಲ, ಪ್ರೊ. ಜಯಶ್ರೀ ರೂಡಗಿ, ಪ್ರೊ ದರ್ಶನ ಬಿಳ್ಳೂರ, ಪ್ರೊ.ಸ್ನೇಹಲ್‌ ತಾಳಿಕೊಟೆ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ