ಆ್ಯಪ್ನಗರ

ಕನ್ನಡ ನಾಡಿಗೆ ಜೈನರ ಕೊಡುಗೆ ಅಪಾರ

ಬೆಳಗಾವಿ : ಕನ್ನಡ ನಾಡಿಗೆ ಜೈನರ ಕೊಡುಗೆ ಅನುಪಮವಾಗಿದೆ ಎಂದು ಮಹೇಶ ಪದವಿ ಪೂರ್ವ ಕಾಲೇಜಿನ ...

Vijaya Karnataka 4 Feb 2019, 5:00 am
ಬೆಳಗಾವಿ : ಕನ್ನಡ ನಾಡಿಗೆ ಜೈನರ ಕೊಡುಗೆ ಅನುಪಮವಾಗಿದೆ ಎಂದು ಮಹೇಶ ಪದವಿ ಪೂರ್ವ ಕಾಲೇಜಿನ ಪ್ರಾ. ಎಂ.ವಿ. ಭಟ್‌ ಹೇಳಿದರು.
Vijaya Karnataka Web BLG-0302-2-52-3RAJU-5


ಇಲ್ಲಿನ ವಡಗಾವಿ ಯಳ್ಳೂರು ರಸ್ತೆಯಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ದಕ್ಷಿಣ ಕನ್ನಡ ದಿಗಂಬರ ಜೈನ ಮೈತ್ರಿಕೂಟದ 9ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇಲ್ಲಿನ ಸಾಹಿತ್ಯ, ಶಿಲ್ಪಕಲೆ, ಸಾಂಸ್ಕೃತಿಕ ಒಳಗೊಂಡು ಎಲ್ಲ ಕ್ಷೇತ್ರಗಳಿಗೂ ಜೈನರ ಕೊಡುಗೆ ಇದೆ. ಪಂಪ, ರನ್ನರಂಥ ದಿಗ್ಗಜರು ಸ್ಮರಣೀಯರಾಗಿದ್ದಾರೆ. ಇಂದಿನ ಯುವ ಪೀಳಿಗೆಗೆ ಜೈನ ಧರ್ಮದ ತತ್ವಗಳು ಮಾರ್ಗದರ್ಶಿಯಾಗಿವೆ. ದಕ್ಷಿಣ ಕನ್ನಡದ ಜೈನರು ಎಲ್ಲ ರಂಗಗಳಲ್ಲಿಯೂ ಸಾಧನೆ ಗೈದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈತ್ರಿಕೂಟದ ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಶಿವಾಜಿ ಕಾಗಣಿಕರ, ಪರಿಸರ ಉಳಿಸುವಲ್ಲಿ ಯುವಕರು ಹೆಚ್ಚಿನ ಗಮನ ಹರಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯನ್ನು ಸಾಧ್ಯವಾದಷ್ಟು ದೂರವಿಡಬೇಕು. ನಮ್ಮ ಮಾತೃಭಾಷೆ ಸೇರಿದಂತೆ ನೆರೆ ಹೊರೆಯ ಭಾಷೆಗಳನ್ನು ಪ್ರೀತಿಸಿ ಅವುಗಳ ಬಗ್ಗೆ ಅಭಿಮಾನ ಹೊಂದಬೇಕು. ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶದ ಏಳ್ಗೆಗೆ ದುಡಿಯಬೇಕು. ಅಲ್ಲಿನ ಅನಕ್ಷ ರಸ್ಥರಿಗೆ ಅಕ್ಷ ರ ಜ್ಞಾನ ನೀಡುವ ಕೆಲಸ ಆಗಬೇಕು ಎಂದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತೆ ಮೂಡಬಿದಿರೆಯ ಪಂಚಮಿ ಮಾರೂರು ಮಾತನಾಡಿ, ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು ಎಂದರು.

ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಹಿರಿಯ ಸದಸ್ಯ ಚಂದ್ರಶೇಖರ ಭಂಡಾರಿ ದಂಪತಿ ಒಳಗೊಂಡು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸತ್ಕರಿಸಲಾಯಿತು. ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಅಧ್ಯಕ್ಷ ತೆ ವಹಿಸಿದ್ದರು. ಪಂಚಮಿ ಮಾರೂರು ಅವರಿಂದ ಯಕ್ಷ ಗಾನ ಪ್ರದರ್ಶನ ನಡೆಯಿತು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜಿನವಾಣಿ ಉಪಾಧ್ಯೆ, ರತ್ನಾ ಅಜ್ರಿ, ವಿನೋದಾ ಬೋಗಾರ ಪ್ರಾರ್ಥಿಸಿದರು. ಮೈತ್ರಿಕೂಟದ ಸ್ಥಾಪಕ ಅಧ್ಯಕ್ಷ ಬಿ. ಗುಣಪಾಲ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಿತಕುಮಾರ ಸ್ವಾಗತಿಸಿದರು. ನಿತ್ಯಾ ಜೈನ ವಾರ್ಷಿಕ ವರದಿ ವಾಚಿಸಿದರು. ಮುನಿರಾಜ ಜೈನ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ