ಆ್ಯಪ್ನಗರ

ನ್ಯಾಯ ಒದಗಿಸಲು ಮೃತ ರೈತನ ಪತ್ನಿ ಆಗ್ರಹ

ಕಾಗವಾಡ : ಕೈಗಡದ ರೂಪದಲ್ಲಿ ಪಡೆದ ಹಣವನ್ನು ಬಡ್ಡಿ ಸಮೇತ ...

Vijaya Karnataka 17 Feb 2019, 5:00 am
ಕಾಗವಾಡ : ಕೈಗಡದ ರೂಪದಲ್ಲಿ ಪಡೆದ ಹಣವನ್ನು ಬಡ್ಡಿ ಸಮೇತ ಮರಳಿಸಿದರೂ, ಹಣ ಕೊಟ್ಟವರು ಜಮೀನಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಲೋಕೂರ ಗ್ರಾಮದ ರೈತ ಹನಮಂತ ಬಿರೋಳೆ ಅವರ ಪತ್ನಿ ಪತ್ನಿ ಜಯಶ್ರೀ, ನ್ಯಾಯ ಕೋರಿ ತಮ್ಮ ಮಕ್ಕಳೊಂದಿಗೆ ತೆರಳಿ ಕಾಗವಾಡ ತಹಸೀಲ್ದಾರ್‌ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಅರ್ಪಿಸಿದರು.
Vijaya Karnataka Web BEL-16 KAGWAD 1 NEWS PHOTO


''ಈ ಪ್ರಕರಣದಿಂದ ನನಗೆ ದಾರಿ ತಿಳಿಯದಂತಾಗಿದೆ. ಎರಡು ಮಕ್ಕಳು, ಅತ್ತೆ, ಮೈದುನ, ಆತನ ಮಕ್ಕಳನ್ನು ತೆಗೆದುಕೊಂಡು ಜೀವನ ಸಾಗಿಸುವುದು ತಮಗೆ ಅಸಾಧ್ಯವಾಗುತ್ತಿದೆ. ಇದರಿಂದ ಮಾನಸಿಕ ಹಿಂಸೆಯಾಗಿ ತಾವೂ ಆತ್ಮಹತ್ಯೆ ಹಾದಿ ತುಳಿಯುವ ಅನಿವಾರ್ಯತೆ ಉಂಟಾಗಿದ್ದು ನ್ಯಾಯ ಒದಗಿಸಬೇಕು'', ಎಂದು ಅವರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಪ್ರಮೀಳಾ ದೇಶಪಾಂಡೆ, ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನ್ಯಾಯ ನೀಡುವುದಾಗಿ ಭರವಸೆ ನೀಡಿದರು. ತಹಸೀಲ್ದಾರರೊಂದಿಗೆ ಗ್ರೇಡ್‌-2 ತಹಸೀಲ್ದಾರ್‌ ವಿಜಯ ಚೌಗುಲೆ, ಎಂ.ಎಸ್‌. ಪಾಟೀಲ, ಜಯಶ್ರೀ ಬಿರೋಳೆ ಇವರ ಮಾವ, ಮಾಜಿ ಸೈನಿಕ ರಾಮು ಪೂಜಾರಿ, ಮೃತ ರೈತನ ಸಹೋದರರಾದ ಕುಮಾರ ಬಿರೋಳೆ, ಮಾರುತಿ ಬಿರೋಳೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ